ನೆನೆದು ಸುಖಿಸಿ ನಮ್ಮ ಆದಿ ಶರಣರಾ
ಅನುದಿನ ಹರಿ ಮೆಚ್ಚಿದ ಪ್ರಿಯರಾ ಪ
ಪ್ರಲ್ಹಾದ ನಾರದ ಪರಾಶರ ಮುನಿ
ವಲ್ಲಭ ರುಕ್ಮಾಂಗದಾ ಧ್ರುವರಾ
ಉಲ್ಹಾಸದಿಂದಲಿ ಅಂಬರೀಷ ಗಜೇಂದ್ರನಾ
ಬಲ್ಲಿದ ಬಲಿ ಗುಣ ಸಾಗರರಾ
ಹನುಮ ವಿಭೀಷಣ ಜಾಂಬವ ಅಜಮಿಳ
ಮುನಿ ಮುಚಕುಂದಾರ್ಜುನ ಮುಖ್ಯರಾ 1
ಉದ್ಧವ ಉಪಮಾನ್ಯನು
ಜನÀದೋಳಧಿಕರಾದಾ ಪುಂಡಲೀಕ ಭೀಷ್ಮರಾ
ಭಕುತಿ ವನಧಿಯೊಳು ಮೆರೆವರ ತನವಾದಾ 2
ಶುಕಶೌನಕ ಮುಖ್ಯ ಸಜ್ಜನರಾ |
ಪ್ರಕಟದಿ ಮಹಿಪತಿ ನಂದನು ಸ್ತುತಿಸಿದ |
ಮುಕುತಿಗೆ ಯೋಗ್ಯ-ನಾ ಮಾಡುವರಾ 3