ಭೂಮಿಜೆಯು ಸೀತೆಯು
ಜನನಿ ಗರ್ಭವ ವಡೆದು ಬಂದಳು ದನುಜ ವಧಕೆಂದೇ ಪ
ದುರುಳ ದನುಜರು
ಪೆಸರು ರಾವಣ ಕುಂಭಕರ್ಣರು
ಋಷಿ ಜನಂಗಳ ಮುಖವ ಕೆಡಿಸುತ ಮೆರೆಯುತಿರೆ ಕೇಳ್ದು 1
ಭವದ ಭಟ ಶ್ರೀರಾಮಚಂದ್ರನು
ಮೂವರನು ಜರ ಕೂಡಿ ಜನಿಸಿದಾ
ಭುವನ ಭಾರವ ಪರಿಹರಿಪೆನೆಂದಭಯ ತೋರುತಲೀ 2
ಸಿರಿಲಕುಮಿ ನಿಜವರನು ಜನಿಸಿದ-
ನರಿತು ¥ರಮಾನಂದದಲಿ ತಾ
ಭರದಿ ಮೈದೋರಿದಳು ಹರಿಗೆ ತಾನರಸಿ ಎನಿಸಿದಳು 3
ವಾನರರ ಸೇನಾಧಿಪನು ಪವ-
ಸೂನು ಶ್ರೀ ಹನುಮನೆಂಬುವನು
ದಾನವಾರಿ ಶ್ರೀ ರಾಮಚಂದ್ರಗೆ ಭೃತ್ಯನೆನಿಸಿದನು 4
ವಿಪಿನ ಚರವ್ಯಾಜದಲಿ ರಕ್ಕಸ-
ರಪರಿಮಿತ ಕೆಡಹಿದನು ಧರಣಿಗೆ
ವಿಪರೀತ ಬತ್ತದ ಶರಧಿಯನು ಹನುಮಂತನ್ಹಾರಿದನು 5
ಪ್ರತಿಭಟಿಸಿ ಶ್ರೀ ರಾಮಚಂದ್ರನು
ಅತಿಮೆರೆವ ರಾವಣನ ಮಡುಹಿದಾ
ಮತಿವಂತ ಹನುಮನಿಗೆ ಇತ್ತಾ ಚತುರವದನ ಪದಾ 6
ಧರಣಿ ಮಗಳಿಂಗೂಡಿ ರಾಮನು
ಧರೆಯನೆಲ್ಲವನಾಳಿ ನ್ಯಾಯದಿ
ಸ್ವರಗವಾಸಕೆ ತೆರಳಿದನು ನರಸಿಂಹವಿಠಲನು 7