(5) ದೇವರಹೊಸಹಳ್ಳಿ ಆಂಜನೇಯ (ಕೆಂಗಲ್ಲು ಸಮೀಪ)
ಪರಿಪಾಹಿ ಸಂಜೀವರಾಯ ಜೀಯ
ಕರವ ಮುಗಿವೆ ವಜ್ರಕಾಯ ಪ
ವರ ಜಾಜಿ ಕೇಶವ ಪ್ರೇಮ
ಧಾಮ ಅ.ಪ
ರಾಮಾವತಾರದಿ ಹರಿಗೇ ನೀನು
ನೇಮ ಸೇವಕನಾದೆ ಭರದೇ
ಆ ಮಹೀಜಾತೆಗೆ ಮುದ್ರೆ
ಸ್ವಾಮಿ ಪೇಳ್ದಂತೆ ನೀನು ಯಿತ್ತೆ 1
ಅಂಜನದೇವಿಕುಮಾರ ಶ್ರೀಮ
ದಾಂಜನೇಯ ಗಂಭೀರ
ಸಂಜೀವನಾದ್ರಿಯ ತಂದೆ ಪ್ರ
ಭಂಜನ ಸೌಮಿತ್ರಿಗಂದೇ 2
ರಾಮನಾಮ ಧ್ಯಾನನಿರತ ಸುಖ
ಶ್ಯಾಮನ ಕ್ಷೇಮ ಸುವಾರ್ತ
ವ್ಯೋಮದಿ ಭಕುತಗೆ ಪೇಳ್ದೆ ಸುಪಿ
ತಾಮಹ ಪದವಿಯ ಪಡೆದೆ 3
ವ್ಯಾಸಯತೀಂದ್ರ ಕರಪೂಜ್ಯಾ ನಿತ್ಯ
ದಾಸರಪೊರೆವ ಸಾಮ್ರಾಜ್ಯ
ದೋಷ ಶೋಷಣ ಪ್ರಭಾವ ಗುಣ
ಭೂಷಣ ಸಜ್ಜನ ಜೀವ 4
ಭೂತ ಪ್ರೇತ ಬ್ರಹ್ಮ ಪಿಶಾಚಂಗ
ಳಾತುರದಿಂ ಬಾಧಿತರು
ಖ್ಯಾತಿಯ ಮಾರುತಿ ನಾಮಾಮೃತವ
ಪ್ರೀತಿಯಿಂ ಸವಿವರೋ ಭೀಮಾ 4
ಹಿಂದಣ ಜನ್ಮದ ಪಾಪದಿಂದ
ನೊಂದರು ಪ್ರಾರ್ಥಿಸಿ ತಂದೆ
ಭಾವದುರಿತಂಗಳನಂದು ನಿ
ರ್ಬಂಧಿಸಿ ಕಳೆಯುವೆ ಬಂಧು 5