ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶತ್ವ್ರಾಂತಕನು ಸುಜ್ಞಾನ ಭಕ್ತಿಯೇ ಕಾಂತೆ ಜನಕಜೆಜೀವಹನುಮನು ಸುಪಥಸುಗ್ರೀವ 1 ಸಾಧನಾತ್ಮಕಕೌಶಿಕನಮಖ ಕಾದುಸಲಹಿದವಿಘ್ನವೇದು ರ್ಮೇಧೆತಾಟಕಿದುಷ್ಟಸಂಗಸುಬಾಹುಮುಖಖಳರೂ ಸಾಧರವೆವರಯಜ್ಞಗೌತಮ ಭೂದಿವಿಜಸತಿಶಾಪಮೋಕ್ಷವೆ ಶೋಧನಿಷ್ಕøತಿತಾರ್ತಿಚಾಪವಧರ್ಮವೆನಿಸುವುದು 2 ಪರುಶುರಾಮ ಸಮಾಗಮವುವಿ ಸ್ತರಿಸಿನೋಡೆಸಮತ್ವವಿಪಿನಾಂ ತರವೆಕರ್ಮಸುವೃತ್ತಿಮುನಿಗಳು ರಾವಣನತಂಗಿ ಪರಿಕಿಸಲುದುರ್ವೃತ್ತಿಗಳುತತ್ ಪರಿಜನಖರಾದಿಗಳುಭ್ರಾಂತಿಯು ನೆರೆಕನಕಮೃಗದಶವದನನಿಂದ್ರಿಯಗಳೆನಿಸುವನು 3 ಅರುಣತನಯನುಧರ್ಮನೋಡೆ ಶ ಸುರಪಸುತದುಷ್ಕರ್ಮಚಪಲವೆಕಪಿಸಮೂಹಗಳು ಹಿರಿಯಮಗನೆಸಹಾಯವಾಸೆಯೆ ಶರಧಿಲಂಕೆಯೆದೇಹಲಂಕಿನಿಯೇದುರಭಿಮಾನ 4 ಮಣಿಯೆಜ್ಞಾಪಕಸ್ವಸ್ಥಚಿತ್ತತೆ ವನವಶೋಕವುತ್ರಿಜಟೆಕನಸೇ ಘನವೆನಿಪಸಂಸ್ಕಾರದುಷ್ಕರ್ಮಾಖ್ಯವನಭಂಗಾ ದನುಜಪತಿಸುತಮುಖರವಧೆಯೇ ಮುನಿಮತವುದುರ್ವೃತ್ತಿಪರಿಹರ ವನಜಸಂಭವನಸ್ತ್ರವೇಸನ್ಮಾರ್ಗವೆನಿಸುವುದು 5 ಮಮತೆಲಂಕೆಯದಹಿಸಿಮತ್ತೆಹ ಪಮಶರಧಿ ಬಂಧನವೆಯಾಸೆನಿರೋಧನಂತರವು ಕ್ರಮದಿಧರ್ಮವಿಭೀಷಣನಸುರ ದಮನವಿಂದ್ರಿಯಜಯವುಮಿಗೆ ಹೃ ತ್ಕಮಲವೇಸಾಕೇತಪುರವು ಸಮಾಧಿಯಭಿಷೇಕಾ 6 ವಧೆಯಗೈಸಿದಕಾಲಜ್ಞಾನದಿಲವಣ ಮುಖ್ಯರನು ವಿಧವಿಧದಯಜ್ಞಗಳವಿರಚಿಸಿ ಸದಮಲಾತ್ಮನುಸಕಲರಿಂದೈ ದಿದಸಹಸ್ರಪಾದನು ಶ್ರೀಗುರುರಾಮವಿಠ್ಠಲನು 7
--------------
ಗುರುರಾಮವಿಠಲ