ಒಟ್ಟು 45 ಕಡೆಗಳಲ್ಲಿ , 26 ದಾಸರು , 43 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆಳ್ವಾರಾಚಾರ್ಯ ಸ್ತುತಿಗಳು (1) ರಾಮಾನುಜರು ನಾದ ಮೂರರೊಳೆನ್ನೊಳು ನೀ ಕಂಡುಬಾರೊ ಪ ಆದಿ ಆನಾದಿಯ ಭೇದವೇನದು ತೋರಿ ನಾದಬಿಂದು ಕಳೆಯೊಳ್ ನೀ ಕಂಡುಬಾರೊ 1 ಪಂತಗೊಳಿಸಿ ಕೊಟ್ಟ ಪರಮದೇಶಿಕನೆ 2 ಮೂಲ ಪ್ರಣವ ಬ್ರಹ್ಮ ಬಾಲ ಬ್ರಹ್ಮಚಾರೀ ಕೋಲೂಪ್ಯಾಟಕಾ ಮಾಂ ಪಾಲ ತುಲಶಿರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
(ಈ) ಅವತಾರತ್ರಯ ಆರು ನಿನಗಿದಿರಧಿಕ ಧಾರುಣಿಯೊಳಗೆ ಪ ಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ ಅ.ಪ. ಆರೊಂದು ವೈರಿಗಳ ತರಿದು ವೈಷ್ಣವರಿಗೆಆರೆರಡು ಊಧ್ರ್ವ ಪುಂಡ್ರಗಳ ಇಡಿಸಿಆರು ಮೂರರಮೇಲೆ ಮೂರಧಿಕ ಕುಮತಗಳಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ 1 ಆರು ನಾಲ್ಕು ತತ್ವದಭಿಮಾನಿಗಳಿಗೊಡೆಯಮಾರುತನ ಮೂರನೆಯ ಅವತಾರನೆಆರೈದು ಮೇಲೆರಡು ಅಧಿಕ ಲಕ್ಷಣವುಳ್ಳಮೂರುತಿಯೊಳೊಪ್ಪುತಿಹ ಮುನಿವರೇಣ್ಯ 2 ಆರಾರು ಮೇಲೊಂದು ಅಧಿಕ ಲೆಖ್ಖದ ಗ್ರಂಥಸಾರವನು ರಚಿಸಿ ಸಜ್ಜನರಿಗಿತ್ತುಪಾರಮಾರ್ಥಿಕ ಭೇದ ಪಂಚಕ ಸ್ಥಾಪಿಸಿದೆ ಉ-ದಾರ ಶ್ರೀಕೃಷ್ಣನ ದಾಸರೊಳು ದೊರೆಯೆ 3
--------------
ವ್ಯಾಸರಾಯರು
ಉದಿಸೀದಾ ರವಿಯು ತಾನುದಿಸಿದ ಪ ಉದಿಸಿದ ರವಿಯು ತಾನೆನಿಸೀ | ಗುರುಮುದಮುನಿ ಮತವ ವಿಸ್ತರಿಸೀ | ಆಹಬುಧಜನರಂತಸ್ಥ ಬಹು ವಿಧ ತಿಮಿರವಒದೆದು ಛೇದಿಸುವಂಥ ವಿಜಯಾರ್ಯ ತರಣಿಯು ಅ.ಪ. ಸುರಮುನಿ ಪಾದವ ಭಜಿಸೀ | ಯುಗವೆರಡರೊಳ್ ಸುರಲೀಲ ನೆನಿಸೀ | ಯುಗಮೂರರೊಳ್ ನಿಕಂಪನೆನಿಸೀ | ಯುಗಮೂರೊಂದರಲಿ ಕರುವೆನಿಸೀ | ಆಹಪುರಂದರ ದಾಸರ ಗೃಹದೊಳಗುದಿಸುತ 1 ಕರಣೀಕ ಶೀನಪ್ಪ ತನು | ತನ್ನವರಪ್ರಿಯ ಸತಿಕೂಸಮ್ಮನು | ಬಲುಪರಿಪರಿ ಸೇವಿಸಿ ವರವನು | ಪೊಂದಿಎರಡೊಂದು ತನಯರುಗಳು | ಆಹಪರಿ ಪಾಲಿಸುತ್ತಲಿ ಪರಿಪರಿ ಭವಣೇಲಿಪೊರೆಯವು ಉದರವ ಸರಿಯಿತು ಕಾಲವು 2 ಬಡತನ ಭವಣೇಲಿ ಬಂದೂ | ಒಂದುಕುಡಿತೆ ಗಂಜಿಗಾಗಿ ನೊಂದೂ | ಛಾಗಿಒಡೆಯನ ಮನೆಯೊಳಗಂದೂ | ಮೆದ್ದುಒಡಲ ತುಂಬಿಕೊಂಡು ಬಂದೂ | ಆಹಬಡಗ ದಿಕ್ಕಿನ ಗಂಗೆ ಮಡುವ ಕಾಣುವೆನೆಂದುಸಡಗರದಲಿ ಪೋದ ಬಡ ಕೂಸೀಮಗದಾಸ 3 ವತ್ಸರ ತರಳ | ತನ್ನಹಿರಯರಿಗ್ಹೇಳದೆ ಪೊಳಲ | ಬಿಟ್ಟುತಿರುಗುತ ತೀರ್ಥ ಕ್ಷೇತ್ರಗಳ | ಮಿಂದುಮರಳಿ ತಾ ಮಾತಾ ಪಿತೃಗಳ | ಆಹಬೆರೆದು ಮಾನವರಂತೆ ಸಂಸಾರ ವೃತ್ತಿಲಿಚರಿಸಿದವೆರಡುಂಟು ವರುಷವ ಕಳೆಯುತ 4 ಮತ್ತೆ ತಾ ವೈರಾಗ್ಯದಲ್ಲಿ | ಹರಿಪೆತ್ತ ಗಂಗೆಯ ಸ್ನಾನದಲ್ಲಿ | ಮನತೆತ್ತು ಗಯಾದೇಶದಲ್ಲಿ | ಪಿಂಡವಿತ್ತು ವಾರಣಾಸಿಯಲ್ಲಿ | ಆಹಉತ್ತಮರ ಸಂಗ ನಿತ್ಯಸ್ನಾನ ಸಂಧ್ಯಕೃತ್ಯವನೆಸಗಿ ಸುಚಿತ್ತದಿ ಮಲಗಿರೆ 5 ಸತ್ಯ ಸ್ವಪ್ನದಿ ನರಹರಿಯು | ತನ್ನಪುತ್ರನೆಬ್ಬಿಸಿದಂತೆ ಪರಿಯು | ದಾಸರಂತೆ ರೂಪವ ತಾಳಿ ಹರಿಯು | ತನ್ನಹತ್ತಿರ ಕರೆಯುತ ಧೊರೆಯು | ಆಹಚಿತ್ತಜ ಪಿತ ಪೆತ್ತ ಸರಿತವ ದಾಂಟಿಸಿಉತ್ತಮ ಕಾಶಿಯ ವ್ಯಾಸರ ಕಂಡವ 6 ಪರಿ ಪರಿಯ | ಆಹಅಚ್ಚ ಕವನ ಪೇಳಿ ನೆಚ್ಚಿನ ಮನದವರಸ್ವಚ್ಛತನಕೆ ತಿದ್ದಿ ಅಚ್ಚ್ಯುತಗಿಂತವ 7 ಎರಡೊಂದನೇ ಬಾರಿ ಪೋಗಿ | ಕಾಶಿಪುರದಿ ಗಂಗಾಸ್ನಾನಕಾಗಿ | ಕೂಡೆಸುರನದಿ ಪೆಚ್ಚಿ ಮೇಲಾಗಿ | ಸಿರಿವರದ್ವಿಜಗಭಿಷೇಕವಾಗಿ | ಆಹಸರಿತವು ಮುಂಚಿನ ಪರಿಯಂತೆ ಪ್ರವಹಿಸೆಸುರನರೋರುಗರೆಲ್ಲ ಪರಿಪರಿ ಕೊಂಡಾಡೆ 8 ತುತಿಸುತಲಲ್ಲಿಂದ ಸೇತು | ಸ್ನಾನರತಿಯಿಂದ ಗೈಯ್ಯುತ ಹೊತ್ತು | ಹರಿಕಥೆಗಳ ಪೇಳಿ ಯಾವತ್ತು | ಜನತತಿಗೆ ಸನ್ಮಾರ್ಗವನಿತ್ತು | ಆಹತೀರ್ಥ ಕ್ಷೇತ್ರಂಗಳ ನತಿಸುತ ದಶಮತಿಮತವ ಬೀರಿದನೀತ ಸುಜನರ ಪೊರೆಯಲು 9 ಸಾರ | ಸೊಳ್ಹಾದಿಗಳ್ ಮೊದಲಾದ ಹಾರ | ದಿಂದಭೇದ ವಾದಿಯ ಮತೋದ್ಧಾರ | ಗೈದುಶ್ರೀಶ ಗೊಪ್ಪಿಸೀದ ಧೀರ | ಆಹನಾದ ಮೂರುತಿ ಗುರು ಗೋವಿಂದ ವಿಠಲನಪಾದವ ಸ್ಮರಿಸುತ್ತ ಮೋದವ ಪಡುತ್ತಿದ್ದ 10
--------------
ಗುರುಗೋವಿಂದವಿಠಲರು
