ಒಟ್ಟು 17 ಕಡೆಗಳಲ್ಲಿ , 12 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದಕೋ ಬ್ರಹ್ಮಾಸ್ತ್ರ ನೋಡು ನೋಡದಕೋ ಬ್ರಹ್ಮಾಸ್ತ್ರಅದಕೋ ಬ್ರಹ್ಮಾಸ್ತ್ರ ಅದ್ಭುತವಾದಸ್ತ್ರಬೆದರಿಪುದೆಲ್ಲರ ಬೇವುವು ಬ್ರಹ್ಮಾಂಡ ಪ ಮಾರಿಗೆ ಮಾರಿಯು ಮೃತ್ಯುಗೆ ಮೃತ್ಯುವುಘೋರಕೆ ಘೋರವು ಕ್ರೂರಕೆ ಕ್ರೂರ 1 ತಗ ತಗ ಚಕಚಕ ಲಕಲಕ ನಳನಳಝಗ ಝಗ ನಿಗಿ ನಿಗಿ ಕಳೆ ಕೋರೈಸುತಿದೆ2 ಛಟಛಟ ಛಿಳಿಛಿಳಿ ಧಗಧಗ ಭುಗುಭುಗುಪಟಿ ಪಟಿಸುತ ಉರಿ ಹೊಗೆಯೊಂದಾಗುತಿದೆ 3 ಹಲವು ಬ್ರಹ್ಮಾಂಡವ ಸುಟ್ಟರು ಹಸಿವಡಗದುಹಲವು ಸಾಗರ ಕುಡಿದೆ ತೃಷೆಯಡಗದು ಬಿರುಗಣ್ಣಿಂದಲಿ ಖಡ್ಗವ ಬೀರುತಗುರುಚಿದಾನಂದ ತಾನಾಗಿಹ ಬಗಳೆ 5
--------------
ಚಿದಾನಂದ ಅವಧೂತರು
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಉಡಿಯ ತುಂಬಿದರು ಮೋದದಿ ಮಡದಿಯರು ಜನಕನ ಸುಕುಮಾರಿಗೆ ಪ ಸಡಗರದಲಿ ಹುರಿಗಡಲೆ ಕುಬುಸ ಕ- ಕದಳಿ ಖರ್ಜೂರ ದ್ರಾಕ್ಷಿಗಳನೂ-ಜನಕನ ಸುಕುಮಾರಿಗೆ ಅ.ಪ ಸರಸಿಜಾಕ್ಷಿಯರು ಕೊಬ್ಬರಿ ಬಟ್ಲುಗಳು ಚಂದ- ದರಸಿನ ಕುಂಕುಮ ಹಣಿಗೆಗಳನು-ಜನಕನ ಸುಕುಮಾರಿಗೆ 1 ಮುತ್ತು ಮಾಣಿಕ ನವರತ್ನಗಳನು ಬಹು ಕಿತ್ತಳೆ ದಾಡಿಮ ಮುಖ್ಯಫಲಗಳ-ಜನಕನ ಸುಕುಮಾರಿಗೆ 2 ಪರಿಪರಿ ವಸ್ತುಗಳನು ಮಾನಿನಿಯರು ಗುರುರಾಮವಿಠಲನರಿಸಿಯಾದ-ಜನಕನ ಸುಕುಮಾರಿಗೆ 3
--------------
ಗುರುರಾಮವಿಠಲ
