ಮಧ್ವರಾಯರ ಚರಿತೆ ಕೇಳಲು
ಶುದ್ಧವಾಯಿತು ಜನತೆ ಪ
ತಿದ್ದಿತೆಲ್ಲರ ನಡತೆ ಸುಲಭದಿ
ಲಬ್ಧವಾಯಿತು ಘನತೆ ಅ.ಪ
ಉತ್ತಮ ದಿವಿಜರ ಸತ್ಸಭೆಗಳಲಿ
ನಿತ್ಯ ಪಾಡುವ ಕಥೆ
ಮರ್ತ್ಯಲೋಕದ ಮದ ಮತ್ಸರ ರೋಗಕೆ
ಪಥ್ಯಮಾಡುವವರಿಗೆ ಉತ್ತಮವೀ ಕಥೆ 1
ಇಲ್ಲಿಯ ಜೀವನ ಅಲ್ಲಿಗೆ ಸಾಧನ
ಎಲ್ಲಿಯು ಭೇದವ ತೋರಿದರು
ಕ್ಷುಲ್ಲಕ ಮತಗಳ ಬೆಲ್ಲದ ವಚನವು
ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ 2
ಹರಿ ಗುರು ಕೃಪೆಯಿದು ಮರುದಂಶರ ಮೈ
ಮರೆಸುವ ಚರಿತೆಯು ಹರಿದುದು ಶ್ರವಣದೊಳ
ದುರಿತವು ತೊಲಗಿತು ಪರಮ ಪ್ರಸನ್ನನ
ಪರಮ ಪದದ ರುಚಿಯರಿತರು ಸುಜನರು 3