ಯತಿಸಾರ್ವಭೌಮಾ ಸದ್ಗುರು ಸ್ವಾಮಿ ಪ
ಮತಿಗೆ ಮಂಗಳವಾದ ಗೋಪ್ಯ
ಸ್ಥಿತಿಯು ನಿನಗರುಹುಲದರಿಂ
ನುತಿಪೆನಾನಿಮ್ಮಡಿಗಳನು ಕೇಳ್
ಪ್ರತಿವಾದಿಭಯಂಕರನೆ ಶ್ರೀ 1
ಅಂತರಾಪುರಿಯೊಳಗೆ ತಾನೆ ಅ
ನಂತ ರೂಪಗಳನ್ನು ತೋರಲೂ
ನಿಂತು ನೋಡಿದೆನಹುದೊ ಮುಕ್ತಿ
ಕಾಂತೆಯೆಂಬೊ ರಮಾಂಶಳನು ಶ್ರೀ 2
ಉಭಯ ವೇದಾಂತಾರ್ಯನಾಗಿಯು
ಅಭಯ ದಾನವನಿತ್ತ ಸೋಹಂ
ಪ್ರಭುವೆ ತಾನಾಗಿರುವಾ ನಿಜಕಳೆ
ವಿಭುವೆ ಜಯ ಜಯ ಶುಭಕರನೆ ಶ್ರೀ 3