ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕುಂಜಾರು ದುರ್ಗಾ) ರಮೇ ರಜನೀಕರಾಭಮುಖಿ ಕ್ಷಮಿಸೆನ್ನವಗುಣವಾ ತಮೋ ನಿವಾರಿಣಿ ಪ. ಚರಣಯುಗೇ ಕರತಂದಿರಿಸಿದ 1 ಶಿರೋಹರೆ ಮನವಿರಿಸು ಕಟಾಕ್ಷದಿ 2 ಸರೋಜಭವಪುರ ಹರ ಶಕ್ರಾದಿಕ ಸುರೇಡ್ಯ ವೆಂಕಟಗಿರಿ ವರನಾ ಪುಷ್ಕಳ ವರಪ್ರದಾಯಿನಿ ಚರಂತನಾನುಗಪರಾತ್ಮದರ್ಶಿನಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ನವನೀರದ ಸುಂದರಶ್ಯಾಮಂ ಕರುಣಾಭರಣಂ ಶರಣಂ ಶರಣಂ ಪ. ರಜನೀಕರ ಚಾರುಮುಖಾಂಬುರುಹಂ ರಜನೀಚರ ರಾಜತಮೋಮಿಹಿರಂ ಅಜನೃಪಾತ್ಮಜ ಬಾಲಕಂ ರಘುನಾಯಕಂ ಅಜಸುರೇಂದ್ರ ಸುಪೂಜಿತಂ ವರಭುಜಗಭೂಷಣ ಸನ್ನುತಂ 1 ಪವನಾತ್ಮಜ ಸಂಸೇವಿತ ಚರಣಂ ಕವಿರಾಜ ಸಂಪೂಜಿತಂ ಭೂಸುರವಂದಿತಂ ಭುವನಮೋಹನವಿಗ್ರಹಂ ಶ್ರೀಮದನುಗ್ರಹಂ 2 ತರಣಿಕುಲಾಂಬುಧಿ ಚಂದ್ರಂ ಪರಮೋದಾರ ಗುಣಸಾಂದ್ರಂ ವರಶೇಷ ಗಿರೀನಿಲಯ ಆನತ ಸುರಸಮುದಾಯಂ ಕರುಣಾಸಾರಂ ವರದಾಭಯಕರಂ ಧುರಧೀರಂ ಗಂಭೀರಂ3
--------------
ನಂಜನಗೂಡು ತಿರುಮಲಾಂಬಾ
ಭಜಿಸಿರೋ ಮನದಣಿಯ ಸುಜನಾಬ್ಜ ದಿನಮಣಿಯ ಭುಜಗಾರಿಗಮನ ತಿಂಥಿಣಿಯ ಸತ್ಕಣಿಯ ಪ ರಜನೀಕರ ಗುಣಶ್ರೇಣಿ ಅಜಭವ ಸುರಾಗ್ರಣಿಯ ತ್ರಿಜಗಮೋಹನ ಮಣಿಯ ಸೊಬಗಿನ ಕಣಿಯ ಅ.ಪ ಪೊಳೆವ ಮಕುಟದ ಫಣಿಯ ತಿಲಕದಲಿ ರಂಜಿಸುವ ಪ್ರಣವ ಗೋಚರ ಸುಧಾಮಯದ ಕದಪಿನಲಿ ತೊಳಪ ಕುಂಡಲದ ನಾಸಿಕದ ಮೂಗುತಿಯೆಸೆಯೆ ಸುಲಿಪಲ್ಲ ನಗೆಮೊಗದ ಸುಲಭಸೌಂದರÀನ 1 ಪದಕ ಮಣಿಮಯ ಮೌಕ್ತಿಕದ ಹಾರ ತ್ರಿಸರ ಕಂ ಧರ ವೈಜಯಂತಿಯೊಲವಿನ ಬಾವುಲಿ ಮುದದ ಕಂಕಣ ಕರದ ಮುದ್ರೆಯೆಸೆವಾ ಬೆರಳ ಕಂಬು ಮದನಶರಧನು 2 ತರಣಿ ಶತಕೋಟಿ ಕಿರಣತತಿ ಕುಮುದ ವರ್ಣದ ತನುರುಚಿಯಾ ಹರಸುರೇಶ್ವರ ವಿರಿಂಚ್ಯಾದಿ ವಂದಿತಚರಣ ಸರಸಿರುಹ ವರದೇವಪುರದ ಸಿರಿವರನ 3
--------------
ಕವಿ ಲಕ್ಷ್ಮೀಶ