ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಪಾದರಾಯರ ದಿವ್ಯ ಶ್ರೀಪಾದವ ಭಜಿಸುವೆ ಪ. ವಾಗ್ವಜ್ರಗಳಿಂದ ಮಾಯಾವಾದಿಗಳೆಲ್ಲರ ಬಾಯಬೀಗನಿ(ವಿ?)ಕ್ಕಿ ಮುದ್ರಿಸಿದ ಬಿಂಕಗಳ ಬಿಡಿಸುವ 1 ವ್ಯಾಸರಾಯರಿಗೆ ವಿದ್ಯಾಭ್ಯಾಸವ ಮಾಡಿಸುವದಾಸರ ನಾಮಗಳಿಂದ ಲೇಸುಲೇಸೆಂದೆನಿಸಿಕೊಂಬ 2 ಮಧ್ವಮತದಲ್ಲಿ ಪುಟ್ಟಿ ಮಾಯಾವಾದಿಗಳ ಕುಟ್ಟಿಗೆದ್ದು ಮೆರೆದನು ದಿಟ್ಟ ಗುರುರಾಯ ಜಗಜಟ್ಟಿ 3 ಸುವರ್ಣವರ್ಣತೀರ್ಥರ ಸುತ ಶ್ರೀಪಾದರಾಯರಅವರ ನಾಮಗಳಿಂದ ಕಾವನಯ್ಯ ಕರುಣಾನಿಧಿ4 ವರದ ವೆಂಕಟೇಶನ್ನ ಒಲಿದು ಪೂಜಿಸುವನಕರುಣದಿಂದ ಹಯವದನ ಸಲಹೋ ಯತಿರನ್ನನ 5
--------------
ವಾದಿರಾಜ
ಎಷ್ಟೆಂದು ಬಣ್ಣಿಪೆ ಗುರುಸತ್ಯಪೂರ್ಣನದೃಷ್ಟಾಂತವ ಕಾಣೆನಾಶಿಷ್ಟ ಜನರಿಗೆ ಚಿಂತಾಮಣಿ ದೊರಕಿದಂತಿಷ್ಟಾರ್ಥದಾಯಕನಾ ಪ.ಶ್ರೀರಾಮ ವ್ಯಾಸರ ಸೇವೆಗೆ ಪೂರ್ವದಲ್ಲಾರಾಧನೆ ಮಾಡುತಧಾರುಣಿ ಮೇಲವತರಿಸಿದ ದ್ವಿಜಕುಲವಾರಿಧಿಚಂದ್ರನಂತೆ1ವೇದ ವೇದಾಂತ ಸಕಳಶಾಸ್ತ್ರಕ್ಷಿಪ್ರದಿಂದೋದಿ ಶ್ರೀ ಮಧ್ವಶಾಸ್ತ್ರಬೋಧವಕೇಳಿಮಹಾಭಕುತಿಲಿಗುರುಪಾದಾಬ್ಜ ನಂಬಿ ನಿಂತ 2ಬ್ರಹ್ಮಚರ್ಯಾಶ್ರಮ ಮೊದಲಾಗಿ ದಿನ ದಿನನಿರ್ಮಲ ಕಳೆಯನಾಂತಉಮ್ಮಯದಿಂದ ಷಟ್ಕರ್ಮಸಾಧನವಾದದsÀರ್ಮದ ದಾರಿಲಿ ನಿಂತ 3ತಾಯಿ ಮಕ್ಕಳ ಸಾಕಿದಂತೆ ಗುರುಕೃಪಾಪೀಯೂಷವನುಂಡು ತಾಬಾಯೆಂದು ಕರೆಸಿಕೊಂಡಖಿಳಾರ್ಥ ಪಡೆದ ನಿಷ್ಕಾಯನ ತೇಜವಂತ 4ನಿತ್ಯದಿ ಕರ್ಮಕೆ ಕುಂದಾಗಲಿಲ್ಲಗ್ನಿಹೋತ್ರ ಸಹಿತ ಸುವಾನಪ್ರಸ್ಥನಾಗಿ ಭೋಗಾಸಕ್ತಿಯ ತೊರೆದ ವಿರಕ್ತಿಭಾಗ್ಯಾನ್ವಿತನ5ಬಣ್ಣವಿಟ್ಟಿಹ ಚೊಕ್ಕ ಚಿನ್ನನೊ ಅಭ್ರಗೆದ್ಹುಣ್ಣಿಮೆ ಚಂದ್ರಮನೊಉನ್ನತಗುರು ಸತ್ಯಾಭಿನವ ತೀರ್ಥರಪುಣ್ಯವೆ ನೀನೊ ಯತಿರನ್ನನೊ 6ಹೀಗೆಂದು ಸುಜನರು ಹೊಗಳಲು ಶ್ರೀಪಾದಯೋಗಿತಾನೆನಿಸಿದನುಮ್ಯಾಗೆ ಮ್ಯಾಗದ್ಭುತ ಪಾಂಡಿತ್ಯವೆಂಬ ವಲ್ಲಿಗೆ ಹಬ್ಬುಗೆನಿತ್ತನು 7ಗುರುಗಳಭೀಷ್ಟೆ ಪೂರೈಸಿತು ಶ್ರೀರಘುವರನ ಮೂರ್ಧನಿಯಲಿಟ್ಟುಸ್ಥಿರ ಪಟ್ಟಾಭಿಷೇಕವಾಂಗೀಕರಿಸಿ ಜಗದ್ಗುರುವೆ ತಾನಾದಕರ್ತ8ದಿವ್ಯ ನಾಚಾರ ಕ್ಷೇತ್ರದಿ ಹರಿಸ್ಮರಣಿಂದಹವ್ಯಸಾಂಕಿತ ಗುರುಗಳುಆ ವ್ಯಯಾಬ್ದ ಜ್ಯೇಷ್ಠಾಧಿಕ ಶುದ್ಧ ಚತುರ್ದಶಿದಿವಸ ದಿವಿಗೆ ಸಾಗಲು 9ಹರಿಪಾದಯಾತ್ರೆಗೆ ಗುರುಗಳೈದಿದÀ ಮೇಲೆಪರಮದುಃಖಿತಮೌಳಿತ್ವರಿಯದಿ ವೃಂದಾವನ ವಿರಚಿಸಿದ ಮುನಿವರನ ಮಹಿಮೆಯಕೇಳಿ10ಪೃಥ್ವಿಪರಿಂದ ಪೂಜಿಸಿಕೊಂಡುದುರ್ವಾದಿಮೊತ್ತವ ಗೆಲುತಲಿಹಅರ್ಥಿಲಿ ಜಯಪತ್ರವನು ಜಯಿಸುತಗುರುಚಿತ್ತಕರ್ಪಿಸುತಲಿಹ 11ನಿಜಗುರುದಯದಿಂದ ದುರಿತತಮವ ಗೆದ್ದಂಬುಜ ಸಖನಂತೊಪ್ಪುವತ್ರಿಜಗವಂದಿತರಾದ ವೇದ ವ್ಯಾಸಾಂಘ್ರಿಯಭಜನ ಭಾಗ್ಯದೊಳೊಪ್ಪುವ 12ಧ್ಯಾನ ಮೌನ ಸದ್ವ್ಯಾಖ್ಯಾನ ಪೂರ್ಣನುಜ್ಞಾನ ಭಕುತಿಪೂರ್ಣನುಏನೆಂಬುವಿರೊ ಕರುಣಗುಣ ಪೂರ್ಣನುದಾನ ಮುದ್ರಾಪೂರ್ಣನು 13ಗುರುಸತ್ಯಾಭಿನವ ತೀರ್ಥರ ಸತ್ಯಪೂರ್ಣನು*ವರದರಾಜಯತಿಯೊಳು ದಯಾಪೂರ್ಣನುಸರಸೋಕ್ತಿ ಪರಿಪೂರ್ಣನು 14ತಂದೆ ಸತ್ಯಾಭಿನವಾಂಬುಧಿಜಾತ ತತ್ವಾರ್ಥವೃಂದರುಚಿರ ಪೂರ್ಣನುಎಂದು ಪ್ರಸನ್ವೆಂಕಟ ಪ್ರಿಯಾನಿಲಮತಸಿದ್ಗಾಂತದಿ ಪೂರ್ಣನು 15
--------------
ಪ್ರಸನ್ನವೆಂಕಟದಾಸರು
ಬನ್ನಿಗಡ ಸುಜನರೆಲ್ಲ ಪಾವನಕಾಯ ಸುಜನಪ್ರಿಯಪುಣ್ಯ ಸತ್ಯನಾಥಯತಿರನ್ನನ ಪಟ್ಟಣಕಿಂದು ಪ.ಪರಬೊಮ್ಮನೆಂಬುವ ಮನೆದೈವನಾಗಿಹಪರಸುಖವನೀವ ಮರುತದೇವನೆಂಬಾತಪರಮಪದದ ಗುರುವು ಯುಕ್ತಿಯಿಂದ ಕಾಪುರುಷರಗಲಿಸುವಂತೆ ಸತ್ಯನಾಥಪುರಪತಿಗೆ ಬೋಧಿಸುವ ಪರಮವಾರ್ತೆಯ ಕೇಳ 1ನವಭಕುತಿರತುನದಿಂದ ನಿರ್ಮಿತ ಪ್ರಾಕಾರಕೆನವದ್ವೇಷಿಗಳು ದಾಳಿಯಿತ್ತು ಅಂಡಲೆಯಲು ದಾನವಾರಿಯ ನಾಮಾಯುಧವ ಸತ್ಯಾಭಿನವÀÀ ತೀರ್ಥರೆಂಬೊ ಪುತ್ರಗೆ ನೀಡುತಮಾನವ ಹರಿಯೆಂಬಸುರರ ಮಡುಹಿಸುವುದು ನೋಡ 2ಕಾಯಜಚೋರನೆಂಬವ ತಾ ಕಳ್ಳ ಹನ್ನೊಂದರ ಕೂಡಿಕಾಯವೆಂಬ ರಾಜಗೃಹಕೆ ಕನ್ನವಿಕ್ಕುವುದ ಕಂಡುಕಾಯುವ ಜ್ಞಾನೆಂಬ ಭಟನು ಅಟ್ಟಲವನಕೈದು ಚಾಪವ ಸೆಳೆದು ಮಿಕ್ಕು ಚೋರನೀಕಾಯಕಟ್ಟಿಸುವಂಥ ಕರುಣಿಗೆ ನಮಿಸುವ3ಹರಿದಾಸರೆನಿಸುವ ಹಲವು ದೊರೆಗಳುಂಟುಹರದಾರಿಕ್ಕೆಲದಿ ಪಣ್ಯವ ಮಾಡಿ ಸುಧೆüವೀರಿಹರಿತತ್ವ ನಾಣ್ಯದೊಳು ರಾಮನಾಮದಹಿರಿದುಮುದ್ರೆಯನೊರೆದು ಪರಂಪರಹರುಷ ವ್ಯವಸಾಯವುಂಟು ಹಿರಿಯಾಮೃತವುಣ್ಣ 4ಅಭಿನವ ಚಂದ್ರಿಕೆದೋರಿ ಅಭಿಜ್ಞಾನತೆ ಮೆರೆದಅಭೀತ ಮಂಗಳಗಾತ್ರ ಅಮಿತ ಬುಧರಮಿತ್ರಅಭಿಜÕಗುರು ಸತ್ಯನಿಧಿಯ ಸುತ ಸತ್ಯನಾಥಅಭು ಪ್ರಸನ್ವೆಂಕಟೇಶನ ಭಜಕನ ಕವಿತಅಬುಜ ಪರಿಮಳಮಂದಾನಿಲವಿಡಿವಳಿಯಂತೆ 5
--------------
ಪ್ರಸನ್ನವೆಂಕಟದಾಸರು
ಶರಣು ಪೊಕ್ಕೆನೋ ನಿನ್ನ ಕರುಣಾಸಾಗರಾ ಪಶರಣು ಪೊಕ್ಕಚರಣಯುಗಕೆ ಕರುಣಿಸೆನ್ನ ಶರಣನೆಂದುxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಗುರವೇ ತ್ವರದಿ ಪೊರೆಯೊ ಸ್ವಾದಿ -ಧ್ವರಿಯೆಕರವಪಿಡಿದು ನಿರುತÀಅ.ಪಎನ್ನಬಿನ್ನಪಕೇಳೋ ಅಪನ್ನಪಾಲಕಾಘನ್ನ ಜ್ಞಾನವಿತ್ತು ಮುನ್ನ ಮನ್ನಿಸೋ ಯತಿರನ್ನನೇ 1ದಾತನಿನ್ನಪೋತನಾನು ಮಾತು ಕೇಳನಾಥ ಪೇಳ್ವೆಖ್ಯಾತ ಮಹಿಮನೆ 2ಪರಮ! ಕರುಣಿಸೋ ನಿನ್ನ- ಶಿರದಿ ನಮಿಸುವೆಸರಸ ಗುರುಜಗನ್ನಾಥ ವಿಠಲ ದೂತ 3
--------------
ಗುರುಜಗನ್ನಾಥದಾಸರು