ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಮಾಧವಾಶ್ರೀತಜನಪಾಲಿತ ಮಾರಕೋಟಿರೂಪ ವಾರಿಧಿಶಯನ ಮುರಾರಿ ಕೇಶವ ಶ್ರೀಮ- ನ್ನಾರಾಯಣ ನೀರಜದಳಲೋಚನಪ. ಮಾನುಷತ್ವವಾಂತ ಸಮಯದಿ ಹೀನ ಭೋಗದ ಚಿಂತೆ ನಾನು ನೀನೆಂಬಾಭಿಮಾನದಿ ಮನಸು ನಿ- ಧಾನವಿಲ್ಲದೆ ಅನುಮಾನದಿಂದಿಹುದೈ ಏನು ಕಾರಣ ಹೃದಯನಳಿದೊಳು ನೀನೆ ನೆಲಸಿಕೊಂಡೀ ನರಯೋನಿಗೆ ನೀನೆ ಬರಿಸಿಯವಮಾನ ಬಡಿಸುವದು ಊನವಲ್ಲವೆ ಪದದಾಣೆ ಸತ್ಯವಿದು1 ಬಾಲಕತನದೊಳಗೆ ಕಾವ್ಯದ ಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನ ಬಾಲಭೂಷಿತಂಗಳ ಕೇಳೈ ಶ್ರೀಲಕ್ಷ್ಮೀಲೋಲ ವೆಂಕಟರಾಯ ಕಾಲಕಾಲಪ್ರಿಯ ಪಾಲಿಸೊಲಿದು ಕರು- ಣಾಲವಾಲ ನತಪಾಲಶೀಲ ಮುನಿ ಜಾಲವಂದ್ಯ ವನಮಾಲದಾರಿ ಜಗ ಮೂಲಸ್ವರೂಪ ವಿಶಾಲ ಗುಣಾರ್ಣವ2 ಹಿಂದಾದುದನರಿಯೆ ಇದರಿಂ ಮುಂದಾಗುವುದು ತಿಳಿಯೆ ಹಿಂದು ಮುಂದಿಲ್ಲದೆ ಬಂಧನದೊಳು ಬಲು ನೊಂದೆನೈ ನಿನಗಿದು ಚಂದವೆ ಶ್ರೀಹರಿ ತಂದೆ ತಾಯಿ ಬಂದು ಬಾಂಧವ ಬಳಗ ನೀ ನೆಂದು ನಿನ್ನಯ ಪದದ್ವಂದ್ವವ ಭಜಿಪಾ ನಂದಸುಜ್ಞಾನದಿಂದೆಂದಿಗೂ ಸುಖ ದಿಂದಿರುವಂದದಿ ತಂದೆ ನೀ ಪಾಲಿಸು3 ಧಾರಿಣಿಗಧಿಕವಾದ ಮೆರೆವ ಕು ಮಾರಧಾರೆಯ ತಟದ ಚಾರುನೇತ್ರಾವತಿ ತೀರ ಪಶ್ಚಿಮ ಭಾಗ ಸಾರಿ ತೋರುವ ವಟಪುರದೊಳು ನೆಲಸಿಹ ವೀರ ವೆಂಕಟಪತಿ ವಾರಿಜನಾಭ ಖ- ರಾರಿ ತ್ರಿದಶಗಣವಾರವಂದ್ಯ ಭಾ- ಗೀರಥೀಪಿತ ದುರಿತಾರಿ ದೈತ್ಯಸಂ- ಹಾರಿ ಶ್ರೀಲಕ್ಷ್ಮೀನಾರಾಯಣ ಹರಿ4
--------------
ತುಪಾಕಿ ವೆಂಕಟರಮಣಾಚಾರ್ಯ
ಹ್ಯಾಗಿದ್ದರೂ ಸುಖವೇ ಜ್ಞಾನಿಯಾದವಗೆ ಪ ನಳಿನ ನಂಬಿರುವಗೆ ಅ.ಪ ಹಿಂದುಮುಂದಿಲ್ಲದೆ ತಾನೊಬ್ಬನಾದರು 1 ಹೊನ್ನು ಹೆಣ್ಣು ಮಣ್ಣು ಹೊಂದಿಕೊಂಡಿದ್ದರು ಅನ್ನಕಿಲ್ಲದೆ ತಾ ನರಳುವಂತಾದರು 2 ಬೇಡಿದರೊ ಹೊಟ್ಟೆ ತುಂಬ ದೊರಕದಿದ್ದರು 3 ಯೋಗ್ಯನೆನ್ನುತ ಜನರು ಶ್ಲಾಘ್ಯವ ಮಾಡಿದರು ಭಾಗ್ಯಹೀನನಿವನೆಂದು ಬೈಯ್ಯತಲಿದ್ದರು 4 ಕೊಟ್ಟಷ್ಟರಲ್ಲೆ ತೃಪ್ತಿಪಟ್ಟು ಶ್ರೀ ಗುರುರಾಮ- ವಿಠ್ಠಲನ ಮನಮುಟ್ಟ ಭಜಿಸುವಗೆ5
--------------
ಗುರುರಾಮವಿಠಲ