ಎದ್ದುನಿಂತ ಬಂದು ನಿಂತ ಮುಂದೆ ನಿಂದಂಥಮಾರಾಂತರ್ಗೆ ಕೃತಾಂತ ನಿಶ್ಚಿಂತ ಹನುಮಂತಬಲವಂತ ಯೆದೆಗೊಂತ ತನಪಂಥ ಸಲಲೆನುತಸÀಂತರಿಗೆ ಸಂತತ ಶಾಂತ ನಿಂತ ಮಾರಾಂತ ಕೃತಾಂತ ಪ. ದುರುಳ ರಾವಣನ ವನದ ತರುವಿನ ಕೊನೆಯೇರಿದಕರಚರಣಗಳ ಘಾಯದಿ ಮರಂಗಳ ಮುರಿದಅರಿಗಜ ಗಂಡಭೇರುಂಡನೆಂಬ ತನ್ನ ಬಲುಬಿರುದಮೆರೆದು ಮಾರುತಿ ಪ್ರತಿಭಟರ ಶಿರಂಗಳ ತರಿದ 1 ಸೀತೆಗೆ ಉಂಗುರವನ್ನಿತ್ತು ಮತ್ತೆ ಕೈಗಳ ಮುಗಿದಪ್ರೀತಿಯಿಂ ಪೊನ್ನಕಚ್ಚುಟಕ್ಕಿಟ್ಟ ಗಂಟನು ಬಿಗಿದಖ್ಯಾತ ಮಂಡೋದರಿಕುವರನ ಬಸುರನು ಬಗಿದವಾತಸುತನು ವೈರಿಪುರವ ಸುಡಲು ತೊಡಗಿದ 2 ನಲಿದು ಲಂಘಿಸಿ ನಳನಳಿಸುವ ಬಾಲವನೆತ್ತಿಖಳರೆದೆ ಶೂಲ ಹುಬ್ಬುಗಳ ಗಂಟಿಕ್ಕಿ ನೋಡುವ ಅರ್ಥಿಆಳುತಲಿಹ ಅಬಲೆಯರ ಭಯಂಕರಮೂರ್ತಿಸುಳಿದನು ಕೇರಿಕೇರಿಯಲಸುರರ ನುಗ್ಗೊತ್ತಿ 3 ಲಂಕಾನಗರಿಯ ಪುಚ್ಚದ ಕಿಚ್ಚಿಂದ ಸುಟ್ಟಹುಂಕರಿಸುತ ಅಹಿತರ ಬೇಗ ತೆಗೆದೊಗದಿಟ್ಟಕಂಕಣ ಮಕುಟ ಹಾರಂಗಳಿಂದೊಪ್ಪುವ ಬಲುದಿಟ್ಟಶಂಕೆಯಿಲ್ಲದನಿಲಜ ಶತ್ರುಗಳಿಗಿಂತರ್ಥಿಯ ಕೊಟ್ಟ 4 ಹೋಗೆಲೊ ಕಪಿಯೆನೆ ಹೊಕ್ಕು ರಕ್ಕಸರನು ಬಿಗಿದಕಾಗೆಯ ಬಳಗಕೆ ಕಲ್ಲನಿಟ್ಟಂದದಿ ಮಾಡಿದಆಗಲೆ ಕಂಡ ದಶಮುಖನೆಂಬ ಕಳ್ಳನ ನೋಡಿದಬೇಗ ಜಾನಕಿಯನ್ನು ಬಿಡು ಬಿಡುಯೆನಲು ತೊಡಗಿದ 5 ಮೂರರದೊಂದು ಪಾಲು ಖಳರ ಜನಂಗಳ ಕೊಂದಮೀರಿದ ಸೇನೆ ನಮ್ಮ ರಘುಪತಿಗಿರಲೆಂದು ನಿಂದನೂರುಯೋಜನದ ವಾರಾಶಿಯ ತೀರಕೆ ಬಂದಹಾರಿದನು ಗಗನಕೆ ಹನುಮನು ಭರವಸದಿಂದ ನಿಂದ 6 ಕುಂಭಿನೀ ಸುತೆಯ ಕುರುಹಿನ ಸನ್ಮಣಿಯ ತಕ್ಕೊಂಡಅಂಬುಧಿಯನು ಬೇಗ ದಾಟಿ ಶ್ರೀರಾಮರ ಕಂಡತ್ರ್ಯಂಬಕ ಮೊದಲಾದ ಸುರರ ತಂಡದಲಿ ಪ್ರಚಂಡಕಂಬುಕಂಧರ ಹಯವದನನ ಭಕ್ತಿರಸಾಯನ ಉಂಡ 7
--------------
ವಾದಿರಾಜ
ಕಾಯವ ನೆರೆನಂಬಿ ಕೆಡದಿರು ಮಾಯೆಯ ತಿಳಿದೇಳು ಪ. ನ್ಯಾಯವನರಿಯದೆ ನೀ ಮಾಯಾಮೋಹವೆ ಹೇಯಕಾರ್ಯರಿದೊಳಪಾಯದಿ ನರಳುವ ಅ.ಪ. ತನುಮನಕನಕವಿದು ನಿತ್ಯದಿ ತನದಾಗಿಹುದೆಂದು ಹೊನ್ನು ಮಣ್ಣು ಹೆಣ್ಣೆಂಬೀ ಮೂರರ ಬಣ್ಣದೆ ಬಗೆಗೆಟ್ಟು ಕಣ್ಣು ಕಾಣದೆ ಮುಂಬರುತಿಹ ಭಿನ್ನವನೆಣಿಸದೆಯೆ ಸಣ್ಣತನದಿ ಜೀವನ ವ್ಯರ್ಥವೆನಿಸುವ 1 ಸುಜನರ ಸಂಗತಿ ತ್ಯಜಿಸಿ ಮದದಲಿ ಕುಜನರ ಕೂಟವ ಬಯಸಿ ಋಜುಮಾರ್ಗವ ತೊರೆದು ಕಾಲವ ಅಜಗರನಂದದಿ ಕಳೆದು ಗಜಪತಿ ವರದನ ಪದಪಂಕಜ ಮಹಿಮೆಯ ನಿಜವರಿಯದೆ ದುರ್ಜೀವನವೆನಿಸುವ 2 ನೀರಗುಳ್ಳೆಯ ತೆರದಿ ಕರಗುವ ಸಾರವಿಲ್ಲದ ಭವದಿ ಮೂರುದಿನದ ಬಾಳೆಂದು ನೆನೆಯದೆ ಹಾರಾಡುವರೇ ನಿಂದು ಮಾರಪಿತನ ಪದಸಾರಸವನು ನೆನೆ [ನೆನೆದು] ನೀರ ಶೇಷಗಿರಿವರನೆÀ ಗತಿಯೆನೆ 3
--------------
ನಂಜನಗೂಡು ತಿರುಮಲಾಂಬಾ
ಗಣಾಧೀಶ ಗೌರೀಶ್ ವಾಗೀಶ ಶ್ರೀಶಾನ'ುಸಿ ಬೇಡುವ ಪ್ರಸಾದವನು ಜಗದೀಶಾನೆಲಸಿ ಹೃದಯದಿ ಬಂದು ನುಡಿಸು ದಯದಿಂದಾನೀ ನುಡಿಸಿದಂತೆ ನುಡಿಯುವೆ ಸ್ಪೂರ್ತಿುಂದಾ 1ದೇಹ ದೇವಾಲಯವು ದೇವರೊಳಗಿಹನುಮನದ ಗರ್ಭಾಲಯದಿ ಮಲಗಿಕೊಂಡಿಹನುನಾಲಿಗೆಯ ನಾಮಗರ್ಜನೆಯ ಬಲದಿಂದಾಮನದ ಕದ ತೆಗೆಯೆ ಕಾಣುನನು ಗೋ'ಂದಾ 2ಮನವೆ ಕಾರಣವು ಬಂಧಮೋಕ್ಷಗಳಿಗೆಮನವೆ ಕಾರಣ'ಲ್ಲಿ ಸುಖದುಃಖಗಳಿಗೆಮನಸು ಬಿಗಿ'ಡಿದ್ಹಿಡಿದು 'ಷಯಗಳ ತ್ಯಜಿಸುಮನತು ನಾಮಸ್ಮರಣೆಯೊಳು ಸದಾ ಇರಿಸು 3ಯಾವಾಗಲೂ ರಾಮ ನಿನ್ನೊಳಗೆ ಇರುವಾಭಾವದಿಂದಲಿ ಕರೆಯೆ 'ಒ' ಎಂದು ಬರುವಾದೇವರನು ನಂಬಿದರೆ ಸರ್ವದಾ ಕಾವಾಯಾವ ಅಂಜಿಕೆಯು ನಿನಗಿಲ್ಲ ತಿಳಿ ಜೀವಾ 4ನಿನ್ನೊಳಗೆ ನೀ ನಿನ್ನ ರಾಮನನು ನೋಡುನಿನ್ನ ಬೇಡಿಕೆಗಳನು ರಾಮನಲಿ ಬೇಡುಅನ್ಯರನು ಅಲಕ್ಷಿಸದೆ ಭಜನೆಯನು ಮಾಡುಪುಣ್ಯವಂತರ ಸಂಗದೊಳು ಸದಾ ಕೂಡು 5ಶ್ರವಣ ಭಕ್ತಿಯು ಬೇಕು ಮೊದಲು ಚೆನ್ನಾಗಿಶ್ರವಣವಾಗುವವರೆಗೆ ನಾದತಾನಾಗಿಭವ ಸಮುದ್ರವನು ದಾಟುವಡೆ ಸುಖವಾಗಿಶ್ರವಣವೇ ಮುಖ್ಯ ಸಾಧನವು ನಿಜವಾಗಿ 6ನಾದ ಹುಟ್ಟಿದ ಮೇಲೆ ನಾಮ ಕೀರ್ತನವುನಾಮ ಕೀರ್ತನದಿ ಅಸ್ಪಷ್ಟ ದರುಶನವುನೇಮ ಹೆಚ್ಚಾದಂತೆ ಸ್ಮರಣೆ ಶಾಶ್ವತವುಸ್ಮರಣೆಯೊಳು ಸಂಪೂರ್ಣ ವಸ್ತುದರುಶನವು 7ಅನನ್ಯ ಭಕ್ತಿಯ ಬಲವ ಬಣ್ಣಿಸುವದೇನುಕಣ್ಮುಂದೆ ಸರ್ವದಾ ಹರಿಯು ಕುಣಿಯುವನುಕಣ್ಣು ಮುಚ್ಚಣಿಕೆಯಾಟವನು ಆಡುವನುಅಣುರೇಣು ಪರಿಪೂರ್ಣನಾಗಿ ತೋರುವನು 8ಕುಣಿಯುವನು ಕುಣಿಸುವನು ನಗುತ ನಲಿಸುವನುದಣಿಯುವನು ದಣಿಸುವನು ಉಣುತ ಉಣಿಸುವನುಜನರಿಗದ್ಭುತ ಚಮತ್ಕಾರ ತೋರುವನುಕ್ಷಣ ಬಿಡದೆ ಕೆಳಗಿಳಿಯದಂತೆ ಕಾಯುವನು 9ದೇವರನು ನಂಬಿ ಕೆಡಕಾದವರು ಇಲ್ಲಜದೇವರನು ಬಿಟ್ಟು ಸುಖಹೊಂದಿದವರಿಲ್ಲಾದೇವರನು ಒಲಿಸುವೆಡೆ ಭಾವ'ರಬೇಕುಭಾವ'ಲ್ಲದ ಢೋಂಗಿನರ್ಚನೆಯು ಸಾಕು 10ಚಿನ್ನ ಬೆಳ್ಳಿಗಳ ಮಂಚಪವು ಬೇಕಿಲ್ಲಾಸಣ್ಣಕ್ಕಿ ಅನ್ನ ಪಕ್ವಾನ್ನ ಬೇಕಿಲ್ಲಮಣ್ಣು ಕುಳ್ಳಿಯೊಳು ಒಣ ಅಂಬಲಿಯು ಸಾಕುಘನ್ನ ಮ'ಮನಿಗೆ ನಿರ್ಮಲ ಭಕುತಿ ಬೇಕು 11ಶ್ರವಣ ಭಕ್ತಿಯ ದಾಟದವನು 'ಸಾಧಕ' ನುಪಾದಸೇವನದಿಂದ 'ಸಾಧು' ಆಗುವನುದಾಸ್ಯ ಭಕ್ತಿಯ ಮುಂದೆ 'ಸಿದ್ಧ' ನಾಗುವನುಸಖ್ಯಭಕ್ತಿಯ ಮುಂದೆ 'ಗುರು'ವು ಆಗುವನು 12ಭಕ್ತಿ ಮಾರ್ಗವು ಬಹಳ ಸುಲಭ ಸಾಧನವುಭಕ್ತಿ ಸರ್ವರಿಗೆ 'ಷಯದೊಳು ಪರಿಚಿತವು'ಷಯದೊಳಗಿನ ಪ್ರೀತಿ ಎಳೆದೆಳೆದು ತೆಗೆದುಪರಮಾತ್ಮನೊಳು ಇಡಲು ಭಕ್ತಿಯಾಗುವದು 13ಉಂಡದ್ದು ಶ್ರೀ ಹರಿಗೆ ನೈವೇದ್ಯವೆನ್ನುಕಂಡದ್ದು ಶ್ರೀ ಹರಿಯ ಪ್ರತಿರೂಪವೆನ್ನುಮಲಗಿದ್ದು ಶ್ರೀ ಹರಿಗೆ ಸಾಷ್ಟಾಂಗವೆನ್ನುಸುಲಭ ಪೂಜೆಯ ಮರ್ಮವೆನು ತಿಳಿದು ನೀನು 14ಸಾಲವನು ಮಾಡಿ ಹೋಳಿಗೆ ಹೊಡಿಯಬೇಡಾಜೇಲಿಗಂಜುತ ದೇಶಕಾರ್ಯ ಬಿಡಬೇಡಾಆಲಸ್ಯದಲಿ ಕಾಲವನು ಕಳಿಯಬೇಡಾಕೆಲಸದಲಿ ಕೀಳು ಮೇಲೆಂದು ಅನಬೇಡಾ 15ಸ್ವಚ್ಛ'ರಬೇಕು ಮನಬುದ್ಧಿ ದೇಹದೊಳುಅಚ್ಚುಕಟ್ಟಿರಬೇಕು ಸರ್ವಕಾರ್ಯದೊಳುಎಚ್ಚರಿರಬೇಕು ಜನಪಾತ್ರೆ ರಾತ್ರಿಯೊಳುಬಿಚ್ಚು ಮನ'ರಬೇಕು ಸ್ವಜನ 'ುತ್ರರೊಳು 16ಬಡತನವು ಬಂದಾಗ ಧೈರ್ಯ ಬಿಡಬೇಡ'ಡಿದು ನೆಂಟರ ಮನೆಯ ನೀ ಕೂಡಬೇಡದುಡಿದು ತಿನ್ನಲು ಸ್ವಲ್ಪ ಸಹ ನಾಚಬೇಡಮಡದಿ ಹುಟ್ಟಿದ ಮನೆಯ ನೀ ಸೇರಬೇಡಾ 17ಗಾಜಕಾರಣದೊಳು ' ಮುಚ್ಚುಮನ' ಬೇಕುಧರ್ಮಕಾರಣದೊಳಗೆ 'ಸ್ವಚ್ಛಮನ' ಬೇಕುಅರ್ಥಕಾರಣದೊಳಗೆ ' ಮೆಚ್ಚುಮನ'' ಬೇಕುಕಚ್ಚೆಕೈಗಳು ಸದಾ ಸ್ವಚ್ಛ'ರಬೇಕು 18ಸಂಸಾರ ಮಾಡುವಡೆ ಧನವ ಸಂಗ್ರ'ಸುಸನ್ಯಾಸಿಯಾಗುವೆಡೆ ವೈರಾಗ್ಯ ಬೆಳೆಸುಸರ್ವಕರ್ಮಗಳಲ್ಲಿ ಶ್ರೀಹರಿಯ ಸ್ಮರಿಸುಸರ್ವದಾ ಸಂತ ಸಂಗದೊಳು ಸಂಚರಿಸು19ಸಂತ ಸಂಗದೊಳು ಸಂಚರಿಸುವುದು ಸ್ನಾನಾಸಂತ ವಚನಾಮ್ರತದ ಪಾನವೇ ಸ್ನಾನಾಸಂತರನು ಸಂತೋಷಪಡಿಸುವುದು ಸ್ನಾನಾಶಾಂತಮನದಿಂ ಹರಿಯ ಚಿಂತಿಪುದ ಸ್ನಾನಾ 20ಬಾಲ್ಯದಲಿ ಬ್ರಹ್ಮಚರ್ಯದಿ ಬಲವ ಬೆಳೆಸುತಾರುಣ್ಯದಲಿ ದುಡಿದು ಧನವ ನೀ ಗಳಿಸುವೃದ್ಧಾಪ್ಯದೊಳು ಸದಾ ಶ್ರೀಹರಿಯ ಸ್ಮರಿಸುಶ್ರೀಹರಿಯ ಸ್ಮರಣೆಯೊಳು ಆಯುಷ್ಯ ಸವೆಸು 21ಮೊದಲು ನಿನ್ನ ಪ್ರಯತ್ನ ತಪ್ಪದೆಲೆ ಮಾಡುಅದು ನೀಗದಿರೆ ಮುಂದೆ ದೈವವನು ನೋಡುಮದುವೆಯಾಗುವ ಮೊದಲು ತಿಳಿತಿಳಿದು ನೋಡುದುಡಿದು ಧನ ಗಳಿಸಿ ಸುಖದಿಂದ ಬಾಳುವೆ ಮಡು 22ಧನ'ಲ್ಲದವನ ಸಂಸಾರ ಸುಖವಲ್ಲಾಮನೆಯೊಳಗೆ ನಿತ್ಯ ಕಿರಿಕಿರಿಯು ತರವಲ್ಲಾದನದಂತೆ ಹೆಣ್ಣು ನುಡಿಯುವುದು ಸರಿಯಲ್ಲಾಎಣಿಕೆುಲ್ಲದೆ ಮಕ್ಕಳಾಗುವುದು ಸಲ್ಲಾ23ನೆಂಟರೊಳು ಬಹುದಿನ ಕೆಳಗಿರಬೇಡಾ'ಫ್ರಂಟಸೀಟಿ'ನ ಮೇಲೆ ನೀ ಕೂಡಬೇಡಾಒಂಟಿಯಲಿ ಹೆಂಡತಿಯ ಬಿಟ್ಟು ಇರಬೇಡಾಗಂಟು ಒಬ್ಬರ ಕೈಗೆ ಕೊಟ್ಟು ಆಳಬೇಡಾ 24ನಿನ್ನಂತೆ ತಿಳಿ ಪರರ ಸುಖ ದುಃಖಗಳನುಅನ್ಯಥಾ ನೋಡದಿರು ಅಣ್ಣ ತಮ್ಮರನುಸರ್ವಥಾ ಸ'ಸದಿರು ಅನ್ಯಾಯಗಳನುತಿಳಿಯದೇ ಹಳಿಯದಿರು ಭಿನ್ನ ಮತಗಳನು 25ಅತಿ ಮತುಗಳು ಬೇಡ ಅತಿ ಮೌನ ಬೇಡಾಅತಿ ತಿನಸು ಬೇಡ ಅತಿ ಉಪವಾಸ ಬೇಡಾಅತಿ 'ಹಾರವು ಬೇಡ ಅತಿ 'ನಯ ಬೇಡಾಅತಿ ಉದಾರತೆ ಬೇಡ ಜೀನತನ ಬೇಡಾ 26ಭೂ'ುಂಗೆ ಭಾರವಾಗುತ ತಿರುಗಬೇಡಾಕೂಳಿಂಗೆ ಕಾಳಾಗಿ ನೀ ಕೂಡಬೇಡಸಾಲ ಸಿಗುವಾಗ ಸಂತೋಷ ಪಡಬೇಡಾಸಾಲವೇ ಶೂಲವೆಂಬುದು ಮರೆಯಬೇಡಾ 27ಹನಿಗೆ ಹನಿ ಕೂಡಿದರೆ ಹಳ್ಳದಾಗುವುದುತೆನಿಗೆ ತೆನಿ ಕೂಡಿದರೆ ರಾಶಿಯಾಗುವುದುಕ್ಷಣಬಿಡದೆ ಕಂಡಲ್ಲಿ 'ದ್ಯೆಯನು ಗಳಿಸುಕಣಬಿಡದೆ ಧನ ಧಾನ್ಯಗಳನು ಸಂಗ್ರ'ಸು 28ಮಾತು ಕೃತಿಗಳಿಗೆ ಬಲು ಮೇಳ'ರಬೇಕುನೀತಿಯೊಳು ತನ್ನ ಮನಸಾಕ್ಷಿ ಇರಬೇಕುಮಾತು ಬಲು ಸ'ುದ್ದು ಸತ್ಯ'ರಬೇಕುಸತ್ಯ'ಲ್ಲದ ಸುಳ್ಳು ಸ' ಮಾತು ಸಾಕು 29ಐಕ್ಯ'ದ್ದರೆ ಸೌಖ್ಯ ಭೇದದೊಳು ಬೇದಾಐಕ್ಯ'ದ್ದರೆ ಬಲವು ಕ್ಷಯಬೇನೆ ಭೇದಾಐಕ್ಯ'ದ್ದರೆ 'ಗ್ಗು ಭೇದದೊಳು ಕುಗ್ಗುಐಕ್ಯದಿಂದ ಸ್ವಾತಂತ್ರ್ಯ ರಥವನ್ನು ಜಗ್ಗು 30ತನ್ನ ಅಭಿಮಾನ ತನ್ನವರ ಅಭಿಮಾನತನ್ನ ಕುಲಗೋತ್ರ ಜಾತಿಯ ಸ್ವಾಭಿಮಾನತನ್ನ ಭಾಷಾರಾಷ್ಟ್ರ ಧರ್ಮಾಭಿಮಾನಮಾನವನಿಗಿರಬೇಕು ಇಲ್ಲದವ 'ಶ್ವಾನಾ' 31ತನ್ನತನ ಬಿಡಬೇಕು ತನ್ನವರಿಗಾಗಿತನ್ನವರ ಕುಲಗೋತ್ರ ಜಾತಿಗಳಿಗಾಗಿ ಕುಲಗೋತ್ರ ಜಾತಿಗಳ ತಾಯ್ನಾಡಿಗಾಗಿತಾಯ್ನಾಡು ನುಡಿಧರ್ಮ ಪರಮಾತ್ಮಗಾಗಿ 32ತನ್ನ ಉದ್ಯೋಗ ಮನಮುಟ್ಟಿ ಮಾಡುವರುಉಣಲು ಅಧಿಕಾರ ಆಮೇಲೆ ದೊರಕುವದುಉಣುವಾಗ ಶ್ರೀಹರಿಯ ಸ್ಮರಣೆ ಮಾಡುವದುಮನೆಯೊಳಗೆ ಶಿಸ್ತು ಶಾಂತಿಗಳ ಕಾಯುವದು33ಹರಿಕಥಾ ಕೀರ್ತನ ಪುರಾಣ ಪಠಿಸುವದುಸರಸ ವಾಙ್ಮಯದ ಅಭ್ಯಾಸ ಮಡುವದುತರು ಬರುವ ತನ್ನ ವ್ಯವಹಾರ ನೋಡುವದುಪರ ಪರಿಸ್ಥಿತಿಗಳನು ತೂಗಿ ನೋಡುವದು 34'ಶ್ರಾಂತಿ ಅಭ್ಯಾಸಿ ಸರಸ ಸಲ್ಲಾಪನಿಶ್ಚಿಂತೆುಂದ ನಿದ್ರೆಯು ಸೌಖ್ಯರೂಪನಿತ್ಯ ಮಾನವನ ದಿನಚರಿಯ ಈ ರೂಫನಿಶ್ರೇಯಸಕೆ ಸುಲಭ ಸಾಧನವು ಭೂಪಾ 35ಸ್ವಚ್ಛ ಹವೆ ನೀರು ವ್ಯಾಯಾಮ 'ಶ್ರಾಂತಿಸಾತ್ವಿಕ ಸಸತ್ವಾನ್ನ ಪಾನಗಳ ಪ್ರೀತಿಉಚ್ಚತಮ ಧ್ಯೇಯ ಆಚರಣೆಗಳ ರೀತಿಮೋಕ್ಷಕ್ಕೆ ಸಾಧನವು ಇಹದಿ ಸಂತೃಪ್ತಿ 36ದೇಹ ಬಿದ್ದರೆ 'ಂದೆ ಕೀರ್ತಿುರಬೇಕುಕೀರ್ತಿ ಬರುವಂಥ ಕಾರ್ಯವ ಮಾಡಬೇಕುಕಾರ್ಯದೊಳು ಕುಶಲತನ ದಕ್ಷತೆಯು ಇರಬೇಕುಫಲವು ಪರಮಾತ್ಮನಾಧೀನವೆನಬೇಕು 37ಸರ್ವದಾ ಸುಖವೆ ಇದ್ದವರು ಯಾರುಂಟುಅವರವರ ಕರ್ಮ ಫಲವೇ ಅವರ ಗಂಟುಬೆಳತು ಕತ್ತಲೆಯಂತೆ ಚಕ್ರ ಆರುಗುವದುಸುಖ ದುಃಖ ಬರುವಾಗ ಬಂದು ಹೋಗುವುದು 38ಅನುಭವದಿ ಹೆಚ್ಚು ಸಾಧನ ಬೆಳೆಯಬೇಕುಅನುಭವದ ಮಾತುಗಳು ಬಚ್ಚಿಡಲು ಬೇಕುಅನುಭವವು ಬಂತೆಂದು ಗರ್ವ ಪಡಬೇಡಾಗರ್ವದಿಂದಲಿ ಮತ್ತೆ ಕೆಳಗಿಳಿಯ ಬೇಡಾ 39ಅಡಗಿ ಅಂಬಲಿ ಅರ' ಅಂಚಡಿಯ ಕಡೆಗೆಹುಡುಗರ ಬಲಾರೋಗ್ಯ ನಡೆನುಡಿಯ ಕಡೆಗೆಕಡು ಚಾಣ್ಮೆುಂದ ನೋಡುವದು ಸತಿ ಪತಿ ಕೆಲಸಾ 40ಪತಿುಂದಲೇ ಸತಿಯು ಸತಿುಂದ ಪತಿಯುಸತಿಪತಿಯ ಪ್ರೇಮದಿಂದಾತ್ಮದುನ್ನತಿಯುಪತಿಯ ಕೋಪದಿ ಕಲ್ಲು ಆಗುವಳು ಸತಿಯುಸತಿಯ ಶಾಪದಿ ಕತ್ತೆಯಾಗುವನು ಪತಿಯು 41ಸಾ'ಗಂಜಲು ಬೇಡ ಸಾ'ಗಳಬೇಡಾಸಾವು ಅಂದರೆ ಭಯಂಕರ ತಿಳಿಯಬೇಡಾದೇಹಕ್ಕೆ ಬಾಲ್ಯ ಯೌವನ ಮುಪ್ಪಿನಂತೆದೇಹಾಂತರ ಪ್ರಾಪ್ತಿಯೇ ಮರಣಗೀತೆ 42'ದ್ಯಾರ್ಥಿ ಬಡವನಿದ್ದರೆ ಭಿಕ್ಷೆನೀಡುಅಶನಾರ್ಥಿ ಟೊಣಪನಿದ್ದರೆ ದೂರ ಮಾಡುಹಸಿವೆ ಚೆನ್ನಾಗಿ ಇದ್ದರೆ ಊಟ ಮಾಡುಹಸಿಯು ಸಾಕಷ್ಟು ಇದ್ದರೆ ಬಿತ್ತಿನೋಡು43ಶುದ್ಧ ಆಚರೆಣೆುದ್ದರೆ ಮಾತನಾಡುಬುದ್ಧಿ ಬಲು ಚುರುಕು ಇದ್ದರೆ ವಾದ ಮಡುದುಡ್ಡು ರಗಡಿದ್ದರೆ ಘಡಾಮೋಡ ಮಾಡುಜಡ್ಡು ಇದ್ದರೆ ಪಥ್ಯದುಪವಾಸ ಮಾಡು 44ಹಾಳುಹರಟೆಯ ಬಿಟ್ಟು ಶ್ರೀ ಹರಿಯ ಸ್ಮರಿಸುಕಾಲುವನು ನೋಡಿ ಸತ್ಕರ್ಮ ಆಚರಿಸುನಾಳೆ ಮಾಡುವೆನೆಂಬ ಮಾತು ದೂರಿರಿಸುನಾಳೆ ಮಾಡುವ ಧರ್ಮ ಇಂದು ನೀ ಮುಗಿಸು 45ಮನ ಮುಟ್ಟಿ ಸ್ಮರಣೆ ಸಂತತ ಮಾಡಬೇಕುಮನಸು ಓಡಲು ಮತ್ತೆ ಜಗ್ಗಿ ತರಬೇಕುಅನುಭವವು ಬಂದಂತೆ ಮನಸು ಕರಗುವದುಮನಸು ಕರಗಿದರೆ ವಾಸನೆಯು ಅಳಿಯುವದು 46ಎಲ್ಲ ಕಡೆಯಲಿ ಇರುವನೊಬ್ಬನೇ ದೇವಎಲ್ಲ ನಾಮಗಳಿಂದಲೂ ಕರೆಸಿಕೊಳುವಾಯಾವ ಬೇಕಾದ ಹೆಸರಿನ ದೇವರನ್ನುಭಕ್ತಿುಂ ಭಜಿಸಿದರೆ ಬಂದು ಪೊರೆಯುವನು47ಧನಕನಕದಾಶೆಯನು ತೊರೆದವನು ಸಂತವನಿತೆಯರ ಬಲೆಯೊಳಗೆ ಸಿಗದವನು ಸಂತಮನದಿ ಮಹಾದೇವನನು ಕಂಡವನು ಸಂತಜನರೊಳು ಜನಾರ್ಧನನ ನೋಡುವನು ಸಂತ 48ಘೋರ ಯುದ್ಧದಿ ನರನ ರಥವ ನಡೆಸಿಹನುಸೀರೆಯಾಗುತ ಸತಿಯ ಮಾನ ಉಳಿಸಿದನುನೀರಿನವನಾಗಿ ಎಂಜಲವ ಬಳಿದಿಹನುಪರಮ ಪುರುಷನ ಕರುಣೆಗೆಣಿಯು ಉಂಟೇನು 49ಹೃದಯ ದೊಳಗಿದ್ದ ಶ್ರೀಹರಿಯ ಮರೇತುಕಡುದ್ಯೆನ್ಯ ಬಿಡಬೇಡ 'ಷಯದೊಳು ಬೆರೆತುಕಾಮಧೇನು'ನ ಕೆಚ್ಚಲೊಳಿದ್ದ ನೀನುಅಮೃತವನು ಬಿಟ್ಟು ರತ್ನವನು ಕುಡಿವೆಯೇನು 50ಸರ್ವ ದುಃಖಗಳು ನಿರ್ಮೂಲವಾಗುವದುಸಂಸಾರ ಪರಮಾರ್ಥ ಕೂಡಿ ನಡೆಯುವವುಪ್ರಭು ರಾಮಚಂದ್ರನ ಪ್ರಸಾದ ಮ'ಮೆಯನುಪಠಿಸಿ ಆಚರಿಸಿದರೆ ಸುಖದಿ ಬಾಳುವನು 51ಜಯಜಯತು ಆರ್ಯ ಭೂಮತೆ 'ಖ್ಯಾತೆಜಯತು ಭಾರತಮಾತೆ ಸರ್ವಜನ ತ್ರಾತೆಜಯಜಯತು ಜಯ'ಂದ ಜನನಿ ಕಡು ಕರುಣಿಜಯ ಜಯತು ಸರ್ವ ಸಂಸ್ಕøತಿಯ ಮುಕುಟಮಣಿ 52ಅತಿಥಿ ಬಂದರೆ ಮನ ದೊಡ್ಡದಿರಲಿಒಣಹೆಮ್ಮೆ ಬೇಡ ಆದರದ ಮಾತಿರಲಿಮಾತು ಕೃತಿ ನಿಜ ಪ್ರೇಮ ತುಂಬಿರಲಿಊಟ ಉಪಚಾರದಿಂದ ಸಂತೋಷಗೊಳಲಿ 53ಗುಡಿಯೇಕೆ ಬೇಕು ಮನದೊಳಗೆ ಹರಿಯುಂಟುಅದರ ಕದ ತೆಗೆಯ ಪ್ರತಿಬಂಧವೇನುಂಟುಗುಡಿಯೊಳಗೆ ಹೊಗಿಸಬೇಕೆಂಬುವುದು ಛಲವುಛಲ 'ದ್ದರೇನದಕೆ ಆಧ್ಯಾತ್ಮ ಬೆಲೆಯು54ಮನ ಪ'ತ್ರ'ದ್ದರೆ ದೇವ ಒಲಿವಾಮನಸು ಅಪ'ತ್ರ'ದ್ದರೆ ದೇವ ಕುದಿವಾಮನ ಸುಪ್ರಸನ್ನ'ದ್ದರೆ ದೇವ ಒಲಿವಾಮನಸು ಧುಸುಮುಸು ಇದ್ದರೆ ದೇವ ಕುದಿವಾ 55ಮನಸು ನಿರ್ಭಯ'ದ್ದರಾ ದೇವ ಒಲಿವಾಮನಸು ನಿರ್ಮಲ'ದ್ದರಾ ದೇವ ಒಲಿವಾಮನಸು ನಿರಹಂಕಾರವಾದಾಗ ಬರುವಾಮನಸು ನಿಷ್ಕಪಟವಾದರೆ ಬಂದು ಪೊರೆವಾ 56ಅನ್ಯರಿಗೆ ನಿನ್ನ ಭಾರವ ಹಾಕಬೇಢನಿನ್ನ ಯೋಗ್ಯತೆ'ುೀರಿ ಭಾರ ಹೊರಬೇಡನಿನ್ನ ಮನೆತನದ ಜಗಳ ಬೈಲಿಗಿಡಬೇಡಹೆಣ್ಣು ಮಕ್ಕಳ ಮೇಲೆ ಕ್ಕೆ-ಎತ್ತಬೇಡ 57ನಿನ್ನ 'ರಿಮೆಯನು ನೀ ಹೇಳಬೇಡಅನ್ಯರನು ಕೀಳೆಣಿಸಿ ಮಾತಾಡಬೇಡಕಣ್ಮುಚ್ಚಿ ಇನ್ನೊಬ್ಬರನುಕರಣೆ ಬೇಡನಿನ್ನ ಸಂಸ್ಕøತಿಯ ವೈಶಿಷ್ಟ್ಯ ಬಿಡಬೇಡ 58ಸು'ಚಾರದಿಂದ ಧ್ಯೇಯವ ಗೊತ್ತುಪಡಿಸುಗೊತ್ತುಪಡಿಸಿದ ಧ್ಯೇಯವನ್ನು ನಿತ್ಯಸ್ಮರಿಸುಮುಟ್ಟಲಾ ಧ್ಯೇಯವನು ಶಕ್ತಿ ಸಂಗ್ರ'ಸುಶಕ್ತಿಯನು