ನೋಡುವರೆ ಬನ್ನಿ
ಶೇಷಾಧರ ಕೂರ್ಮನಿಗೆ ಪ.
ಇಂದ್ರಾದಿ ಶರದಿಂದ ನೊಂದ ಕಪಿಗಳನ್ನು
ತಂದ ಸಂಜೀವನ ಗಿರಿಯಿಂದಲೀ
ಮಂದ ಭಾವವ ಕಳದಂದು ಪರ್ವತವನ್ನು
ನಿಂದಲ್ಲಿಂದಲೆ ಹಿಂದಕ್ಕೆ ಬಿಸುಟಂಥ1
ವೈಷ್ಣವರಿಗಳೊಳು ಶ್ರೇಷ್ಠನೆನಿಸಿದಂಥ
ದುಷ್ಟ ಜರಾಸಂಧ ಕಷ್ಟ ವೃತ್ತಿ ಬಡಿಸಿದಂಥ
ಪರಮೇಷ್ಠಿ ಯಾಗವ ಮಾಡಿ
ಕೃಷ್ಣಗೆ ಪರಮ ಸಂತುಷ್ಟಿ ಬಡಿಸಿದಂಥ 2
ಮೂರೇಳು ದುರ್ಭಾಷ್ಯ ಖಂಡಿಸಿ ಕೃಷ್ಣನ
ದ್ವಾರಕಪುರದಿಂದಿಲ್ಲಿಗೆ ಕರಿಸಿ
ಧಾರುಣೀಶ ವೆಂಕಟಾಚಲಪತಿಯೆಂದು
ತೋರಿದ ಸಜ್ಜನಾಧಾರ ಯತೀಂದ್ರಗೆ 3