ಸೃಷ್ಟೀಶ ಕೃಪೆದೋರಿದ ಬಾಲನಮಾನನಷ್ಟವ ಜಾರಿಸಿದ ಪ
ನ್ಯಾಯಕೆ ಪೋಪಕಾಲದಿ
ಪುಟ್ಟಯಾಖ್ಯನ ಸ್ವಪ್ನದಲಿ ತಾಂ-
ಬಿಟ್ಟು ಬನ್ನಿರಿಯೆನುತಪೇಳ್ದಾ ಅ.ಪ
ಎಲ್ಲಾರ ನಿನ್ನೊಳಗೆ ಸೇರಿಸಿ ಮುಂದೆ-
ಉಲ್ಲಾಸಕೊಡುವೆ ನಿನಗೆ
ಕಲ್ಲಿನಂದದಿ ಮೌನಧರಿಸುತ-
ಖುಲ್ಲಮನುಜರ ಸಂಗವರ್ಜಿಸಿ
ನಿಲ್ಲಿಸು ಮನವನೆನುತಲಿ 1
ಗುರುತು ಕಾಣುವದೆಂದಿಗೆ
ಪರಮ ತಿರುಮಂತ್ರಾರ್ಥ ಅಷ್ಟಾ-
ಕ್ಷರಿಯ ಜಪತಪಧ್ಯಾನಮಾಡುವ
ದೊರಯದೆಂದಿಗು ಕೀರ್ತಿ ಎನುತಲಿ 2
ಮತಧರ್ಮಜ್ಞಾನಿಗಳು ಪೇಳಿರುವಂತ
ಮತಶಾಸ್ತ್ರವೀಕ್ಷಿಸದೆ
ಸತತದೂಷಣೆಗೈದು ಸುಜನರ -
ಕ್ಷಿತಿಯ ಭೋಗವನಂಬಿ ಗರ್ವದಿ
ಹಿತವತಪ್ಪಿಸಿ ಕರವಪಿಡಿಯುತ 3
ಸ್ಥಿರವಲ್ಲಕಾಯವೆಂದು ಸಾತ್ವಿಕಶೃತಿಯೊ-
ಳಿರುವ ಸತ್ಯ ನೋಡೆಂದು
ನಿರುತಬೋಧಿಸಿ ಜನನಮರಣವ
ತರಿದು ಎನ್ನನೆ ಯಜಿಸು ಯೆನುತಲಿ-
ಹರಸಿ ಮೋಕ್ಷವನಿತ್ತ ಆರ್ಯನು 4
ಬಿಟ್ಟು ಸತಿಸುತರೆಲ್ಲರ ಎನ್ನೊಳುಮನವ
ನಿಟ್ಟುನಂಬಿದಭಕ್ತರ
ಬಿಟ್ಟುಕೊಡೆನಾನೆಂದು ಹೃದಯಾ-
ಧಿಷ್ಟಿತನು ತಾನಾಗಿ ಅಭಯವ
ಇಷ್ಟಶ್ರೀಗುರುರಂಗನೀಕ್ಷಿಸಿ 5