ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ
ನೆರೆನಂಬಿದವ ಧನ್ಯನೊ ಪ
ಧರೆಯೊಳಗೆ ರಘುವರನ ಶೇವಿಸಿ ಶರಣು ಜನರನು
ಪೊರೆವುದಕೆ ಭೂಸುರಗಣದಿ ರಾಜಿಸುವ ರಾಯಚೂರ
ಪುರದ ಕೋಟೆಯೊಳಿರಲು ಬಂದಿಹ ಅ.ಪ
ಬಹುಭರದಿವಾರಿಧಿ ಲಂಘಿಸಿ
ಹರಿಭಟನೆಂದು ತಿಳಿಸಿ
ತ್ವರದಿ ರಾಮನಿಗರ್ಪಿಸಿ
ಧೀರನೆ ಸುರವಿನುತ ತವ
ಪರಿಮಳವಿರಚಿಸಿದ ಗುರುವರರ ನೋಡಿದೆ 1
ಗೋವಿಂದನಂಘ್ರಿಯ ಭಜಿಸಿ
ಮನದಿ ಭಾವಿಸಿ
ನಂದಸುತನಿಗರ್ಪಿಸಿ ಪ್ರಥಮಾಂಗನೆನಿಸಿ
ಸಮರ್ಥ ತವಪದ ಕೊಂದಿಸುವೆ ಮನ
ಮಂದಿರದಿ ಯದುನಂದನನ ಪದದ್ವಂದ್ವ ತೋರಿಸು 2
ಪುಟ್ಟಿಯತಿರೂಪವನೆಧರಿಸಿ
ಕ್ಷಿತಿಯೊಳಗಖಿಲ ದುರ್ಮತಗಳೆಂಬುವ
ಮೇಘತತಿಗೆ ಮಾರುತನೆನಿಸಿ
ಪ್ರತಿಪಾದ್ಯನೆಂದು ತಿಳಿಸಿ ಸುಖ
ತೀರ್ಥರೆನಿಸಿ ಅತಿಹಿತದಿ ಸತ್ಪಥವ ತೋರಿದಿ
ಅತುಳ ಮಹಿಮನೆನುತಿಸುವೆನು
ಸತತ ಪಾಲಿಸೋ 3
ತನುಮರೆಯಲು ಧುರದಿ
ಜೀವನವಿತ್ತಕಾರಣದಿ ವನಜನಾಭನು
ದಯದಿ ತನ್ಮೂರ್ತಿ ಸಹಿತದಿ
ತಟಿತ್ಕೋಟಿ ಸೇವಕಜನರ ಸಲಹುವಿ
ಕೊಳುತಲಿ ಮೆರೆವದೇವನೆ 4
ಶಿರದಿ ಮುಕುಟ ಮಂಡಿತ
ಮೂರ್ತಿ ದರುಶನವನೆ ಕೊಳ್ಳುತ
ವಿಸ್ತರ ಮಂಟಪದಿರಾಜಿತ
ಸುರಪೂಜಿತ ಕÀರುಣ ಶರಧಿಯೆ ಪೊರೆವದೆನ್ನನು ಶರಣು ಜನರಘ
ಕರುಣವ ಪಡೆದ ಧೀರನೆ 5