ಗುರುಸ್ತುತಿ
ಭೂರಿ ದಯವ ಸತತ ಪ
ಧೀರವರೇಣ್ಯ ಸಮೀರ ಸಮಯಗಳ
ಸಾರವನರಿಯುವ ದಾರಿಯ ಕಾಣಲು ಅ.ಪ
ವ್ಯಾಸರಾಜಗುರು ದಾಸರೆಂದಿನಿಸಿ
ಶ್ರೀಶ ಶ್ರೀಕೃಷ್ಣನ ತೋಷಿಸಲು
ಸಾಸಿರ ವಿಧದಲಿ ಸಲಿಸಿ ಸೇವೆಗಳ
ಭಾಸುರ ಕೀರುತಿ ಪಡೆದ ಯತಿವರ 1
ಅಂದದ ನವಮಣಿ ಮಂದಿರಗಳಲಿ
ನಂದಕುಮಾರನ ಕುಳಿÀ್ಳರಿಸಿ
ಚಂದದಿ ದಿನ ದಿನ ಪೂಜೆಯ ಗೈದು
ಆನಂದಸಾಗರದಿ ಮಿಂದ ಯತಿವರÀ 2
ಘನ್ನ ಮಹಿಮೆ ಸುಖ ಚಿನ್ಮಯ ರೂಪ
ಪ್ರಸನ್ನ ಶ್ರೀಕೃಷ್ಣಗೆ ಹರುಷದಲಿ
ಚಿನ್ನಮಯದ ತೊಟ್ಟಿಲನ್ನು ಸೇವೆ ಮಾಡಿ
ಅನ್ಯರಿಗಲ್ಲದ ಪುಣ್ಯ ಪಡೆದವರ 3