ಇಂದಿನ ದಿನ ಸುದಿನ ನಾಳೆಗೆಂದರೆಂದು ಕಠಿಣ
ಮಂದಮತಿಯು ನೀನಾಗದೆ ಈಗ ಮುಕುಂದನ ನಾಮ
ಕೀರ್ತನೆಯ ಮಾಡುವುದಕೆ ಪ
ಯೋಗಿಗಳೊಡನಾಡು ವಿಷಯದ ಭೋಗವ ನೀಡಾಡು
ನಿನ್ನ ನೀ ತಿಳಿವುದಕೆ 1
ಅಸ್ಥಿರ ದೇಹವಿದುನಾನಾವಸ್ಥೆ ಬಾಧಿಸುತಿಹುದು
ಬಿಡನೊಡನಾಡುವುದಕೆ 2
ಸಾಧು ಸಂಗತಿಯಿಂದ ಪಾಪವಿಚ್ಛೆದನವದರಿಂದ
ಲಕ್ಷ್ಮೀರಮಣನ ಪೂಜಿಸಲಿಕೆ 3