ಜ್ಞಾನಕಿದೇ ನಡಿ ಕುರುಹು |
ಶ್ರೀ ರಮಾನಾಥಾಂಘ್ರಿಯ ಕಾಣುವದರಿತು ಪ
ಕೋಪ ತಾಪವ ಬಿಡಬೇಕು ಪಶ್ಚಾ |
ತ್ತಾಪದಿ ವೈರಾಗ್ಯ ಘನ ಬಲಿಬೇಕು |
ಪಾಪವಿರಹಿತಾಗಬೇಕು | ಗತಿ |
ಸೋಪಾನವಾದಾ ಶಾಂತಿಯ ಜಡಿಬೇಕು 1
ಕರುಣ ಮೂರುತಿ ಆಗಬೇಕು ಸರ್ವ |
ಧರೆಯು ಜನಕ ಪ್ರಿಯವಾಗಿರಬೇಕು |
ನೆರೆ ಲೋಭವನು ಜರಿಬೇಕು ತನ್ನ |
ತೆರನರಿ ತನ್ನವ ನೀಡಲಿಬೇಕು 2
ದುರಿತ ಭಯವ ಬಿಡಬೇಕು | ದುಃಖ |
ದುರ್ವಾಣಿಯಲಿ ತಾ ಬಳಲದಿರಬೇಕು |
ಹರಿಭಕ್ತಿ ದೃಢಗೊಳ್ಳಬೇಕು ಗುರು |
ಬೋಧ ನಿಜವೆನಬೇಕು 3