(ಸರಸ್ವತೀ ಪ್ರಾರ್ಥನೆ)
ಏನೇ ಸರಸ್ವತಿಯಮ್ಮಾ ಬಹು
ಮಾನದಿ ಪಾಲಿಸು ನಮ್ಮಾ
ಆ ನಳಿನಜ ಚತುರಾನನನೊಲಿಸಿದ
ಶ್ರೀನಿವಾಸನ ಪರಮಾನುರಾಗದ ಸೊಸೆ ಪ.
ಮೂಢತನವನೆಲ್ಲ ಕಳಿಯೆ ದಯ
ಮಾಡಿ ನೀ ಮನಸಿಗೆ ಹೊಳಿಯೆ
ಬಾಡದ ಪದ್ಮದ ಕಳೆಯೆ ಮನೋ
ರೂಢ ಮಲವ ಬೇಗ ತೊಳಿಯೆ
ಆಡುವ ಮಾತುಗಳೆಲ್ಲವು ಕೃಷ್ಣನ
ಪಾಡಿ ಪೊಗಳುವಂತೆ ರೂಢಿಗೊಳಿಸು ದೇವಿ 1
ರಾಜಿಕಲೌಕಿಕವಾದ ಬಹು
ಸೋಜಿಗಕರಿಪೂರ್ಣಮೋದ
ಈ ಜಗದೊಳು ಮುಖ್ಯವಾದ ಸುಗು-
ಣೋಜೊಧಾರಣ ಕಲ್ಪಭೂಜ
ಮಂದ ವೈರಿಗಳ ಸ-
ಮಾಜವ ಗೆಲಿಸುತ ರಾಜಿಸು ಮನದಲಿ 2
ಕರಣಾಭಿಮಾನಿಗಳನ್ನು ಉಪ
ಕರಣರ ಮಾಡುವದನ್ನು
ಕರುಣೀ ನೀ ಬಲ್ಲಿನ್ನು ಮುನ್ನ ಮನ
ವರತು ರಕ್ಷಿಸು ಬೇಗೆನ್ನನು
ಸರಸಿಜಾಕ್ಷ ಶೇಷಗಿರಿ ವರಪದಕಂಜ
ಸ್ಮರಣೆ ಮಾಡುವಂತೆ ಕರುಣಿಸೆನ್ನನು 3