ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷೇತ್ರವೆಂದರೆ ಉಡುಪಿ ಕ್ಷೇತ್ರ ಪ ಸೂತ್ರಾಂತರಾತ್ಮ ಹರಿ ಯಾತ್ರೆ ಮಾಳ್ಪನಿಗೆ ಅ.ಪ. ವಾಸುದೇವ ಮುನಿಯು ಪುಟ್ಟಿ ಪಾಜಕದಲ್ಲಿವಾಸುದೇವ ಕೃಷ್ಣನ್ನ ನಿಲ್ಲಿಸಿಹರೋ ||ಕಾಸು ವೀಸಕೆ ವರದನಲ್ಲವೊ ಭಕುತಿಪಾಶಗಳಿಗೇ ಒಲಿವ ಶ್ರೀ ಕೃಷ್ಣ ನಿಲಯಾ 1 ವಟುತನ ದೊಳಾಶ್ರಮ ಸ್ವೀಕರಿಸಿ ಸನ್ಯಾಸಿಅಷ್ಟ ಮಠದವರಿಂದ ಇಷ್ಟ ಪೂಜೆಗಳಾ ||ಸೃಷ್ಟಿಯೊಳಗಪ್ರತಿಮ | ಕೃಷ್ಣಕೊಳ್ಳುತ ಮನಮುಟ್ಟಿ ಭಜಿಸುವರ | ಇಷ್ಟಾರ್ಥಗಳ ಕೊಡುವಾ 2 ದಿನಕನೇಕಲಂಕಾರ | ಅನವರತ ಸಂಪೂಜೆಎಣಿಸಲೆನ್ನಳವಲ್ಲ ರುಕುಮಿಣಿಯನಲ್ಲಾ ||ದೀನನಾಥ ನಾಥ ಗುರು | ಗೋವಿಂದ ವಿಠ್ಠಲನಮನದಣಿಯ ನೋಳ್ಪುದಕೆ | ಘನವಾದ ಸದನಾ 3
--------------
ಗುರುಗೋವಿಂದವಿಠಲರು
ಪಾತಕಗೆ ಪರತರದ ಗುರುಬೋಧವ್ಯಾಕೆ ಸೂತಕವ ಬಿಡದವಗೆ ಪರತತ್ವವ್ಯಾಕೆ ಪ ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ ಭೂತಬಡಿದವನಿಗೆ ಭೀತಿಯು ಯಾತಕ್ಕೆ ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ 1 ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ 2 ಪತಿಗಂಜದವಳಿಗೆ ವ್ರತನೇಮಗಳು ಯಾಕೆ ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ 3 ಮಾನಹೀನನಿಗೆ ಬೇರೆ ಮರಣಬರಲೇಕೆ ಅ ಜ್ಞಾನಿಗ್ಯಾತಕ್ಕೆ ಜಾಣಜನಸಂಗ ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ 4 ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ ಕರುಣವಿಲ್ಲದವನಿಗೆ ಗುರುಸೇವೆ ಯಾಕೆ ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ 5
--------------
ರಾಮದಾಸರು