ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ
ಸಾನುರಾಗದಲಿ ಸ್ಮರಿಸುವರ
ಭಕುತಿಯನ್ನು ಕೊಡುತಿಹರು ಪ
ವರಕಾಶ್ಯೊಪಸದ್ಗೋತ್ರದಿ ಲಿಂಗಸು -
ಗುರು ಕರಣಿಕರಲಿ ಸಂಜನಿಸಿ
ತಿರುಕಾರ್ಯರ ಪರತನುಭವಯೋಗೀಂ -
ದ್ರರು ಯಂಬ ಸುನಾಮದಿ ಕರಿಸಿ 1
ಕೆಲವುಕಾಲ ಲೌಕಿಕವನುಸರಿಸುತ
ಲಲನೆ ತರಳರಿಂದೊಡಗೂಡಿ
ಬಲು ವಿನಯದಿ ಸಾಧುಗಳರ್ಚಿಸಿ ನಿ -
ರ್ಮಲ ವೈರಾಗ್ಯ ಮನದಿ ಕೂಡಿ2
ಮೂಜಗದೊಳು ಪ್ರಖ್ಯಾತರೆನಿಸಿದ
ಶ್ರೀ ಜಗನ್ನಾಥಾರ್ಯರ ಪಾದಾಂ -
ಭೋಜ ಭಜಿಸಿ ಪ್ರಾಣೇಶಾಂಕಿತವನು
ತಾಜವದಿಂದವರಲಿಪಡೆದ 3
ಶ್ರೀಶಪಾದಯುಗ್ಮಗಳಲಿ ಸದ್ರತಿ
ದಾಸಜನಗಳಲಿ ಸದ್ಭಕುತಿ
ಹೇಸಿಭವದ ಸುಖದಾಸೆ ಜರಿದು ಸಂ -
ತೋಷದಿ ಧರಿಸಿಹ ಸುವಿರಕುತಿ 4
ನೇಮದಿ ಯಮನಿಯಮವ ವಹಿಸಿ
ತಾ ಮುದದಲಿ ನಲಿಯುತ ಕೀರ್ತಿಸುತಿಹ
ಶ್ರೀ ಮನೋಹರನ ಸುಗುಣರಾಶಿ 5
ಪರಿಪರಿ ಹರಿಕಥೆವರ ಪ್ರಮೇಯಗಳ
ಸರ್ವಜ್ಞ್ಞರ ಉಕ್ತ್ಯನುಸರಿಸಿ
ವಿರಚಿಸಿ ಹರಿಮಂದಿರದ ಸುಪಥ ಪಾ -
ಮರರಿಗೆ ಸೌಕರ್ಯವಗೈಸಿ 6
ವರದೆಂದ್ರರ ಪದಸರಸಿಜ ಸೇವಿಸಿ
ಹರುಷದಲವರ ಕರುಣ ಪಡೆದ
ವರವೃಂದಾವನ ಸಂಸ್ಥಾಪಿಸಿ
ಪರಿಪರಿಯಿಂದಲಿಯಾರಾಧಿಸಿದ7
ಜ್ಞಾನದಿಲಯವನು ಚಿಂತಿಸುತಾ ಚಿತ್ರ
ಬಾನುಸಪ್ತಮಿ ಯಾಶ್ವಿಜಶುದ್ಧ
ಜಾನಕಿ ಪತಿಪದ ಧೇನಿಸಿಹರಿಪುರ
ಕೀನರ ದೇಹ ಜರಿದು ಸಾರ್ದ 8
ಪರಮಭಾಗವತರೆನಿಸುವರಿವರನ
ವರ ತನದ ಸುಮಾಲಿಕೆ ಸತತ
ಸ್ಮರಿಸುವ ಭಕುತರ ಪುರುಷಾರ್ಥಗಳನು
ವರದೇಶವಿಠಲನ ಕೊಡುವ ತ್ವರಿತ 9