ಪ್ರದೋಷಕಾಲವಿದೀಗ ನೀ ಮರೆ-
ಯದೇ ನೆನೆಯೊ ಶಿವನಾ ಶಂಕರನಾ ಪ
ಸದಾ ಸಕಲ ಸುರರಿಂದ ಕೂಡಿ ತಕ
ತಧಿಂ ಎನುತ ಕುಣಿಯುವ ಶಿವನೀಗಲೂ ಅ.ಪ
ಸಕಲ ವಾದ್ಯಗಳೂ
ಶಂಭೋ ಎಂಬ ಸುವಾದಗಳೂ
ತುಂಬುರ ನಾರದರೂ ನುಡಿಸಿ ಹೇ-
ರಂಬ ಜನಕ ವಿಶ್ವಂಭರ ಎಂದು ದಿ-
ಗಂಬರನಾಗಿ ಚಿದಂಬರ ಕುಣಿಯುವ 1
ಭೂಷಣಗಳ ಮಾಡಿ
ಭಿಕ್ಷವನೂ ಬೇಡಿ
ತಾತನಾಗಿ ಮೆರೆದು ಹಿಮ ಶೈಲ-
ಜಾತೆ ಸಹಿತ ಪ್ರಖ್ಯಾತನಾಗಿ ಭವ-
ಭೀತಿ ಬಿಡಿಸಿ ದುಃಖೇತರ ಕೊಡುವನು 2
ಗಿರಿರಾಜಕುಮಾರಿ ಕೈಮುಗಿದು ತನಗರುಹು ತತ್ವವೆನಲು
ಸುರರು ಭಲಾ ಎನಲು
ಪರಮ ಗುಣಸಾಂದ್ರ | ಕೇಳು ದಿನ-
ಪರಾತ್ಪರನು ಶ್ರೀ ಗುರುರಾಮವಿಠಲ
ವರತಾರಕ ಮಂತ್ರವಿದೇ ಎಂದನು 3