ಬೆಟ್ಟವಿಳಿದು ಬೇಗಬಾರೊ ಜಗ-
ಜಟ್ಟಿ ಹನುಮನೆ ನಿನಗೆ ಸರಿಯಾರೊ
ಕರುಣವ ಬೀರೊ ಚರಣವ ತೋರೊ ಪ
ದುಷ್ಟದಶಕಂಠನ ಪಟ್ಟಣದಿ ರಾಮನ
ತಿಳುಹಿ ಕುಶಲವ ಪಡಿಸಿದೆ ಮುದವ 1
ವನವ ಭಂಗಿಸಿ ಬಂದು ದನುಜರ ಶಿಕ್ಷಿಸಿ
ತಾಳಿ ಚಿಂತೆಯನು ಕಂಡೆ ಸೀತೆಯನು 2
ಸೀತೆ ಕುರುಹ ರಘುನಾಥಗೆವೊಪ್ಪಿಸಿ
ಕೀರ್ತಿಯಂ ಮೆರೆದೆ ಸೇವೆಯಗೈದೆ 3
ಕ್ಷಣದಿ ಲಕ್ಷಣಗೆ ಪ್ರಾಣವನಿತ್ತೆ ಧೀರಾ
ವಜ್ರ ಶರೀರ 4
ಭರತಗೆ ತಿಳುಹಿಸಿ ಹರುಷ ಪೊಂದಿಸಿದೆ
ಹಾರ ಕೈಕೊಂಡೆ ಘಟಿಕಾದ್ರಿಯೊಳ್ನಿಂದೆ5