ತನುವೆನ್ನದು ಚೇತನವೆನ್ನದು ಎಂದು ಅನುದಿನ
ಪೋಷಣೆಯನು ಮಾಡಿದೆ ಹರಿ ಪ
ಚಿನುಮಯ ನಿನ್ನನು ನೆನೆವೆಂನೆಂzರÀಮನ
ತನುಮಧ್ಯೆಯರತನು ವಿನೊಳಿರುತಿಹುದು
ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ
ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ 1
ಚರಣದ ಪೂಜೆಯೊಳಿರುವೆನೆಂದರೆ
ಕರವೆರಡು ಕೋಮಲೆಯರ ನರಸುವುವು
ಹರಿಕಥಾಶ್ರವನದೊಳಿರದೆ ಈ ಕಿವಿಗಳು
ಹರಿಣಾಕ್ಷಿಯರ ಕಂಠ ಸ್ವರಕೆಮೋಹಿಪವಯ್ಯ 2
ದುರಿತದೂರನ ನಾಮಸ್ಮರಿಸದು ನಾಲಿಗೆ
ಸರಸಿಜಾಕ್ಷಿಯರೊಳು ಸರಸ್ತೋಕ್ತಿಪಡೆದು
ಚರಣ ಶ್ರೀ ತುಳಸಿಯ ನರಿಯದೆ ನಾಸಿಕ
ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3
ನಿನ್ನಂಘ್ರಿಗೆರಗದೆ ಕುನ್ನಶರೀರ
ವಿದುನ್ನತಸ್ತನವುಳ್ಳ ಕನ್ನೆಯರೋಳ್
ತನ್ನ ಸುರತಸುಖವನ್ನ ಚಿಂತಿಸುವದು
ಯನ್ನಾಧೀನದೊಳಿಲ್ಲ ನೀನೇ ಬಲ್ಲಿ 4
ಎರವಿನ ಸಿರಿಯಂತೆ ಕರಣಕಳೇವರ
ಬರಿದೆ ನನ್ನದು ಎಂದು ಮೆರೆದೆ ನಾನು
ದುರಿತ ಕೃತಕೆನ್ನ
ಗುರಿಮಾಡದೆ ಕಾಯೋ ವರದ ವಿಠಲ ಕೃಷ್ಣ 5