ಚಾತುರ್ಯದಿಂದ ನೀ ಬಳಿಸು 59ಸಮಯ ಪ್ರತಿಕೂಲ'ರೆ ವೈರಿಗಳ ನ'ುಸುನ'ುಸಿ ಒಳಹೊಕ್ಕವರ ಬಲವ ಹದಗೆಡಿಸುಶ್ರಮಪಟ್ಟು ಅ'ುತಬಲ ಗುಪಿತದಿಂ ಬೆಳಿಸುಸಮಯ ಸಾಧಿಸಿ ದುಷ್ಟಜನರನು ಸಂಹರಿಸು60ದೇಹದೊಳು ನೀನುಂಟು ದೇಹ ನೀನಲ್ಲನಾ ಎಂಬ ಜ್ಞಾನ ನಿನಗುಂಟು ಆದಕಿಲ್ಲನೀನು ಈ ದೇಹದಿಂದ ಹೊರಬೀಳಲಾಗಹೆಣವೆಂದು ಕರೆಯುವರು ದೇಹವನು ಬೇಗ 61ಹುಟ್ಟುವವ ನೀನಲ್ಲ ಹುಟ್ಟುವದು ದೇಹಬೆಳೆಯುವವ ನೀನಲ್ಲ ಬೆಳೆಯುವದು ದೇಹಸಾಯುವವ ನೀನಲ್ಲ ಸಾಯುವದು ದೇಹರೂಢಿಯೊಳು ನಿನಗಿದನು ಹಚ್ಚುವದು ಮೋಹ62ಖೋಡಿ ಮನವನು 'ಡಿದು ಸಾಧು ಮಡುವದುಸಾಧು ಮಾಡುತ ನಾಮ - ಘೋಷ ಹಚ್ಚುವದುಓಡಿ ಹೋಗಲು ಮತ್ತೆ ಎಳೆದೆಳೆದು ತಂದುಬೋಧಿಸುತ ನಾಮ ಜಪದೊಳು ಸೇರಿಸೆಂದು 63ಒಮ್ಮೆ ಹರಿನಾಮದೊಳು ಮನಸು ಸೇರಿದರೆಅದಕೆ ಆಗುವ ಸುಖವು ಆ ರುಚಿಯು ಬೇರೆಆ ರುಚಿಯ ಆ ಸುಖವು ಹತ್ತಿದರೆ ಮನಕೆತಿರುಗಿ ಎಂದಿಗೂ ಅದು ಹೋಗದದು 'ಷಯಸುಖಕೆ64ಚಿತ್ತ ಸ್ಥಿರ'ಲ್ಲದಿರೆ ಬುದ್ಧಿ ಸ್ಥಿರ'ಲ್ಲಬುದ್ಧಿ ಸ್ಥಿರ'ಲ್ಲದಿರೆ ಭಾವನೆಯು ಇಲ್ಲಭಾವನೆಯು ಇಲ್ಲದಿದ್ದರೆ ಶಾಂತಿುಲ್ಲ ಶಾಂತಿಯೇ ಇಲ್ಲದವ ಸುಖವೇನು ಬಲ್ಲ 65ಅನುಕೂಲ ಮತ ಮಾತ್ರ ನೀ ಎಣಿಸಬೇಡಪ್ರತಿಕೂಲ ಮತ ಉಪೇಕ್ಷೆಯ ಮಾಡಬೇಡಅನುಕೂಲ ಪ್ರತಿಕೂಲಗಳನು ತಿಳಿ ತಿಳಿದುಏನಾದರೊಂದು ಸಾಹಸ ಕಾರ್ಯ ಮಾಡು 66ಉದ್ಯೋಗದೊಳು ಸದಾ ಆನಂದ ಉಂಟುಉದ್ಯೋಗದೊಳಗೆ ಲಕ್ಷ್ಮಿಯ ವಾಸವುಂಟುಉದ್ಯೋಗವನು ಮಾಡಿ ದೇವರನು ಬೇಡುಉದ್ಯೋಗ ಬಿಟ್ಟು ಕುಳಿತರೆ ನಿನಗೆ ಕೇಡು 67ದೀರ್ಘ ಯೋಚನೆಯ ಮಾಡುತ ನೀ ಕೂಡಬೇಡಯೋಗ್ಯ ಮುಂಬೆಳಕು ಇಲ್ಲದೆ ಧುಮುಕಬೇಡ'ಗ್ಗಿ ಮೈಮರೆಯದಿರು ದೈವ ತೆರೆದಾಗಕುಗ್ಗಿ ಎದೆ ಒಡೆಯದಿರು 'ಧಿ ಕಾಡುವಾಗ 68ದೈವವನಕೂಲ'ದ್ದಾಗ ಎಚ್ಚರಿಕೆಗರ್ವ ಸೇರುವದು ತಿಳಿಯದಲೆ ಎಚ್ಚರಿಕೆಗರ್ವದಿ ಸ್ಮøತಿಗೆ ಸಮ್ಮೋಹವೆಚ್ಚರಿಕೆಸಮ್ಮೋಹದಿಂದ ಸರ್ವನಾಶ ಎಚ್ಚರಿಕೆ 69ದೈವ ಯತ್ನಗಳ ಗತಿ ಗಹನವಾಗಿಹುದುಒಬ್ಬೊಬ್ಬರನುಭವವು ಒಂದೊಂದು ಇಹುದುವಾದದಿಂ ಬಗೆಹರಿಯದಂಥ 'ಷಯ'ದುಇದರ ಹದ ತಿಳಿದು ಯತ್ನವಂ ಮಾಡುವದು 70ಜೋಲು ಮೋರೆಯ ಹಾಕಿ ನೀ ಕೂಡಬೇಡಕಾಲು ಅಪ್ಪಳಿಸಿ ಕೆಲಸಕೆ ಹತ್ತಬೇಡಸ್ಟೈಲು ಉಡುಗೆಯ ಉಟ್ಟುಕೊಂಡೋಡಬೇಡಮೈಲಿಗೆಯ ಮನದಿಂದ ಜಪ-ಮಾಡಬೇಡ 71ಕಾರ್ಯ ಮಾಡುವ ಜನಕೆ ಮರ್ಯಾದೆ ಮಡುಬಾಯಬಡುಕ ಜನರ ಕೃತಿಯನು ತಿಳಿದು ನೋಡುಧೈರ್ಯದಿಂ ದುರ್ಜನರ ಕೂಡ ಹೋರಾಡುಆರ್ಯ ಸಂಸ್ಕøತಿಯ ಸಂರಕ್ಷಣೆಯ ಮಾತು 72ಗುಣ ಕರ್ಮಗಳ ನೋಡಿ ಮಾನವನು ಮಾಡುಒಣ ಜನ್ಮ ಜಾತಿ ತುಸು ದುರ್ಲಕ್ಷ ಮಾಡುಗುಣ ಕರ್ಮದಿಂದ ಅತಿ ನೀಚನಾದವನುಜನುಮ ಮಾತ್ರದಿ ಹೇಗೆ ಶ್ರೇಷ್ಠನಾಗುವನು73ತಪ್ಪು ಇಲ್ಲದೆ ಕ್ಷಮೆಯ ಬೇಡುವವ ಮೂರ್ಖತಪ್ಪಿದರು ಒಪ್ಪಿದವನು ಕಡುಮೂರ್ಖತಪ್ಪು ಆಗುವದು ಮಾನವನ ಸಹಜಗುಣತಪ್ಪು ಒಪ್ಪುತ ತಿದ್ದಿಕೊಳ್ಳುವದು ಸುಗುಣ 74ನಿನ್ನ ಬಂಧುಗಳೆ ನಿನಗಾಗುವರು ಕೊನರೆಗೆಅನ್ಯರಿಗೆ ಆ ಕರುಳು ಬರುವದು ಹೇಗೆನಿನ್ನ ಬಂಧುಗಳೆಲ್ಲ ಮೂರ್ಖರೆನಬೇಡಅನ್ಯರಿಂದ ನೀ ಮೂರ್ಖನೆನಿಸಿಕೊಳಬೇಡ 75ಜನರ ಮನೆಗಳು ಬಹಳ ದಿವಸ ಇರಬೇಡಇರುವದೇ ಆದರವರಿಗೆ ಭಾರ ಬೇಡಅರಿತವರ ಕೆಲಸಗಳ ಮನೆಯಂತೆಮಡುಗೃಹದ ರೀತಿರಿವಾಜು ಕೆಡದಂತೆ ನೋಡು 76ದುಡ್ಡು ಇದ್ದಾಗ ಎಲ್ಲರ ಪ್ರೀತಿಯುಂಟುದುಡ್ಡು ಕಳಕೊಂಡು ಹೋದರೆ ಮೋರೆಗಂಟುದುಡ್ಡಿನಿಂದಲೆ ಜನರ ಬೆಲೆ ಕಟ್ಟಬೇಡದೊಡ್ಡ ಗುಣಗಳನರಿತು ನ'ುಸದಿರಬೇಡ 77ಧನದ 'ಷಯದಿ ಖಂಡ ತುಂಡ ಇರಬೇಕುಮನಬಿಚ್ಚಿ ಮೊದಲಿಗೆ ಮಾತಾಡಬೇಕುಒಣ ಮಬ್ಬುತನ ಮನದಮಂಡಿಗೆಯು ಬೇಡಕೊನೆಗೆ ಗುಣಗುಟ್ಟುತಲಿ ಹಳಹಳಿಸಬೇಡ 78ಯಂತ್ರಮಯ ಜೀವನದ ಯುಗವು ನಡೆದಿಹುದುಸ್ವಾತಂತ್ರ್ಯವೆಲ್ಲಿ ಬಡವರಿಗೆ ಉಳಿದಿಹುದುದ್ರವ್ಯಮಯವಾದ ವ್ಯವಹರ ಸಾಗಿಹುದುದೇವ ಧರ್ಮಕೆ ಅರ್ಧಚಂದ್ರ ಬಂದಿಹುದು 79ತಾಯ್ತನದ ಸುಖಕೆ ಸರಿಯಾದ ಸುಖ'ಲ್ಲತಾಯ್ತನದ ಕರುಳಿಂಗೆ ಬೆಲೆಯಂಬುದಿಲ್ಲತಾುಗಿಂದಧಿಕ ದೈವತವು ಬೇರಿಲ್ಲತಾಯ್ - ಸೇವೆಗಿಂದಧಿಕ ಪುಣ್ಯಾವೆ ಇಲ್ಲ 80ಚನ್ನಾಗಿ ಸಂಸಾರ ಮಾಡಬಲ್ಲವನುಸುಲಭದಿಂ ಪರಮಾರ್ಥವನು ಸಾಧಿಸುವನುಸಂಸಾರದೊಳಗಿದ್ದು ಸನ್ಯಾಸಿಯೆನಿಸುಸನ್ಯಾಸಿಯಾಗಿ ಸಂಸಾರದೊಳು ಈಸು81ಮನೆಯಲ್ಲಿಯೇ ಸ್ವರ್ಗ ಮನೆಯಲ್ಲಿಯೇ ನರಕಜಾಣರಿಗೆ ತಿಳಿಯುವದು ನೋಡಿದರೆ ಗಮಕಜಾಣ ಪ್ರೇಮಳ ಪತಿಯಮನೆ ಸತಿಗೆ ಸ್ವರ್ಗಕೋಣ ಕರ್ದಮ ಕಟುಕ ಪತಿುರಲು ನರಕ 82ಪತಿಯ ಮನ ಒಲಿಸಿ ಕೋತಿಯ ತೆರದಿ ಕುಣಿಸಿಅತ್ತೆ ಮಾವರು ಬಂಧುಬಳಗವನು ಹೊರನುಗಿಸಿಸ್ವೇಚ್ಛೆುಂ ಎದೆಮೆಟ್ಟಿ ಬೇರಿರುವ ಸೊಸೆಸೊಸೆಯಲ್ಲ ರಕ್ಕಸಿಯು ಕಿ'ಹೊಕ್ಕ ತೊಣಸಿ83ಸರ್ವದಾ ಸತ್ವಗುಣಿ ಶಾಂತ ನಿರುತಿಹನುರಾಜಸನ ಶಾಂತಿುಂ ಧಡಪಡಿಸುತಿಹನುಕಿರಿಕಿರಿಯು ತಾಮಸಿಗೆ ಬಿಟ್ಟುರುವದಿಲ್ಲಾತ್ರಿಗುಣಗಳ ದಾಟದಿದ್ದರೆ ಮೋಕ್ಷ'ಲ್ಲಾ 84ಅನ್ನದೊಳು ಮುಖ್ಯ ಸಾತ್ವಿಕ ಗುಣವು ಬೇಕುಸಂಪಾದನೆಯ ಮಾರ್ಗ ಸರಳ'ರಬೇಕುಸಂಸರ್ಗ ಸಂಸ್ಕಾರ ಸುಷ್ಟ'ರಬೇಕುಸಾತ್ವಿಕಾನಂದ ಮನದಿಂದ ಉಣಬೇಕು 85ಮೂಲ ಮನ'ಹುದು ಮೂರರೊಳೊಂದು ಪಾಲುಸನ್ನಿವೇಶಗಳಿಂದ ಮತ್ತೊಂದು ಪಾಲುತಿನ್ನುವಾ ಅನ್ನದಿಂದ ಉಳಿದೊಂದು ಪಾಲುಮೂರು ಕೂಡಿದ ಮನವೆ ನಿನಗೆ ಹರಿಗೋಲು86ಪ್ರಾರಬ್ಧವನುಭ'ಸಿ ತೀರಿಸಲು ಬೇಕುಅಪರೋಕ್ಷದಿಂದ ಸಂಚಿತ ಕಳಿಯಬೇಕುಸರ್ವದಾ ನಿರಪೇಕ್ಷ ಸತ್ಕರ್ಮ ಬೇಕುನಿರಭಿಮಾನದಿ ಕರ್ಮದ ಬೀಜ ಸುಡಬೇಕು87ದಯೆಯು ಧರ್ಮದಮೂಲ ದಯವಂತನಾಗುಭಯವು ದುಃಖದಮೂಲ ನಿರ್ಭಯನು ಆಗುಲೋಭ ಪಾಪದ ಮೂಲ ನಿರ್ಲೋಭಿಯಾಗುತ್ಯಾಗ ಪುಣ್ಯದ ಮೂಲ ತ್ಯಾಗಿ ನೀನಾಗು 88ನಿನ್ನ ಉದ್ಧಾರವನು ನೀ ಮೊದಲ ಮಾಡುಮನೆತನದ ಉನ್ನತಿಯಕಡೆಗೆ ನೀ ನೋಡುನಿನ್ನ ನೆರೆಹೊರೆ ಜನರ ಕಲ್ಯಾಣಮಾಡುಆಮೇಲೆ 'ಶ್ವದದ್ಧಾರ ಮಾತಾಡು 89ಹಳೆಯದಿದ್ದರೆ ಎಲ್ಲ ಒಳಿತು ಎನಬೇಡಹೊಸದೆಂಬ ಮಾತ್ರದಿಂದಲೆ ಹಳಿಯಬೇಡಒಳಿತು ಕೆಡಕುಗಳು ಎಲ್ಲದರಲ್ಲಿ ಇಹವುತಿಳಿದು ಉಪಯೋಗಿಸಿದರದು ಜಾಣತನವು 90ಕಾಲಮ'ಮೆಯ ಕಷ್ಟ ಬಂದಿತೆನಬೇಡಕಾಲಕ್ಕೆ ಹೆಚ್ಚಿನ ಮಹತ್ವ ಕೊಡಬೇಡಕಾಲ ನಿರ್ಮಾಣ 'ರಿಯರ ಕೈಯ್ಯೊಳಿಹುದುಎಂಥ 'ರಿಯರು ಅಂಥ ಕಾಲ ಬರುತಿಹುದು 91'ರಿಯರಾಚರಣಿಯಂ ಮನೆತನದ ಬೆಳಕು'ರಿಯರಾಚರಣೆುಂ ಮನೆತನಕೆ ಹುಳುಕು'ರಿಯರೇ ಕಾರಣರು ಮನೆಯ ಸುಸ್ಥಿತಿಗೆ'ರಿಯರೇ ಕಾರಣರು ಮನೆಯ ದುಸ್ಥಿತಿಗೆ 92ದೇಹವೇ ರಥವು ಸಾರಥಿಯು ಪರಮಾತ್ಮಜೀವ ಅರ್ಜುನ ಧರ್ಮ ಸಮ್ಮೂಡ ಆತ್ಮಸರ್ವ ಭಾವದಿ ಶರಣುಹೊಗು ಸಾರಥಿಗೆಸಾರಧಿಯು ಮುಟ್ಟಿಸುವ ನಿನ್ನ ಸದ್ಗತಿಗೆ 93ಜ್ಞಾನಪೂರ್ವಕ ''ತ ಕರ್ಮಗಳ ಮಾಡುಚಿತ್ತಶುದ್ಧಿಗೆ ಕರ್ಮಸಾಧನವು ನೋಡುಉದ್ದೇಶ ಪರಿಣಾಮಗಳ ತೂಕ ಮಾಡುಮೂಢತನ ರೂಢಿಗಳನರಿತು ಬಿಟ್ಟುಬಿಡು 94ಬಾಲಭಾವದಿ ದೇವರೊಳು ಹಟವಮಾಡುಬಾಲಭಾವದಿ ದೇವರೊಳು ಮಮತೆಮಾಡುಬಾಲಭಾವದಿ ದೇವರಿಗೆ ಬೇಡಿಕಾಡುಬಾಲಭಾವದಿ ನಿನ್ನ ಸರ್ವಸ್ವ ನೀಡು 95ಮಾತೃಭಾವದಿ ಅವನ ತೊಡೆಯ ಮೇಲಾಡುಮಾತೃಭಾವದಿ ನೀನು ವಾತ್ಸಲ್ಯ ಮಾಡುಮತೃಭಾವದಿ ತೂಗಿ ತೊಟ್ಟಿ ಮುದ್ದಾಡುಮಾತೃಭಾವದಿ ಬಿದ್ದು ಕಿರಿಕಿರಿಯಮಾಡು 96ಸಖ್ಯಭಾವದಿ ಹಾಲು ಮೊಸರೆರೆಯ ಬೇಕುಸಖ್ಯಭಾವದಿ ಬೆಣ್ಣೆ ಬಾಯ್ತುಂಬ ಬೇಕುಸಖ್ಯಭಾವದಿ ಕೊಳಲಿನೊಳು ಕುಣಿಯಬೇಕುಸಖನೆಂದು ಗೋಪಿಯಂದದಿ ಕುಣಿಸಬೇಕು 97ನಿನ್ನೊಳಗೆ ಆತನನು ನೀ ನೋಡಬೇಕುಅವನೊಳಗೆ ಸರ್ವವನು ನೀ ಕಾಣಬೇಕುತನ್ನತನ ಮರೆತು ಅವನೊಳು ಬೆರೆಯಬೇಕುಅವನ ಸೂತ್ರದ ಬೊಂಬೆ ನೀನಾಗಬೇಕು 98'ುೀನನಾದರೆ ಅವನ ಕಣ್ಣು ನೀನಾಗು ಕೂರ್ಮನಾದಾಗವನ ಬೆನ್ನು ನೀನಾಗುವರಾಹರೂಪದ ಹರಿಯ ಕೋರೆ ನೀನಾಗುನರಹರಿಗೆ ನೀ ಹದನವಾದ ನಖವಾಗು 100ವಟುವಾಮನಗೆ ಪಾದರಕ್ಷೆ ನೀನಾಗುದುಷ್ಟ ಸಂಹಾರಕನ ಪರಶು ನೀನಾಗುಅಟ'ವಾಸಗೆ ಬಿಲ್ಲುಬಾಣ ನೀನಾಗುದಿಟ್ಟ ಗೊಲ್ಲನ ಕರೆದ ಕೊಳಲು ನೀ ನಾಗು 101ಬುದ್ಧನಾದರೆ ಬುದ್ಧಿವಂತ ನೀನಾಗುಕಲ್ಕಿಯಾದರೆ ಚಲುವ ಕುದುರೆ ನೀನಾಗುಎಲ್ಲಿದ್ದರೂ ಅವನ ನೆರಳು ನೀನಾಗುಪ್ರಹ್ಲಾದ ದ್ರುವ ಅಂಬರೀಷ ನೀನಾಗು 102ಧನದೊಳಗೆ ಧನ ತವೋಧನನು ನೀನಾಗುಭಾಗ್ಯದೊಳು ವೈರಾಗ್ಯ ಭಾಗ್ಯವಂತನಾಗುಇಂದ್ರಿಯಂಗಳ ಜಯದಿ ನೀ ಶೂರನಾಗುಪಂಡಿತನು ತತ್ವದಾಚರಣೆಯೊಳು ಆಗು103ಸ್ವಾತಂತ್ರವೇ ಸ್ವರ್ಗ ಪರತಂತ್ರ ನರಕಮಾತೃಭೂ'ುಯ ಸೇವೆ ಮಡದವ ಶುನಕಪತಿತರುದ್ಧಾರ ಮಾಡುವದು ಸದ್ಧರ್ಮಪತಿತರನು ತುಳಿಯುವದು ಸೈತಾನಕರ್ಮ 104ಸಂಸಾರ ಸಾಗರವ ದಾಟಿಸಲು
--------------
ಭೂಪತಿ ವಿಠಲರು
