ರಂಗನಾಯಕ----ತ್ತುಂಗನಾದ ಧೊರಿಯೆ ಪ
ಮೂರುತಿ ಮಹಾಮಹಿಮನಾದ
ಅಂಗಜ ಜನಕ ಕೃಪಾಂಗ ದೇವೋತ್ತುಂಗ ಅ.ಪ
ಸಿಂಧು ಶಯನ ದೇವ
ಭಕುತರ ಬಂಧು ಮಹಾನುಭಾವ
ಇಂದಿರಾ ಹೃದಯ ಧೀರಾ
ಈ ಜನರಿಗಾನಂದನಾಗಿ ತೋರಾ
ಮಂದರಧರ ಮುಕುಂದ ಮಾಧವ
ಸುಜನ ಪೋಷಕ
ಕಂದನ ಸಲಹಿದ ಕರುಣಸಾಗರ
ಇಂದು ನಿಮ್ಮ ಚರಣ ದ್ವಂದ್ವಗಳ ತೋರು 1
ವೆಂಕಟಗಿರಿವಾಸ---
ಕಿಂಕರ ನಾ ಅಣುದಾಸ
ಶಂಕೆಯಿಲ್ಲದ ದೋಷಾ
ಮಾಡಿದಂಥ----
ಸಂಕಟಗಳೆಂಬೀ----
ಕರಗಳೆನ್ನ
ಇರಲೂ ಕೊಂಕುಗಳ ಪರಿಹರಿಸ
----ದರ ಪರಮಪಾವನಾ 2
ವೇಣುಗಾನ ವಿನೋದಾ
ನೀಹಿತ--ಮೂಲನಾದ
ಶ್ರೀನಿವಾಸ ಗೋವಿಂದಾ
ಶ್ರೀತಜನ ರಕ್ಷಣಾನಂದ ನಿಲಯನಾದ
ಭಾನುಕೋಟಿ ಪ್ರಕಾಶದೇವ----
ಸೂಸುತಿರುವ ದಾನವಾಂತಕ
'ಹೆನ್ನೆ ವಿಠ್ಠಲ’ ಧೇನುರಕ್ಷಕ ದೀನಪೋಷಕ 3