(ನಾಟಿ ಅಗ್ರಹಾರದ ಶ್ರೀರಾಮ)
ಕಂಡಿರೆ ನಾಟಿ ಕೋದಂಡ ರಾಮನ ಪದ್ಮ-
ಜಾಂಡದಿ ನಾಯಕನಾ
ಕಟಕ ಕಿರೀಟಧಾರಿ ಮಾ-
ರ್ತಾಂಡ ಕೋಟಿಪ್ರಭನಾ ಪ.
ಭೂತಳದೊಳಗೆ ವಿಖ್ಯಾತರಾಗಿಹ ರಘು-
ನಾಥ ಒಡೆಯರ ಮೇಲೆ
ಪ್ರೀತಿಯಿಂದಲಿ ಬಂದ ಪವಮಾನವಂದಿತ-
ನೀತನು ನಿಜ ಜನರ
ಬೀತಿಯ ಬಿಡಿಸುವೆನೆಂದು ಬಿಲ್ಲಂಬುಗ-
ಳಾಂತು ಕರಾಬ್ಜದಲಿ
ಪಾತಕಗಳ ಪರಿಹಾರಗೈದರಿಗಳ
ಘಾತಿಸುವನು ಜವದಿ 1
ಕಡು ಪರಾಕ್ರಮಿ ವಾಯಿನು ಧಿಕ್ಕರಿಸಿ ಕೈ
ಪಿಡಿದಂತೆ ರವಿಜನಸು
ಬಡವರ ಭಕ್ತಿಯ ದೃಢಕೆ ಮೆಚ್ಚುತ ಜಗ-
ದೊಡೆಯನು ಸಂತಸದಿ
ಒಡೆಯ ನೀ ಸಲಹೆಂದು ವಂದಿಸಿ ತುಲಸಿಯ
ಕೊಡುವನು ಕರುಣ ಕಟಾಕ್ಷದಿ ಪುರುಷಾರ್ಥ
ತಡೆಯದೆ ತವಕದಲಿ 2
ಎರಡು ಭಾಗದಿ ಭಕ್ತ ಗರುಡ ಮಾರುತಿಯರ-
ನಿರಿಸಿ ಕೊಂಡವನುದಿನದಿ
ನಿರವಧಿ ಸೇವೆಯ ಕೈಕೊಂಡು ಜಾನಕಿ-
ವರನಿಹನೀಪುರದಿ
ಸಿರಿವರ ವೆಂಕಟಗಿರಿ ರಾಜನಿವನೆಂದು
ನೆರೆ ನಂಬಿ ಸೇವಿಪರಾ
ಪರಿಕಿಸಿ ತನ್ನಯ ಚರಣ ಸೇವೆಯನಿತ್ತು
ಪೊರೆವನು ಕರುಣಾಕರ 3