ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ಮಾನವ ಶಿಂಗಾರ್ಯರ ಸುತನಮೋ ನಮೋ ಪ ಮಂಗಳಕರ ಕುಲಿಶಾಂಗ ಮತಾಂಬುಧಿ ತಿಂಗಳಸುಗುಣಿತ ನಮೊ ನಮೊ ಅ.ಪ ತುಂಗಮಹಿಮ ದ್ವಿಜ ಪುಂಗವ ವಿಜಿತಾ ನಂಗ ಶರ ದಯಾಪಾಂಗ ನಮೋ || ಡಿಂಗರೀಕ ಜನಪಾಲ ನಮೊ ಭವ ಭಂಗ ವಿದಾರಣ ನಮೊ ನಮೊ 1 ಜಾತರೂಪ ಶಯ್ಯಾತ್ಮಜ್ಯಾತೆ ಹರಿ | ದೂತ ಪ್ರಹ್ಲಾದರನುಜ ನಮೊ || ಪೂತುರೆ ಘನ ಸತ್ವಾತಿಶಯದ ಪ್ರ ಖ್ಯಾತ ದಿನಪ ಪ್ರಸೂತ ನಮೊ 2 ಪಾತಕಾದ್ರಿಜೀಮೂತ ಭ್ರಾತ ಪಣಿ ಪುರಂದರ ಪೋತನಮೊ ಪೂತಗಾತ್ರ ಶುಭದಾತ್ರ ಭರಿಕ್ಷ ಣ್ಮಾತಿರಿಷ್ಯಶ್ವ ಸುಪ್ರೀತ ನಮೊ 3 ಮೌನಿವರ್ಯ ವರದೇಂದ್ರ ಪಾದಾಂಬುಜ ರೇಣು ವಿಭೂಷಿತ ಪಾಲಯಮಾಂ ಧೇನು ನಿಧೆ ದೇವಾಂಶಜ ಪರಮತ ಪಾವಕ ಪಾಲಯಮಾಂ 4 ಮಾನವಿ ಕ್ಷೇತ್ರನಿಕೇತನ ಸನ್ನುತ ಮಾನಿತ ಗುರುವರ ಪಾಲಯ ಮಾಂ ಧೇನುಪಲ ವಿಜಯರಾರ್ಯ ಕೃಪಾನ್ವಿತ ಧೀನೋದ್ಧರಣ ಫಾಲಯಮಾಂ ಮಾನದಿ ಕ್ಷೇತನಿಕೇತನ ಸನ್ನುತ ಮಾನಿತ ಗುರುವರ ಪಾಲಯಮಾಂ ಜ್ಞಾನನಿಧೆ ದೇವಾಂಶಜ ಪರಮತ ಪಾವಕ ಪಾಲಯ ಮಾಂ 5 ಶೌರಿಕಥಾಮೃತ ಸಾರಗ್ರಂಥ ಕೃತ ಸೂರಿ ಕುಲೋತ್ತುಮ ಜಯ ಜಯಭೋ ಧಾರುಣಿ ಸುರಪರಿವಾರ ನಮಿತ ಪದ ಚಾರುಸ್ತಂಭಾಲಯ ಜಯ ಜಯ ಭೀ 6 ಮಂದವೃಂದ ಮಂದಾರ ಭೂಜನತ ಬಂಧೋ ಭಯಾಪಹ ಜಯ ಜಯ ಭೋ ನಂದಜ ಶಾಮಸುಂದರಾಂಘ್ರಿ ಅರ ವಿಂದ ಮರಂದುಣಿ ಜಯ ಜಯ ಭೋ 7
--------------
ಶಾಮಸುಂದರ ವಿಠಲ
ರಾಮಾನುಜಾಚಾರ್ಯ ಮೌನಿವರ್ಯ ನೇಮದಿಂದಲಿ ಗೈದೆ ನೀಂ ಸ್ವಾಮಿ ಕಾರ್ಯ ಪ ಆದಿಯೊಳು ನೀನಾದಿಶೇಷನು ಹರಿಶಯ್ಯೆ ಮೋದಕರ ಪ್ರಹ್ಲಾದ ಎಂದೆನಿಸಿದೆ ಸೋದರದಿ ಸೌಮಿತ್ರಿ ಸಂಕರ್ಷಣನು ಆದೆ ನಾಥ ಯಾಮಾನ ಪಥದಿ ಅರಿಗಳನು ಗೆಲ್ದೆ 1 ಗೀತ ಸೂತ್ರಕೆ ಭಾಷ್ಯಕಾರ ನೀನಾಗಿರುವೆ ಖ್ಯಾತಿಸಿದೆ ವ್ಯಾಸ ಪರಾಶರರ ಹೆಸರ ಪೂತ ಆಳುವಾರುಗಳ ಶ್ರೀಸೂಕ್ತಿ ಪ್ರಕಟಿಸಿದೆ ಮಾತೆವೊಲು ಉಭಯವೇದಗಳ ಪೊರೆದೆ 2 ನೂರೆಂಟು