ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವನಜಗಂಧಿಯೆ ನಿನ್ನ ಮನದಸಂದೆಗೆವನ್ನು ಸನುಮತದಿ ಪೇಳಿನ್ನು ಮುನಿಸಿದೇನು ಚಾಡಿಮಾತನು ಕೇಳಿ ರೂಢಿಯಿಂ ಖತಿತಾಳಿ ಕಾಡುತಿಹುದೇಂ ಚಾಳಿ ರೌದ್ರಕಾಳಿ ಸೂಚನೆಯ ಕೊಡದಿಂತು ವಾಚನದಿ ಬಿರುಸಾಂತು ರಾಚುತಿರ್ಪೆಯದೇನೆ ನಾಚದಿಂತು ಮಾನವತಿನೀನೆಂದು ನಾನು ನಂಬಿರಲಿಂದು ಏನು ಮಾಡಿದೆನೆಂದು ಜರಿದೆ ಬಂದು ಸಾಕು ಸಾಕೀಬಗೆಯ ಕಠಿಣವಾಕ್ಕು ಕೋಕಿಲಾರವೆ ನಿನ್ನೊಳಿರುವ ಸೊರ್ಕು ಸಾಕುಮಾಡಿಹುದೆನ್ನ ನೋಡು ಮುನ್ನ
--------------
ನಂಜನಗೂಡು ತಿರುಮಲಾಂಬಾ