ನೀನೆ ಪಾಲಿಸು ಕರುಣಾವಾರಿಧಿದೀನಜನರಾಧಾರ ಹರಿಯೆ ಪನಿನ್ನಾಧೀನವು ತೋರ್ಪುದೆಲ್ಲಮಾನವನ ಸ್ವಾಧೀನವೇನಿದೆನಿನ್ನ ನೆರಳಲಿ ಮೂರು ಜಗವುಭಿನ್ನವಿಲ್ಲದೆ ಬದುಕಿ ಬಾಳ್ವುದು 1ನಿನ್ನ ಸಹಾಯವಿಲ್ಲದೀಭವವನ್ನು ಗೆಲಿಯುವ ಸಾಧ್ಯದಾರಿಗೆನಿನ್ನ ಕೃಪಾಕಟಾಕ್ಷದಿಂದಲೆಮುನ್ನ ಹಿರಿಯರು ಧನ್ಯರಾದರು 2ಮತ್ರ್ಯಲೋಕಕ್ಕೆಳೆದು ತಂದೆನ್ನಮರ್ತುಬಿಡುವುದುಚಿತವೇನಯ್ಯನಿರ್ತಸುಖವಿತ್ತು ರಕ್ಷಿಸಭವಕರ್ತುಶ್ರೀಗುರು ರಾಮ ಪ್ರಭುವೆ3