ತಿರುಪತಿಯ ಯಾತ್ರೆಗಳ ಮಾಡುತ್ತ ದಾರಿತೋರಿದೆ ಹರಿಯ ಸೇವಿಸುವ ಪರಿಯ ಪರಮಾರ್ಥಿಕರಾಗಿ ಪರಮವೈಷ್ಣವರಿರಲು ಸಾರಸುಖ ಪದತೋರ್ದೆ ಯತಿಸಾರ್ವಭೌಮ 3 ಎಂದೆಂದು ಮರೆಯದ ಕೂರೇಶರಾ ಸಖ್ಯ ಅಂದು ಬೋಧೆಯ ಕೊಟ್ಟ ಪೂರ್ಣಾರ್ಯರ ನೊಂದಕಾಲವ ನೆನೆದು ಕಣ್ಣೀರ ಕರೆಯುವೆನು ತಂದೆ ಗುರುವಿನ ಗುರುವೆ ದೇವಮಾನ್ಯ 4 ಯಾದವನ ಚೋಳನ ಕೃತ್ರಿಮದ ಕೋಟೆಗಳು ಮಾಧವನ ಡೆಲ್ಲಿಯಿಂ ಕರೆತಂದುದು ಬಾಧಿಸದೆ ಬ್ರಹ್ಮಪೀಡೆಗಳು ಓಡಿದುದು ಈ ಧರೆಯ ಕೀರ್ತಿಗೆ ಮೊದಲಾದವು 5 ರಾಮಚಂದ್ರನ ಕಾಡವಾಸವಂ ನೆನಪೀವ ಸ್ವಾಮಿಯರು ಗಿರಿಸೇರ್ದ ಗುರಿ ಎಲ್ಲವೂ ತಾಮಸರು ಸಾವಿರರ ಒಂದೆ ವಾರದಿ ಗೆಲ್ದ ಮಾಮೈಮೆ ಯಾರಿಗಿದೆ ಭೋಗಿರಾಜಾ 6 ಸಿರಿರಂಗ ತಿರುಪತಿ ಕಂಚಿ ಯದುಶೈಲಗಳ ಪರಮಪದಕೂ ಮಿಗಿಲು ವೈಭವವ ಗೈದೆ ನಿರುತ ತಮ್ಮವರಿಂಗೆ ಸಕಲ ಪಾಪವ ಸುಟ್ಟು ಹರಿಯ ಭರವಸೆ ಪಡೆದೆ ಮೋಕ್ಷ ಕೊಡುವಂತೆ 7 ನಿನ್ನಂತೆ ನಡೆವ ಪ್ರಪನ್ನರೇ ಧನ್ಯರು ಮನ್ನಣೆಯ ಪಡೆದಿರವ ಶ್ರೀಮಂತರು ಎನ್ನ ಬಿನ್ನಪ ಕೇಳಿ ನಿನ್ನವನ ಮಾಡಿಕೋ ಮೂರ್ತಿ ಜಾಜೀಶ ಕೀರ್ತಿ 8
--------------
ಶಾಮಶರ್ಮರು
ಶ್ರೀ ರಘೂತ್ತಮತೀರ್ಥರು ನೋಡಿದೆ ಗುರುಗಳ ನೋಡಿದೆ ಪ ನೋಡಿದೆನು ಗುರುಗಳ ಪಾದಾಬ್ಜವ ಪಾಡಿದೆನು ಸನ್ಮಹಿಮೆಗಳ ನಾ ಬೇಡಿದೆನು ಮನದಣಿಯೆ ವರಗಳ ಈಡು ಇಲ್ಲದೆ ಕೊಡುವ ಪ್ರಭುಗಳ ಅ.ಪ. ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿಯ ತೀರದಲ್ಲಿ ನಿಂತು ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ 1 ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಳಿ ರತುನರ 2 ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮರೆವರ ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ 3
--------------
ಶ್ರೀದವಿಠಲರು