ಕರೆದರೆ ಓ ಓ ಎನಬಾರದೆ
ಮರೆತರು ಕೂಗಿನ ದನಿಕೇಳದೆ ರಂಗ ಪ
ಶರಣಜನರು ಸಾಸಿರವಿದ್ದರೇನೋ
ಮೊರೆಯಿಡುವವ ಕಂಡರರಿವಾಗದೇನೋ ಅ.ಪ
ಲಕ್ಷಜೀವಿಗಳನ್ನು ರಕ್ಷಿಸುವವನೆಂದು
ವಕ್ಷದೊಳಿರುವ ಶ್ರೀಲಕ್ಷ್ಮಿ ಹೇಳುವಳು
ಪಕ್ಷಿರಾಜನ ಫಣಿಯಕ್ಷನಂಗನೆಯರು
ಅಕ್ಷರ ಲೋಕಾಧ್ಯಕ್ಷನೆನುವರು 1
ಯೋಗವನರಿಯೆನು ಯಾಗವನರಿಯೆನು
ತ್ಯಾಗ ಮಾಡುವ ಬುದ್ಧಿ ಎಳ್ಳನಿತಿಲ್ಲ
ರಾಗ ರಚನೆಗಳ ಅರಿವೆನಗಿಲ್ಲ
ನಾಗಶಯನ ಕಾಯೋ ಮಾಂಗಿರಿರಂಗ2