ಎಂಟು ದಿನವಾಯಿತಲ್ಲೊ ಭಕ್ತ
ನೆಂಟನ್ಯಾಕೆ ತಡವು ಮನೆಗೆ ಕರೆಸಯ್ಯ ಕರುಣವಿರಿಸಯ್ಯ ಪ.
ಆವಲ್ಲಿ ಪೋದರು ನಿನ್ನ
ಸೇವೆ ಮಾಳ್ಪ ಸುಖಕೆ ಸರಿಯಾ ಪಡೆಯದೆ ಎಲ್ಲೂ ತಡೆಯದೆ
ಶ್ರೀವಲ್ಲಭ ನಿನ್ನ ಕಾಂ¨
ಭಾವನೆಯಿಂದೆನ್ನ ಮನಸು ತಿರುಗಿತು ಬಹಳ ಕರಗಿತು 1
ಯೋಗಿವರದ ನಿನ್ನ ಮೂರ್ತಿ
ಬೇಗದಿಂದ ನೋಳ್ಪೆನೆಂದು ಯೋಚಿಸಿ ಮುಂದೆ ಸೂಚಿಸಿ
ನಾಗೂರ ಪಟ್ಟಣವ ಬಿಟ್ಟು
ಸಾಗಿ ಬರುವ ಸಮಯದಲ್ಲಿ ಆಶೆಯಾ ಪಾಶ ಸೂಸಿತು 2
ದೋಷಿಯೆಂದು ಗ್ರಹಿಸದೆ ಸ-
ರ್ವಾಸೆ ಪೂರಿಸಖಿಳ ಜಗದೀಶನೆ ವೆಂಕಟೇಶನೆ
ಶ್ರೀಶ ನಿನ್ನ ಕಡೆಗೆ ಕರೆಸಿ
ನಿತ್ಯ ಸೇವೆ ಕೊಳ್ಳಯ್ಯ ಖಜ್ಜಬಿಲ್ಲಯ್ಯ 3