ಪಾದ ಚಿಂತನವು ಕ್ಷಣದಲಿ
ಶೋಧಿಪುದು ಮತಿಯ ತಾರಕ ಪ
ಮೋದತೀರ್ಥರ ಭೇದಮತ ಅನು
ವಾದ ಮಾಡಿದ ಶ್ರೀಜಯತೀರ್ಥರ ಅ.ಪ
ಈ ಜಗದೊಳಗಿನ ರಾಜಕೀಯದ
ಸೋಜಿಗ ಜೀವನವನೆ ತೊರೆದು
ರಾಜೀವೋದ್ಭವನಯ್ಯನ ಚರಣಾಂ
ಬೋಜ ನಿರತ ಯತಿರಾಜರ ತಾರಕ 1
ಕಾಕುಮತಗಳನೇಕಗಳನು ನಿ
ರಾಕರಿಪ ಗ್ರಂಥಗಳನು ರಚಿಸಿ
ಲೋಕೋತ್ತರನಿಗೆ ನ್ಯಾಯಸುಧೆಯಭಿ
ಷೇಕವ ಮಾಡಿದ ಟೀಕಾಚಾರ್ಯರ 2
ವಿಧಿ ಫಾ
ಲಾಕ್ಷನುತ ಶ್ರೀಕೃಷ್ಣನ ಪೂಜಕ
ದುಷ್ಟ ಪಕ್ಷ ನಿರಾಸದಲಿ ಅತಿ
ದಕ್ಷ ದೀಕ್ಷ ಅಕ್ಷೋಭ್ಯರ ಕುವರರ 3