(ಶುಕಾಚಾರ್ಯರ ಸ್ತೋತ್ರ)
ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ
ಪಡದ ಮೃಡಾತ್ಮನ ಪಾಡಿ ಪ.
ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ
ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ
ಪರೀಕ್ಷಿತ ಲಾಲಿಸುವಂತೆರ-
ಮಾಲಯ ಗುಣವರುಣಾಲಯ ತಿಳಿಸಿದ 1
ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ
ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ
ದೀಪವು ತಿಮಿರವ ಕಳವಂದದಿ ನಿ-
ಲೋಪಗೊಳಿಸುವ ಪರೋಪಕಾರಿಯನು 2
ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ
ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ
ತಾಗುಬಾಗುವೊಳಗಾಗದ ತೆರದಲಿ
ನಾಗ ಗಿರೀಂದ್ರನು ನಲಿವನು ಮನದಲಿ 3