ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ನಿರಂಜನ ವಸ್ತುವಾದವ ಪ ಉತ್ತಮ ದೇಹದಿ ಬಂದೂ | ವಯೋವ್ಯರ್ಥವಾಯಿತು ಹಾಯೆಂದೂ ||ಮಿಥ್ಯಾ ವಿಷಯದಿ ಬೆಂದೂ |ನಿತ್ಯಾನಿತ್ಯ ವಿಚಾರಿಸಿ ತಿಳಿದವ 1 ವೇದೋಪನಿಷದಗಳಿಂದ ಬಹು |ಸಾಧಿಸಿ ತಿಳಿಯದರಿಂದ ||ಮೋದದಲ್ಲಿಹ ಸ್ವಾನಂದ |ತದ್ಬೋಧದಿ ಪರಮಾನಂದದಿ ರಮಿಪನು 2 ಜನ್ಮ ಮರಣ ಭಯ ನೀಗಿ |ಘನ ಉನ್ಮನಿ ಸ್ಥಾನದಿ ತೂಗಿ ||ತನ್ಮಯವೇ ತಾನಾಗಿ |ಚಿನ್ಮಯ ರಾಮನೊಳೈಕ್ಯವ ಪಡೆದವ 3
--------------
ಭೀಮಾಶಂಕರ