(ಆ) ಇತರ ಹಾಡುಗಳು446ಕೃಪಣದಿ ಧನ್ಯರು ಎಂದಿಗೆ ಸುಖಿಕೃಪಣರವರುಪಕಾರಿಗಳೊ ನಿನ್ನ ವಾರಣರು ಕೃಷ್ಣಯ್ಯ ಪ.ಸಂಚಿತದ ಹೊನ್ನು ಬಂಡವಲ ಹೋಗಾಡಿಕಂಚು ಕಾಂಚನವಾಗೆ ನಿನ್ನವರುಕಿಂಚಿತ್ತು ವ್ರಯವಿಲ್ಲ ನಿಕ್ಷೇಪಾಕ್ಷಯಸಂಚಕಾರವ ಕೊಟ್ಟರೆಲ್ಲ ಮಂದಿರಕೆ 1ಅಂಗನೆತನೂಭವರಂಗದೆ ಮುಂಗೂಡೆಹಿಂಗಿ ನಿರ್ವಾಣದಿ ನಿನ್ನವರುಜಂಗುಳಿ ಧನಧಾನ್ಯ ಮಣಿಯಂತೆ ಬಚ್ಚಿಟ್ಟುಸಂಗಾತಿಯವರು ಸಂಸಾರ ಕಟ್ಟಿದರು 2ಮನ್ನಣೆನೀಗಿ ಪಾತ್ರೆ ಹುಟ್ಟು ಮಾರುತಸಣ್ಣರ ಕುಲ ಬಿಟ್ಟರು ನಿನ್ನವರುಬಣ್ಣ ಬಣ್ಣಗೆ ಉಟ್ಟು ಬಳಗ ಸಹಿತಭವವುಣ್ಣುತ ನಿನ್ನ ಮಗನ ಉದ್ಯಮದವರು 3ಹಿಂದೆ ಮುಂದಿಲ್ಲದೆ ಭಿನ್ನ ಭಿನ್ನಾತ್ಮರುನಿಂದ್ಯಾಸ್ತ್ತ್ರಕಳುಕುವ ನಿನ್ನವರುಬಂಧು ಬಲ್ಲಿದರು ಭಾಗ್ಯಾನ್ವಿತ ಚಪಲರುಎಂದೆಂದಂಜರು ಮದಮತ್ತ ಮಾನಿಸರು 4ಚೆನ್ನಿಗರಲ್ಲ ಚೆಲುವರಲ್ಲ ಜಗವ ಪಾವನ್ನ ಮಾಡುವರು ನಿನ್ನವರು ಪ್ರಸನ್ನ ವೆಂಕಟಪತಿ ನಿನ್ನ ಮದ್ದಾನೆಗಳುಕುನ್ನಿಗೂಗೆಗೆ ಕಡೆಗಾಹವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಶ್ರೀರಮಾಧವಾಶ್ರೀತಜನಪಾಲಿತಮಾರಕೋಟಿರೂಪ ವಾರಿಧಿಶಯನಮುರಾರಿ ಕೇಶವ ಶ್ರೀಮ-ನ್ನಾರಾಯಣ ನೀರಜದಳಲೋಚನ ಪ.ಮಾನುಷತ್ವವಾಂತ ಸಮಯದಿಹೀನ ಭೋಗದ ಚಿಂತೆ ನಾನುನೀನೆಂಬಾಭಿಮಾನದಿ ಮನಸು ನಿ-ಧಾನವಿಲ್ಲದೆ ಅನುಮಾನದಿಂದಿಹುದೈಏನು ಕಾರಣ ಹೃದಯನಳಿದೊಳುನೀನೆ ನೆಲಸಿಕೊಂಡೀ ನರಯೋನಿಗೆನೀನೆ ಬರಿಸಿಯವಮಾನ ಬಡಿಸುವದುಊನವಲ್ಲವೆ ಪದದಾಣೆ ಸತ್ಯವಿದು 1ಬಾಲಕತನದೊಳಗೆ ಕಾವ್ಯದಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನಬಾಲಭೂಷಿತಂಗಳ ಕೇಳೈಶ್ರೀಲಕ್ಷ್ಮೀಲೋಲ ವೆಂಕಟರಾಯಕಾಲಕಾಲಪ್ರಿಯ ಪಾಲಿಸೊಲಿದು ಕರು-ಣಾಲವಾಲ ನತಪಾಲಶೀಲ ಮುನಿಜಾಲವಂದ್ಯ ವನಮಾಲದಾರಿ ಜಗಮೂಲಸ್ವರೂಪ ವಿಶಾಲ ಗುಣಾರ್ಣವ 2ಹಿಂದಾದುದನರಿಯೆ ಇದರಿಂಮುಂದಾಗುವುದು ತಿಳಿಯೆ ಹಿಂದುಮುಂದಿಲ್ಲದೆ ಬಂಧನದೊಳು ಬಲುನೊಂದೆನೈ ನಿನಗಿದು ಚಂದವೆ ಶ್ರೀಹರಿತಂದೆ ತಾಯಿ ಬಂದು ಬಾಂಧವ ಬಳಗ ನೀನೆಂದು ನಿನ್ನಯ ಪದದ್ವಂದ್ವವ ಭಜಿಪಾನಂದಸುಜ್ಞಾನದಿಂದೆಂದಿಗೂ ಸುಖದಿಂದಿರುವಂದದಿ ತಂದೆ ನೀ ಪಾಲಿಸು 3ಧಾರಿಣಿಗಧಿಕವಾದ ಮೆರೆವ ಕುಮಾರಧಾರೆಯ ತಟದ ಚಾರುನೇತ್ರಾವತಿತೀರ ಪಶ್ಚಿಮ ಭಾಗ ಸಾರಿತೋರುವ ವಟಪುರದೊಳು ನೆಲಸಿಹವೀರ ವೆಂಕಟಪತಿವಾರಿಜನಾಭಖ-ರಾರಿ ತ್ರಿದಶಗಣವಾರವಂದ್ಯ ಭಾ-ಗೀರಥೀಪಿತ ದುರಿತಾರಿ ದೈತ್ಯಸಂ-ಹಾರಿ ಶ್ರೀಲಕ್ಷ್ಮೀನಾರಾಯಣಹರಿ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