ಗುರು ಭಾಗ್ಯ ಗುರುಭಾಗ್ಯ | ಗುರು ಭಾಗ್ಯವಯ್ಯಾ ಪ ನರಹರಿಯ ಕಲ್ಯಾಣ | ಪರಿಕಿಸುವ ಸೌಭಾಗ್ಯಅ.ಪ. ಸುಜನ ಸಂಗ ಫಲ | ವರ್ಣಿಸಲು ಅಳವೇ1 ಮಾಸ | ವರಸಪ್ತ ಸಿತ ಪಕ್ಷವರರವಿಯ ದಿನ ಝಾವ | ಎರಡು ಮೂರರ ಮೇಲೆ 2 ಸೀತೆಪತಿ ರಾಮನಾ | ದೂತರ ಪ್ರೇರಣೆಯಮಾತುಗಳು ಮತ್ತೆ ಗುರು | ಜಾತರುಕುತಿಗಳಾ |ಆತು ಅಂಕಿತ ಮಾಲೆ | ಪ್ರೀತಿಯಿಂ ಗುರುದತ್ತಶ್ರೀ ತಂದೆ ಮುದ್ದು ಮೋಹನ್ನ | ವಿಠಲಗರ್ಪಿಸಿದೆ 3 ಪರಿ | ವಿತತವಾಗಿರುವಂಥಶತ ದಶದ ಮೇಲಾಗಿ | ಕೃತಗಳಾಗಿರುವಾಕೃತಿಗಳನು ಪೋಣಿಸುತ | ತುತಿಸಿ ಭಕುತಿಯಲಿಂದಕೃತಿ ಪತಿಯ ಕೊರಳಿಗ | ರ್ಪಿತವು ಎಂದೆನುವಾ4 ಪಾದ ಸಂಸ್ಮರಿಸಿ | ಸ್ಮರಿಸಿ ಸುಖಿಯಾದೇ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗುರುನಾಥ ಗುರುನಾಥ ಹೇಳಿದ ಮಾತು ಮಾತೆನ್ನ ಬಹುದು ಮಾತುವೊಂದೇಪ ವೇದಕ್ಕೆ ನಿಲ್ಲದು ವಿವರಕ್ಕೆ ತೋರದುಆದಿ ಪುರಾಣದ ಅರ್ಥ ಅರ್ಥ ಅದುವಾದಕ್ಕೆ ದೂರದು ಕರವಶವಾಗದುಸಾಧಿಸಿ ತನಗೆ ತಿಳಿದು ಹೇಳಿದ ಮಾತು ಮಾತು ವೊಂದೇ 1 ಮೂರರ ನಡುವದು ಮೂಲವೆ ತಾನದುಧೀರ ಧೀರರೆಲ್ಲ ದಿಟ್ಟಿಪುದುಬೇರೆ ಮತ್ತಿಲ್ಲದು ಬೆಗಡಾಗಿ ಇಹುದು 2 ಸಾರಾಯದಿಂದೆನಗೊಲಿದು ಹೇಳಿದ ಮಾತು ಮಾತುವೊಂದೇಮಾತಿನ ಮಹಿಮೆಯ ಮತ್ತೇನ ಹೇಳಲಿಪ್ರೀತಿ ಎಂಬವೆಲ್ಲ ಪೀಡೆಯಾದವುಭೂತನಾಥ ಚಿದಾನಂದ ಭೂಪತಿಯಾದಈ ತೆರದಲಿ ತಾನಿಂತು ಹೇಳಿದ ಮಾತು ಮಾತುವೊಂದೇ3
--------------
ಚಿದಾನಂದ ಅವಧೂತರು
ಗುರುವಿನರಿಯದೆ ಮರುಳಲೋಕ ಒಂದೊಂದು ಪರಿ ಗುರುಮಾಡಿಕೊಂಡುದರ ಹೊರವುತಿದೆ ಧರೆಯೊಳು ಬರಿದೆ ಭ್ರಮೆಗೊಂಡಿಹ್ಯದು ಪರಗತಿಯ ಜರೆದು ಶ್ರೀ ಗುರುಪಾದವನ್ನರಿಯದೆ 1 ಸತ್ವಧಾತುದ ನೆಲೆಯು ತತ್ವ ಮೋಹಲಾದನು ಮತ್ತೈದು ಮುದ್ರೆಗಳ ವ್ಯಾಪಿಸಿಹ ಪ್ರಾಣವನು ಮುದ್ರಿಸಿದಾತ ಪರಮಗುರುವು 2 ಸತ್ವ ರಜ ತಮವು ಮೊದಲಾದ ಗು- ಣತ್ವಗಳು ಪಂಚಭೂತಾತ್ಮದ ವಸ್ತಿ ವಿವರಣಗಳು ವಿಸ್ತಾರಗತಿಗಳನು ವಿಸ್ತರಿಸಿ ತೋರಿಸಿದಾತ ಸಾಕ್ಷಾತ ಗುರುವು 3 ಸ್ವಪ್ನ ಸುಷುಪ್ತಿ ಜಾಗ್ರತಿ ತ್ರಯವಸ್ಥಿತಿಗಳು ಪ್ರಾಣಪ್ರಣಮ್ಯ ಪ್ರವೃತ್ತಿ ನಿವೃತ್ತಿಗಳು ಶಕ್ತಿ ಉನ್ಮನಿಯ ಉದ್ಬವ ಗತಿಯು ತೋರಿಸಿದಾತ ಸಾಕ್ಷಾತ ಗುರುವು 4 ಹತ್ತು ಮತ್ತೆರಡು ಧ್ವನಿ ವತ್ತಿಗ್ಹೇಳೆನಿಸುವದ ರತ್ನ ಮೂರರ ಪ್ರಭೆಯ ದಾಟಿ ಸಂಜೀವನಿಯ ಸತ್ರಾವಿ ಜೀವನ ಕಳಾ ಮೃತವದೋರಿಸಿದಾತ ಸಾಕ್ಷಾತ ಗುರುವು 5 ಒತ್ತಿ ಆಧಾರ ಬಲದೆತ್ತಿ ಕುಂಡಲಣಿಯ ಕೆತ್ತಿ ಸರ್ಪೆತ್ತಿ ಮುಖ ಮಾಡಿ ಊಧ್ರ್ವ ಗತಿಯು ಮತ್ತೆ ಷಡಚಕ್ರಗಳ ಗತಿಗಳನು ದೋರಿದಾತ ಸಾಕ್ಷಾತ ಗುರುವು6 ಪತಿತ ಮಹಿಪತಿಯ ಪಾವನ್ನಗೈಸುತ್ತಮದಿ ಉತ್ಪತ್ತಿ ಸ್ಥಿತಿ ಲಯವು ತಾರಿಸಿ ಸ- ದ್ಗತಿಯು ನಿತ್ತಿಹ್ಯಾನಂದ ಘನ ಸತ್ಯ ಸದ್ಗುರು ಮೂರ್ತಿ ಸಾಕ್ಷಾತ ಪರಮಗುರುವು | 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಚಂದ್ರಭಾಗ ಹರಿ ವಿಠಲ | ಸಲಹ ಬೇಕಿವಳಾ ಪ ಇಂದೀವರಾಕ್ಷ ಹರಿ | ಮಂದರೋದ್ಧಾರೀ ಅ.ಪ. ಮೋದ ಬಡಿಸುವ ಭಾರಮೋದ ಮಯ ನಿನಗಲ್ಲ | ದಧಾರಿಸಿಹುದೋಆದಿ ಮೂರುತಿ ಹರಿಯೆ | ಸಾಧನ ಸಾಧ್ಯವಾಗಿಕಾದುಕೋ ಬಿಡದಿವಳ | ಮಾಧವನೆ ದೇವಾ 1 ತರತಮಾತ್ಮಕ ಜ್ಞಾನ | ಅರುಹುತಿವಳಿಗೆ ಭೇದಎರಡು ಮೂರರ ಅರಿವು | ನೆರೆ ಕೈಗೂಡಲೀಹರಿಯೆ ಸರ್ವೋತ್ತಮನು | ಸುರಪಾದಿ ಸುರರೆಲ್ಲಹರಿಯ ಕಿಂಕರರೆಂಬ | ವರಜ್ಞಾನ ವಿರಲಿ 2 ಆಗು ಹೋಗುಗಳಲ್ಲಿ | ವೇಗ ಸಮತೆಯು ಬರಲಿಜಾಗು ಮಾಡದೆ ದ್ವಂದ್ವ | ಸಹನೆ ಬರುತಿರಲೀನಾಗಾರಿ ವಾಹನನ | ನಾಮ ಸುಧೆ ಸರ್ವದಾಸಾಗಿ ಮನ ಸವಿವಂತೆ | ಹಗಲಿರುಳು ಇರಲೀ 3 ಕಾಲ | ಮೋದದಿಂ ಕಳೆವಂತೆನೀ ದಯದಿ ಪಾಲಿಸುತ | ಕಾದುಕೋ ಇವಳಾಬೋಧ ಮೂರುತಿಯಾಗಿ | ಹೇ ದಯಾಕರ ಕೃಷ್ಣಾಆದರದಿ ಸುಜ್ಞಾನ | ಭಕ್ತಿಯನ್ನೀಯೋ 4 ಭವ ಬಂಧ ಬಿಡಿಸುವುದುಶ್ರೀವರನೆ ಶ್ರೀಗುರೂ | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಚಿಂತಿಸೋ ಭಾರತವ ನೀ ಚಿಂತಿಸೊ ಪ. ಚಿಂತಿಸೊ ಭಾರತ ಮಹಿಮಾ | ಸಿರಿಕಾಂತನೆ ಉತ್ತಮೋತ್ತಮಾ | ಆಹಪಂಕ್ತಿಪಂಕ್ತಿಯೊಳಂತೆ | ಚಿಂತಿತ ಫಲದನಸಂಗ್ತಿ ಪೇಳುವ ಶ್ರುತಿ | ಅರ್ಥ ಭೋಧಿಪುದೆಂದು ಅ.ಪ. ಕಾಳಗ ಸರ್ವ | ಧೀಶನ ಮಹಿಮೆಯ 1 ಅಧಿಭೂತ ಅಧ್ಯಾತ್ಮ ಉಂಟು | ಮತ್ತೆಅಧಿದೈವವೆಂಬುದು ಉಂಟು | ಕೇಳುವಿದಿತವಾಗುವುದಲ್ಲ ಗಂಟು | ಗುರುಮುದದಿಂದ ಬಿಡಿಸಲೀ | ಗಂಟು | ಆಹಅದುಭುತಾರ್ಥಗಳೆಲ್ಲ | ವಿದಿತವಾಗುತ ಹರಿಹೃದಯಾಂತರಂಗನ | ನಿಧಿಧ್ಯಾಸನಕ್ಕವಕಾಶ 2 ಮೂರ್ಬಗೆ ಭಾಷೆಗಳಲ್ಲಿ | ಉಕ್ತಸಾರ ಪ್ರಮೆಯಂಗಳಲ್ಲಿ | ಹರಿ ಉ-ದಾರ ಗುಣಂಗಳು ಅಲ್ಲಿ | ಉಕ್ತಮೀರದೆ ಸ್ಪಷ್ಟತ್ವದಲ್ಲಿ | ಆಹನೇರವಾಗಿಯೆ ಪೇಳ್ದ | ಕಾರಣ ಕರೆವರುಮೂರರೊಳ ಗೊಂದು | ಸಾರಸಮಾಧ್ಯೆಂದು 3 ದರ್ಶನಾಂತರ ಸಿದ್ಧವಾದ | ವೈಷ್ಣ್ವದರ್ಶನ ಪ್ರತ್ಯುಕ್ತವಾದ | ಶೈವದರ್ಶನಾದಿ ಸಿದ್ಧವಾದ | ವಸ್ತುದರ್ಶಿತ ಶಿವನರ್ಚಿಸೀದ | ಆಹ ವಿ-ಮರ್ಶನ ಯೋಗ್ಯ ಸ | ದೃರ್ಶನ ದಿಂದಲಿದರ್ಶನ ಭಾಷೆ ದಿ | ಗ್ದರ್ಶನ ವಿದು ತಿಳಿ 4 ಶೂಲಾಟ್ಟ ಜನಪದವೆಂಬ | ಶಿವಶೂಲವು