(ಮೂಲ್ಕಿಯ ನರಸಿಂಹ ದೇವರು)
ರಕ್ಷಿಸು ಮನದಾಪೇಕ್ಷೆಯ ಸಲಿಸುತ
ಲಕ್ಷ್ಮೀನರಹರಿ ರಾಕ್ಷಸವೈರಿ ಪ.
ಅಕ್ಷಮ ದುಶ್ಯೀಲ ದುವ್ರ್ಯಾಪಾರದಿ
ಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ.
ಉಭಯ ಶುಚಿತ್ವವು ಊರ್ಜಿತವೆನೆ ಜಗ-
ದ್ವಿಭು ವಿಶ್ವಂಭರ ವಿಬುಧಾರಾದ್ಯ
ಶುಭಮತಿ ಸಂಸ್ಥಿತಿಯಭಯವ ಪಾಲಿಸೊ
ತ್ರಿಭುವನಮೋಹನ ಪ್ರಭು ನೀನನುದಿನ1
ಸಿಂಧುಶಯನ ನಿತ್ಯಾನಂದ ಗುಣಾಬ್ಧೇ
ಹಿಂದಣ ಪಾಪವು ಮುಂದೆಸಗದ ರೀತಿ
ಮಂದರಾದ್ರಿಧರ ಮಾಮವ ದಯಾಕರ 2
ಪಾಪಾತ್ಮರಲಿ ಭೂಪಾಲಕನು ನಾ
ಶ್ರೀಪತಿ ಕರುಣದಿ ಕಾಪಾಡುವುದು
ಗೋಪೀರಂಜನ ಗೋದ್ವಿಜರಕ್ಷಣ
ಕಾಪುರುಷರ ಭಯ ನೀ ಪರಿಹರಿಸಯ್ಯ 3
ಸರ್ವೇಂದ್ರಿಯ ಬಲ ತುಷ್ಟಿ ಪುಷ್ಟಿಯಿತ್ತು
ಸರ್ವಾಂತರ್ಯದೊಳಿರುವನೆ ಸಲಹೊ
ದುರ್ವಾರಾಮಿತ ದುರ್ವಿಷಯದಿ ಬೇ-
ಸರ್ವೇನು ಪನ್ನಗಪರ್ವತವಾಸನೇ 4
ಶರಣಾಗತನಾಗಿ ಸೆರಗೊಡ್ಡಿ ಬೇಡುವೆ
ವರ ಮೂಲಿಕಪುರ ದೊರೆಯೇ
ಹರಿ ಲಕ್ಷ್ಮೀನಾರಾಯಣ ತ್ರಿಜಗ
ದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು 5