ಶ್ರೀರಂಗನಾಥ
ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ ಪ
ಕಾಯೊ ಕಾಯೊ ಕಾವೇರಿ ನಿಲಯನೆ
ಕಾಯೊ ವಾಙ್ಮನ ಪೂರ್ವಕದಿ ತವ
ತೋಯಜಾಂಘ್ರಿಯ ನಂಬಿದೆನುಭವ
ಮಾಯಗೆಲುವ ಉಪಾಯ ತೋರಿ ಅ.ಪ
ದೇವಾಧಿದೇವ ನೀನು | ಪ್ರಣತ ಜನರಿಗೆ
ದೇವತರು ಮಣಿಧೇನು | ಎಂದರಿತು ನಿಷ್ಟಿಲಿ
ಧಾವಿಸಿ ಬಂದೆ ನಾನು | ರಘುವಂಶ ಭಾನು
ಕಾವನಯ್ಯ ನೀನೊಲಿದು ಕರುಣದಿ
ಪಾವಮಾನಿಯ ಶಾಸ್ತ್ರವರಿತು
ಭಾವ ಭಕ್ತಿಲಿ ನಿನ್ನ ಪಾಡುವ
ಕೋವಿದರ ಸೇವಕನ ಮಾಡಿ 1
ಪನ್ನಂಗಪತಿಶಯನ | ಶಿರಬಾಗಿ ಪ್ರಾರ್ಥಿಪೆ
ಪನ್ನಂಗರಿಪುವಾಹನ | ಎನ್ನಪರಾಧವ
ಮನ್ನಿಸೊ ಹಯವದನ | ವೈಕುಂಠ ಸದನ
ನಿನ್ನನುಗ್ರಹ ಪೂರ್ಣಪಡೆದು ಜಗನ್ನಾಥದಾಸರ
ಸನ್ನಿಧಾನದಿಂ ಬಂದೆ ತಂದೆ 2
ನೇಸರ ಕುಲಜಾತ | ವೇದೋಕ್ತಕ್ರಮದಿಂ
ಭೂಸುರ ಕರಪೂಜಿತ | ಕೌಶಿಕನ ಯಜ್ಷವ
ಪೋಷಕ ಪವನಪಿತ | ಪಾವನ್ನ ಚರಿತ
ವಾಸುದೇವಾನಂತ ಮಹಿಮೆ | ವಿಭೀಷಣಪ್ರಿಯ
ದೋಷಕಳೆಯುವ | ಭೇಷಪುಷ್ಕರಣೀಶ
ಕೇಶವ ದಾಶರಧಿ ಶ್ರೀ ಶಾಮಸುಂದರ 3