ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತೀರ್ಥ ಗುರು ಹೃದ್ಗುಹಾಂತರ ವಾಸ ವಾಯ್ವಂತರ್ಗತ ಶ್ರೀ ಕೃಷ್ಣಯ್ಯ ಜೀಯಾ ಪ ಕಾಯೈಯ ನಿನ್ನವ ನಿವನೆಂದು ಅನುದಿನದಿ ಕಾಯ ಮನ ವಚನದಲಿ ನಿನ್ನ ನೆನವಿರಲಿ ಜೀಯಾ ಶ್ರೀ ವಿಜಯರಾಯರ ಸೇವೆ ಕಾರ್ಯಗಳಿಗಭಯವ ನಿಡೈಯಾ ಜೀಯಾ 1 ಲೌಕಿಕದಲ್ಲಿಹನೆಂದು ನಿರಾಕರಿಸದೇಲೆ ನಿನ್ನ ಏಕಾಂತ ಭಕುತಿಯನಿತ್ತು ಸಲಹೋ ಶ್ರೀ ಕಳತ್ರನೆ ಇವನ ವ್ಯಾಕುಲಗಳ ಹರಿಸಿ ಕೃಪಾಕಟಾಕ್ಷದಿ ನೋಡಿ ಕಾಯಬೇಕೈಯಾ 2 ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸು ಭಕ್ತಿಬಲಜ್ಞಾನ ಸಾಧನವನಿತ್ತು ಶಕ್ತನೆನಿಸಿಹಪರದಿ ಭಕ್ತಿನಿನ್ನೊಳು ಇರಲಿ ಮುಕ್ತರೊಡೆಯ ಕೃಷ್ಣವಿಠಲ ಶ್ರೀ ವೆಂಕಟೇಶ 3
--------------
ಕೃಷ್ಣವಿಠಲದಾಸರು
ಜಯತೀರ್ಥ ಗುರು ಹೃದ್ಗುಹಾಂತರವಾಸ ಪ ವಾಯುವಂತರ್ಗತ ಕೃಷ್ಣಯ್ಯ ಜೀಯ್ಯ ಅ.ಪ ಕಾಯಯ್ಯಇವ ನಿನ್ನವನೆಂದು ಅನುದಿನ ಕಾಯ ವಾಚದಲಿ ನಿನ್ನ ನೆನವಿರಲಿ ಜೀಯ ಶ್ರೀ ವಿಜಯರಾಯರ ಸೇವಾ ಕಾರ್ಯಗಳಿಗಭಯವ ನೀಡಯ್ಯ 1 ಲೌಕಿಕದಲ್ಲಿಹನೆಂದು ನಿರಾಕರಿಸದಲೆ ನಿನ್ನ ಏಕಾಂತ ಭಕ್ತಿಯನಿತ್ತು ಸಲಹೋ ಶ್ರೀ ಕಳತ್ರನೆ ಇವನ ವ್ಯಾಕುಲವ ಹರಿಸಿ ಕೃ ಪಾ ಕಟಾಕ್ಷದಿ ನೋಡಿ ಕಾಯಬೇಕಯ್ಯ 2 ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸೊ ಭಕ್ತಿಬಲಜ್ಞಾನ ಸಾಧನವನಿತ್ತು ಭಕ್ತವತ್ಸಲನೆಂಬೊ ಬಿರುದು ನಿನ್ನೊಳು ಇರಲಿ ಮುಕುತರೊಡೆಯ ದೇವಾ ಶ್ರೀ ವೇಂಕಟೇಶ 3
--------------
ಉರಗಾದ್ರಿವಾಸವಿಠಲದಾಸರು