ಚತುಷ್ಪಥವೆಂಬ | ಕೇಶಶೂಲಿಗಳ್ಪ್ರಮದೇರು ಎಂಬ | ಯುಗಕಲಿಯೊಳಗಿಹರು ಎಂಬೆಂಬ | ಆಹಮೇಲಾದ ಗೂಢಾರ್ಥ | ಜಾಲಗಳೆಲ್ಲವುಓಲೈಸು ಗುಹ್ಯದ | ಭಾಷೆ ಎಂದೆನುತಲಿ 5 ಪರ ಪಾಂಡವಾದಿಗಳ್ಪೆಸರೆಂದು 6 ಸ್ವರವರ್ಣ ವಾಕ್ಯ ಭಾರತ | ಗ್ರಂಥಸರ್ವವು ಮುಖ್ಯ ಪ್ರವೃತ್ತ | ಹರಿಸರ್ವೋತ್ತಮನೆಂಬ ತತ್ವ | ಪೇಳೆಸಿರಿ ವೇದವ್ಯಾಸ ವಿರಚಿತ | ಆಹಪರಮ ಭಕ್ತರು ಪೃಥೆ | ವರ ಉದರೋದ್ಭವಧರ್ಮಾದ್ಯರ ಚರಿತೆ | ಅರುಹುವುದೆನುತಲಿ 7 ಗುಣಗಳು ಭಕ್ತ್ಯಾದಿ ದಶವು | ಇನ್ನುಕರ್ಣದಿಂ ಕೇಳ್ವುದೆಲ್ಲವು | ಹಾಗೆಗುಣಗಳು ಶೀಲ ವಿನಿಯಾವು | ಮತ್ತೆಗುಣಸುವುದು ಮೂರು ವೇದವು | ಆಹಮನು ಪದ ವಾಚ್ಯಗ | ಳೆನಿಸುವುದೀ ಪಂಚಗುಣಧರ್ಮ ವಾಚ್ಯರು | ಪಾಂಡವರೆನಿಪರು 8 ಅಭಿಮಾನಿ ಧರ್ಮಕ್ಕೆ ಎಂದು | ಮನುಅಭಿಧನು ಧರ್ಮಜನೆಂದು | ಇನ್ನುಅಭಿಮಾನಿ ಭಕ್ತ್ಯಾದಿಗೆಂದು | ಭೀಮನಭಿಧನಾಗಿಹನವ ಎಂದು | ಆಹಅಭಿಧನರ್ಜುನ ಶ್ರುತ | ಕಭಿಮಾನ ಎನುತಲಿಶುಭ ಶೀಲ ವಿನಯಕ್ಕೆ | ಅಭಿಮಾನಿಯಮಳರು 9 ಪರಿ ಪತಿ ಪರಿ ಜ್ಞಾನುಳ್ಳ | ಆ ಪೃಥೆ ಸುತರೆಲ್ಲನೀ ಪರಿಭಾವಿಸು | ಆಸ್ತೀಕರೆನುತಲಿ 10 ದ್ರುಪದಜೆ ಧರ್ಮಾದಿ ಐದು | ಜನಸುಪುಣ್ಯ ಶ್ಲೋಕರ ಕಥೆ ಇದು | ಇನ್ನುಉಪರಿಚರಾಭಿಧನೆಂದು | ವಿಷ್ಣುಸುಪ್ರತಿಪಾಧ್ಯನು ಎಂದು | ಆಹಇಪ್ಪರಿ ಮಹಿಮೆಯು | ಪೇತವು ಭಾರತಸುಪ್ರತಿಷ್ಠಿತವಿದು | ಅಬ್ಜಜಾಂಡದಲೆಂದು11 ಭಕ್ತಿವೈರಾಗ್ಯವು ಜ್ಞಾನಾ | ಮತ್ತೆಧೃತಿಯು ಸುಮೇಧಾ ಸುಪ್ರಜ್ಞಾ | ಇನ್ನುಸ್ಥಿತಿ ಬಲಯೋಗವು ಪ್ರಾಣಾ | ಭೀಮಹತ್ತು ಗುಣಾತ್ಮಕ ಮಾನಾ | ಆಹಉತ್ತಮ ಗುಣಿಪರ | ನಾತ್ಮನಾ ಅದರಿಂದತತ್ತನು ಎನಿಸೀಹ | ಪೃಥ್ವಿಪ ಭೀಮನು 12 ಮೂರ್ತಿ ಮೂರ್ತಿ | ಆಹಕರೆಸಿಹ ಶಕುನಿಯು | ಮೂರುತಿ ನಾಸ್ತಿಕ್ಯಸರ್ವದೋಷಾತ್ಮಕ | ರೆನಿಪರಂಧಜರೆಲ್ಲಾ 13 ಹರವನಾತರನು ಎಂದು | ದ್ರೌಣಿಕರೆಸುವನಹಂಕಾರನೆಂದು | ಇನ್ನುಕರಣಗಳ್ಪ್ರಾಣಾದಿ ಎಂದು | ಮತ್ತೆವರ ಸೈನ್ಯ ಪಾಪಗಳೆಂದು | ಆಹಅರಿವುದರ ಪುಣ್ಯ | ಪರವೆಂದು ಪಾಂಡವರಇರುತಿಹ ವಿಷ್ಣುವು | ಅವರ ನಿಯೋಜಕ 14 ಸರ್ವವು ಅಧ್ಯಾತ್ಮನಿಷ್ಟ | ಗ್ರಂಥದುರ್ವಿಜ್ಞೇಯ ಸರ್ವರ್ಗೆ ಎನುತ | ವ್ಯಾಸಸರ್ವಜ್ಞ ತಾನೆಲ್ಲ ಜ್ಞಾತ | ನಿಹಪೂರ್ವ ಮಾರುತ ಹರಿದೂತ | ಆಹಅರಿವ ಗುರು ಗೋವಿಂದ | ವಿಠಲಾನುಗ್ರಹದಿಂದಮರುತಾನುಗ್ರಹದಿಂದ | ಅರಿವರು ಇತರರು 15
--------------
ಗುರುಗೋವಿಂದವಿಠಲರು
ಚಿಂತೆ ಪರಿಹರ ಮಾಡೋ ಎನ್ನಯ್ಯ ಸಜ್ಜನರ ಪ್ರಿಯ ಪ ಚಿಂತೆ ಪರಿಹರ ಮಾಡೊ ಎನ್ನಯ ಚಿಂತೆ ಪರಿಹರ ಮಾಡಿ ಎನ್ನ ಅಂತರಂಗದಿ ನಿಮ್ಮ ನಿರ್ಮ ಲಂತ:ಕರುಣದ ಚರಣವಿರಿಸಿ ಸಂತಸದಿ ಪೊರೆ ಸಂತರೊಡೆಯ ಅ.ಪ ನಿಮ್ಮ ಪಾದವ ನಂಬಿಕೊಂಡಿರುವ ಈ ಬಡವನನ್ನು ಕಮ್ಮಿ ದೃಷ್ಟಿಯಿಂ ನೋಡದಿರು ದೇವ ನಿನ್ನ ಬಿಟ್ಟೆನ ಗ್ಹಿಮ್ಮತನ್ಯರದಿಲ್ಲ ಜಗಜೀವ ಭಜಕಜನ ಕಾವ ಮೂಡಿಮುಳುಗುತಿಹ್ಯದೈ ಸಮ್ಮತದಿ ಸಲಹೆನ್ನ ದಯಾನಿಧಿ ಬ್ರಹ್ಮಬ್ರಹ್ಮಾದಿಗಳ ವಂದ್ಯನೇ 1 ಆರುಮೂರರಿಕ್ಕಟ್ಟಿನೊಳು ಗೆಲಿಸೋ ಘನಪಿಂಡಾಕಾರ ಆರು ಎರಡರ ಸಂಗ ತಪ್ಪಿಸೋ ಮಹಬಂಧ ಬಡಿಪ ಘೋರ ಸಪ್ತಶರಧಿ ದಾಂಟಿಸೋ ತವದಾಸನೆನಿಸೊ ಗಾರುಮಾಡಿ ಕೊಲ್ಲುತಿರ್ಪ ದೂರಮಾಡೆನ್ನ ದುರಿತದುರ್ಗುಣ ಸೇರಿಸು ತ್ವರ ದಾಸಸಂಗದಿ ನಾರಸಿಂಹ ನಾರದವಿನುತ 2 ಪಾಮರತ್ವ ತಾಮಸವ ಬಿಡಿಸೋ ವಿಷಯಲಂಪಟ ಪ್ರೇಮ ಮೋಹ ಕಾಮ ಖಂಡ್ರಿಸೋ ಹರಲಿರುಳು ನಿಮ್ಮ ಭಜನಾನಂದ ಕರುಣಿಸೊ ಸುಚಿಂತದಿರಿಸೊ ಕಾಮಿತಜನಕಾಮಪೂರಿತ ನಾಮರೂಪರಹಿತಮಹಿಮ ಸ್ವಾಮಿ ಅಮಿತಲೀಲ ವರ ಶ್ರೀರಾಮ ಪ್ರಭು ತ್ರಿಜಗದ ಮೋಹ 3
--------------
ರಾಮದಾಸರು
ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು
ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು
ದೇಹದ ಭಾವಾ ಮೋಹವಾ ಕಳೆ ನಾನೀನೆನ್ನುವ ಭೇದವಾ ಪ ತನು ಮೂರರ ಸಾಕ್ಷೀ ನೀನಿಹೆ ಘನ ಚಿನ್ಮಯರೂಪಾ ನೀನಿಹೆ ಅನುಮಾನಿಸದೀಪರಿ ಯೋಚಿಸು ನೀ ಮನವಾರೆ ಇದೇ ನಿಜವೆಂದೆನುತಾ ಅನುದಿನದಲಿ ನಿಶ್ಚಯಗೊಳಿಸುತಲಿ ಅನುಭವದಲಿ ತಿಳಿ ಈ ಬೋಧವಾ ಕಳೆ ನಾನೀನೆನ್ನುವ ಭೇದವಾ 1 ಇದು ತೋರಿ ಅಡಗುವಾ ಕಲ್ಪನೆ ಅದು ತೋರಿಕೆಯಳಿದ ಆತ್ಮನೇ ಪರಿ ಈ ಜಗವೆಲ್ಲ ಅದು ನೀನಿರುವಿ ಇದು ನೀನಲ್ಲ ಇದೆ ತಿಳಿವಿಕೆಯಿಂದಲಿ ಮುಕುತಿ ಕಣಾ ಇದೆ ಶಂಕರಗುರುವಿನ ಬೋಧವಾ ತಿಳಿದಾನಂದಿಸು ನೀನೇ ಶಿವಾ 2
--------------
ಶಂಕರಭಟ್ಟ ಅಗ್ನಿಹೋತ್ರಿ