ಇಂದು ಕಾಯಲಾ ಭಕ್ತವತ್ಸಲಾ
ಬಂದು ಒದಗಿ ನಿಂದು ಭಯವ ದೂರ ಮಾಡಲಾ ಧ್ರುವ
ಮೊರಿಯು ಕೇಳೆಲಾ ಹರಿಯು ನಿಶ್ಚಲಾ
ದುರಿತ ಹರಿಸೆಲಾ 1
ಸುಳವದೋರಲಾ ಹೊಳೆದು ವಿಠ್ಠಲಾ
ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ 2
ಬಂಧುಬಳಗ ದೈವ ಕುಲಕೋಟಿ ನೀನೆಲಾ3
ಹಿಂದೆ ಶರಣರ ಬಂದು ಕಾಯ್ದೆಲಾ
ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ 4
ಅಂದು ಒದಗಿ ನೀ ಬಂದ ಪರಿಯಲಾ
ಇಂದು ಅಭಿಮಾನ ಕಾವ ಬಿರುದು ನಿನ್ನದಲ್ಲಾ 5
ದಾತ ನೀನೆಲಾ
ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ 6
ಪುಣ್ಯಪ್ರಭೆಯಿಂದಾ ಕಣ್ಣುದೆರಿಯಲಾ
ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ 7