ಎಷ್ಟೋ ಅಪರಾಧಿ ಯಾವುದು
ಬಟ್ಟೆಯೋ ಕರುಣಾಬ್ಧಿ ಪ.
ದುಷ್ಟರಾರು ಜನ ಒಟ್ಟುಗೂಡಿ ಎನ್ನ
ಮೆಟ್ಟಿ ಕುಟ್ಟಿ ಪುಂಡಿಗುಟ್ಟುವರೈ ಹರಿ ಅ.ಪ.
ಲೇಶ ಪುಣ್ಯವಿಲ್ಲ ಪಾಪದ
ರಾಶಿ ಬೆಳೆಯಿತಲ್ಲ
ಆಶಾವಶ ಹರಿದಾಸನೆಂದೆನಿಸಿದೆ
ದೂಷಣ ಜನರ ಶಭಾಸಿಗೆ ಮೆಚ್ಚಿದೆ 1
ಕುಲಕಲ್ಮಷ ಬಹಳ ದೇಹದಿ
ನೆಲೆಸಿತು ಶ್ರೀಲೋಲ
ಜಲಜನಾಭ ನಿನ್ನೊಲುಮೆಯೆ ಮುಖ್ಯವು
ಕುಲಕೆಟ್ಟ ಅಜಮಿಳ ಪಾವನನಾದ 2
ಹೀನರೈವರ ಸಂಗದಿಂದಲೆ
ಹಾನಿಯಾದೆನೊ ರಂಗ
ಪ್ರಾಣವು ನಿನ್ನಾಧೀನವಾದ ಮೇಲೆ
ನೀನೆ ಗತಿ ಲಕ್ಷ್ಮೀನಾರಾಯಣ3