ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ | ನಿತ್ಯದಿ ಭಜಿಸುವ ಭೃತ್ಯನೆ ಬಲು ಧನ್ಯನೋ ಪ ಭೃತ್ಯ ಜನಕೊತ್ತೊತ್ತಿ ಪೇಳುವ ಅ.ಪ. ಮುನಿಕುಲ ಸನ್ಮಾನ್ಯ ಸತ್ಯಜ್ಞಾನರ ಕರಜಮಾನ ಮೇಯ ಜ್ಞಾನ ನಿಪುಣಾಹೀನ ಮಾಯ್ಗಳ ಗೋಣ ಮುರಿಸು | ಸ್ವಾನುಭಾವದಿ ಬ್ರಹ್ಮ ಸತ್ಯಜ್ಞಾನ ಆನಂದನೆನುತಲಿ | ಆನುಪೂರ್ವ ವೇದಾರ್ಥ ಪೇಳ್ದ 1 ಈ ಮಹಿಯೊಳು ಭರತ | ಭೂಮಿಯೊಳಖಿಳ ಸುಸೀಮೆಯ ಚರಿಸುತಲೀ ||ನೇಮದಿಂದಲಿ ವಾದ ಭಿಕ್ಷೆಯ | ಪ್ರೇಮದಿಂದಲಿ ಬಯಸಿ ಬರುತಗ್ರಾಮ ಗ್ರಾಮದ ಭ್ರಾಮಕ ಜನ | ಸ್ತೋಮವ ನಿಸ್ತೇಜ ಗೈಸಿದ 2 ಪರಮ ಹಂಸೋತ್ತಮ | ಪರವಾದಿ ಗಜಸಿಂಹಗರುವ ರಹಿತ ಸಾರ್ವಭೌಮಾ ||ವರ ಸುವತ್ಸರ ಚಿತ್ರ ಭಾನುವು | ಚೈತ್ರ ಶುಕ್ಷದಿ ಅಷ್ಟಮೀ ದಿನಸಿರಿ ಗುರು ಗೋವಿಂದ ವಿಠಲನ | ಚರಣ ಸರಸಿಜ ಸೇರಿ ಮೆರೆದ 3
--------------
ಗುರುಗೋವಿಂದವಿಠಲರು
ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ಪ. ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ಅ.ಪ. ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿವತನ ಕೆಡುವ ಪ್ರಯತ್ನವು ಬರಲಿ 1 ಸತಿ ಭಾರ ಸಮರ್ಪಿಸಲಿವಿರಸಮಾಡಿ ಮನೆ ಮುರಿಸುತ ಬರಲಿ 2 ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿಜ್ಞಾನಹೀನನೆಂದೆನುತ ನಿಂದಿಸಲಿಶ್ರೀನಿಧಿ ಗೋಪಾಲವಿಠಲ ಬೆರಿಲಿ 3
--------------
ಗೋಪಾಲದಾಸರು
ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ಪಾಟ ಬಡಿಸುವೆ ಪ.ತಮವೆಂಬ ಭಂಗಿಯ ಕುಡಿಸುವೆಬುದ್ಧಿಭ್ರಮೆಗೊಂಡ ಮಾತು ನುಡಿಸುವೆಸುಮನಸರಿಗೆ ಹೆಂಡ ಕುಡಿಸುವೆಯಾರೂ ನಮಿಸದಂತೆ ದೂರ ಇಡಿಸುವೆ 1ರಜವೆಂಬೋದ್ರವ್ಯ ಬಚ್ಚಿಡಿಸುವೆಇವರ ರಾಜ ಲಕ್ಷಣಕಟ್ಟಿಇಡಿಸುವೆಗಜಗಮನೆಯರ ಗರ್ವ ಮುರಿಸುವೆನಮ್ಮತ್ರಿಜಗವಂದನ ಹಾಸ್ಯ ಮಾಡಿಸುವೆ2ಸತ್ಯ ಸಾಮಿತ್ಯವತೆಗೆಸುವೆಉನ್ಮತ್ತೆಯರ ಮಾಡಿ ಮೆರೆಸುವೆಕತ್ತಲೆ ಮನೆÀಯೊಳಗೆ ಹೊಗಿಸುವೆಇನ್ನೆತ್ತ ಹೋಗಲೆಂದು ಎನಿಸುವೆ 3ಯಾರೂ ಇಲ್ಲದಲಿ ಇಡಿಸುವೆಇವರ ನೀರು ಕಂಡು ಭಯಬಡಿಸುವೆಓರೆಂದು ಗಾಬರಿಗೆಡಿಸುವೆಕಾಯೋ ಶ್ರೀನಿವಾಸಾನೆಂದೆನಿಸುವೆ 4ಒಬ್ಬರಿÉಲ್ಲದಲಿ ಇಡಿಸುವೆಇವರನು ಗುಬ್ಬಿಯ ಹಾಂಗೆ ಭಯ ಪಡಿಸುವೆತಬ್ಬಿಬ್ಬುಗೊಂಡು ತಳವೆಳಸುವೆಅರ್ಥಿಲೊಬ್ಬ ರಾಮೇಶನ ನೋಡಿಸುವೆ 5
--------------
ಗಲಗಲಿಅವ್ವನವರು