ಶುಕಮುನಿ ಕರ್ಣಾಧಾರನ ಕೂಡಿ
ಅನುಗತ ಭವಸಿಂಧು ಭಯವ ದೂಡಿ ಪ.
ಅಂತಪಾರವೆಂದಿಗಿಲ್ಲವು ನಾನಾ
ಭ್ರಾಂತಿ ಸುಳಿಗಳು ತುಂಬಿರುವವು
ಚಿಂತಾಪರಾಕ್ರಾಂತಿಯಳವು ಪೋಕ
ತಿಮಿರ ಬಾಧೆ ಬಹಳವು
ಅಂತರಂಗದಿ ಲಕ್ಷ್ಮೀಕಾಂತನೆಂಬ ನಾವೆ
ಯಂತಾದರು ತಂದು ಪಂತರಗೊಳಿಸುವ 1
ಸ್ವರ್ಗಾದಿ ಸುಖವೆಂದು ದ್ವೀಪವು ನಾನಾ
ಕರ್ಮ ಕಲಾಪವು
ನಿರ್ಗಮಗೊಳುವ ಸಂತಾಪವು ವೈರಿ
ಜನಿತ ಮತಿಲೋಪವು ಇಂತು
ದೀರ್ಘವಾದ ದುಃಖ ವರ್ಗ ತಪ್ಪಿಸಿ ಶ್ರೀ ಭೂ
ದುರ್ಗಾವರ ಸಂಸರ್ಗವಿತ್ತು ಕಾವ 2
ತಾನೆ ಕರ್ತುವೆಂದು ಪೇಳದೆ ಮೋಹ
ಧಾನೀ ಕೂಪದ ಮಧ್ಯ ಬೀಳದೆ
ಹೀನ ಕರ್ಮಗಳನ್ನು ಬೆಳಸದೆ ಸವ
ಮಾನ ಜನ ವಿರೋಧ ಮಾಡದೆ
ದೀನಬಂಧು ಸರ್ವದಾನವಾರಿ ಲಕ್ಷ್ಮಿ
ಪ್ರಾಣನಾಯಕ ವೆಂಕಟೇಶನ ನೆನೆಯಿಲಿ 3