ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಮಾನ ಬೇಡಿರೋ ಪ ದುಷ್ಕರ್ಮ ತ್ಯಜಿಸಿರೋ1 ಹೆಣ್ಣು ಮಣ್ಣು ಹೊನ್ನು ಸ್ಥಿರವಿದೆನ್ನ ಬೇಡಿರೋ ನಿಜವನ್ನು ನೋಡಿರೋ2 ಈತಜಗನ್ನಾಥಸೌಖ್ಯದಾತಕಾಣಿರೋಪ್ರಖ್ಯಾತ ಕೇಳಿರೋ3 ಕಾಟಕರ್ಮಲೂಟಿಗೈವ ತೋಟಿಗಾರನ ಈ ಸಾಟಿ ಕಾಣೆ ನಾ4 ಶಿಲೆಗೆ ದಿವ್ಯ ಲಲನಾರೂಪವೊಲಿದು ಕೊಟ್ಟನ ಶಾಪವಳಿಸಿ ಬಿಟ್ಟನ 5 ಮಾನಿನಿಯಾ ಮಾನ ಜೋಪಾನಗೈದನ ಸ್ವಾಧೀನನಾದನ6 ಪಿಡಿದ ಮುನಿಯ ಬಿಡಿಸಿ ಪುಲಿಯ ಬಡಿದ ಧೀರನ ಕೈಪಿಡಿಗೆ ಬಾರನ 7 ಭುಕ್ತಿ ಮುಕ್ತಿಪಡೆವರು 8 ಶ್ರೀಧರನೆ ಜಟಿಲನೆ 9
--------------
ವೆಂಕಟವರದಾರ್ಯರು
ಯಾವಾಗ ಬರುವನಂತೆ ನಿನ್ನಯ ರಮಣ-ಗ್ಯಾವ ರೂಪವೊ ಕಾಂತೆ ಪದೇವರ ದೇವನಂತೆ ಜೀವಿಗಳೊಡೆಯನಂತೆಭಾವಜನಯ್ಯನಂತೆ ದೇವಿ ನಿನ್ನದು ಕಾಂತೆ ಅ.ಪನೀರೊಳಗಿರುವನಂತೆ ಬೆನ್ನೊಳುಘೋರಭಾರವ ತಾಳ್ದನಂತೆ ಕೋಟೆಯೊಳಗೆಕ್ರೂರದೈತ್ಯನ ಸೀಳ್ದನಂತೆಸಾರಿ ಕಂಬದಿ ಕರುಳ ಹಾರ ಧರಿಸಿರ್ದನಂತೆ 1ಬಡವ ಬ್ರಾಹ್ಮಣನಂತೆ ಹಡೆದವಳನ್ನುಕಡಿದ ಮಹಾವೀರನಂತೆಅಡವಿಯೊಳ್ಕೋಡಗಬಲದೊಡನಿರ್ಪಂತೆಪೊಡವಿಯೊಳ್ ನರನ ಬಂಡಿ ಹೊಡೆಯುವನಂತೆ 2ಬತ್ತಲೆಯಿರುವನಂತೆ ಅಲ್ಲಲ್ಲಿತೇಜಿಹತ್ತಿ ಸುತ್ತಾಡುವನಂತೆಕುತ್ತಿಗೆ ಮೇಲಣ ಕುದುರೆಯ ಮುಖವಂತೆಉತ್ತಮನಂತೆಶ್ರಿೀನಿವಾಸ ಗೋವಿಂದನಂತೆ 3
--------------
ಗೋವಿಂದದಾಸ