(ಚಿಂತಾಮಣಿಯ ನರಸಿಂಹದೇವರು)
ಚಿಂತಾಮಣಿ ನರಸಿಂಹನ ನೆನೆದರೆ
ಚಿಂತಿತ ಫಲವೀವನು
ಭ್ರಾಂತ ಬುದ್ಧಿಯೊಳನ್ಯ ದೈವವ ಭಜಿಸದೆ
ಕಂತು ಜನಕ ಲಕ್ಷ್ಮೀಕಾಂತನ ನೆರೆನಂಬು ಪ.
ಜಲಜ ಸಂಭವ ಶಂಭು ಬಲವೈರಿ ಮುಖದೇವ-
ರ್ಕಳನೆಲ್ಲ ಸುಲಭದಿ ಸಲಹುವ ದೊರೆಯು
ಕಲಿಕೃತ ಮಲವನ್ನು ಕಳವನು ನಿರತ ಬೆಂ
ಬಲವಾಗಿ ದುರಿತಾಳಿಗಳ ಓಡಿಸುವನು
ಕಳೆಯ ಪುರದಲಿ ನೆಲೆಯದೋರುವ
ಚೆಲುವ ಲಕ್ಷ್ಮೀನಿಲಯ ಮೂರುತಿ
ಯೋಗಿನಿಗಣ ಭಯಕ್ಕಾಗಿ ಸಂಸ್ತುತಿವೇದ 1
ನಾಗಭೂಷಣ ನಮ್ಮುದಾಗಿ ರಕ್ಷಿಸೀದ
ವಾಗೀಶ ಪದಯೋಗ್ಯನಾಗಿ ಭೂಮಿಗೆ ಬಂದ
ಯೋಗೀಶ ವಾದಿರಾಜರಿಗೊಲಿದನಾ
ಬೇಗದಲಿ ಭಕ್ತಾಳಿ ರಕ್ಷಣ-
ರಾಗಿಯೆನಿಪ ವಿರಾಗಿ ಹೃದ್ಗತ 2
ಶಂಖಾರಿ ಪದ್ಮ ಗದಾಧರ ನಿಜ ಜನ
ಶಂಕಾನಿವಾರ ಶಂಕರ ವರದಾ
ಲಿಂಗ ಸುಲಾಲಿತ ಪ್ರಲ್ಹಾದ ರಮಾಕುಚ
ಕುಂಕುಮಲಿಪ್ತಾ ವಕ್ಷೋವೀವರ
ಶಂಕಿಸದೆ ಸಕಲಾರ್ಥವೀವ ಮೃ-
ಮಾಧವ ವೆಂಕಟೇಶ್ವರ 3