ಉದ್ದಾಳಿಕನ ಕಥೆ ಪಾಶಾಂಕುಶ ಧರನೆ ಕರಿಣಿಸೊ ಮತಿಯ 1 ಮಾನಿನಿಕುಲಕೆ ಕಟ್ಟಾಣಿ ಕರುಣಿಸೆ ಮತಿಯ2 ಮನೋಹರನೆ ನಿಜಮತಿಯ 3 ಅಂಬರ ಮೇಲಾದಷ್ಟದಿಕ್ಪಾಲಕರು ಪುಣ್ಯಕಥೆಯ 4 ಓಣ್ಯೊಳು ಚೆಲ್ಲಿದ ಅಣಿ ಮುತ್ತಾರಿಸಿ ನೂಲಿಗೆ ಪೋಣಿಸಿದಂತೆ ಯೋಗಿಗಳರಸುದ್ದಾಳಿಕನ ಕಥೆಯನು ಹೇಳುವೆ ಚರಿತೆಯ ಮಾಡಿ5 ವೇದವೇದಾಂತ ಪಾರಗನು ಧರ್ಮ ಪತ್ನಿ 6 ಸುತಜನಿಸಿದ ಉದ್ದಾಳಿಕ ಮಾಡಿದ ಕ್ರಮದಿಂದ 7 ಮೌಂಜಿಯ ಕಟ್ಟಿ ನಡೆದರು ಪರಗತಿಗೆ 8 ನಾಲ್ಕು ವೇದಗಳ ಘನತಪವನಕಾಗಿ ನಡೆದ 9 ನಿಂದು ಬೆಳಗುವ ಜ್ಯೋತಿಯಂತೆ ಸಂದವರುವತ್ತು ಸಾವಿರವು 10 ಪಟ್ಟಣದಿ ರಾಜ್ಯವಾಳುವನು 11 ಕನ್ಯಾದಾನವು ಭೂದಾನ ರಾಜ್ಯವಾಳುವನು 12 ಹೆತ್ತ ತಾಯಿ ಮಕ್ಕಳಗಲರೆಂದೆದಿಗು ಬತ್ತದೆ ಕರೆವ ಧೇನುಗಳು ದೇಶದೊಳಗೆ 13 ಪುಣ್ಯಸಾಧನರು ಸಜ್ಜನರು ಧರ್ಮಗಳಾ ದೇಶದೊಳಗೆ 14 ಬಡವರಿಲ್ಲಿ ಚಾರರುಂಟು ದೇಶದೊಳಗೆ 15 ಧರ್ಮವ ನಡೆಸಿ ರಾಜ್ಯವಾಳುವನು 16 ಮಕುಟವೆಂದೆನಿಸಿ ಪಟ್ಟದರಸಿಯಲ್ಲದನ್ಯತ್ರ ನೋಡೇಕ ಪತ್ನಿಯ ವ್ರತವ ನಡೆಸಿದನು17 ಸಂತೋಷದೋರಲು ಹುಟ್ಟಿದಳ್ ಚಂದ್ರಾವತಿಯು 18 ಹೊನ್ನಿನ ರಾಸಿ ಸುವರ್ಣದ ಬೆಟ್ಟವು ಕನ್ಯಾದಾನದ ಹೆಬ್ಬೆಳಸು ಮಾಣಿಕವೆ ಸಂತಾನ 19 ನಡೆಯೋಳು ದಟ್ಟಡಿಯಿಡುತ ಕಡುಲಾಲಿಕೆ ಬಾಲಲೀಲೆ 20 ಬಡವಾದಾಳೆಂದು ಕಡುಹರುಷದಲಿ ಹಿಗ್ಗಿದರು 21 ಅಕ್ಷರಾಭ್ಯಾಸವ ಮಾಡಿಸಿ ಕುಮಾರಿಗೆ ನರ್ತನ ಗೀತವ ಕಲಿಸಿ ಪುತ್ರಿಗಭ್ಯಾಸ ಮಾಡಿಸಿದ 22 ಯೌವನವು ತೋರಿದವು ಆಲಯವನೆ ಕಟ್ಟಿಸಿದ 23 ಪುತ್ರಿಯ ಸೇವೆಗೆ ಇಟ್ಟನೆ ಭೂಪಾಲ ಹತ್ತುಸಾವಿರ ಕೆಳದಿಯರ ಸುತ್ತಲು ಪ್ರಾಕಾರ ಎಸೆದವು ರಕ್ಷೆಗೆ ಇಟ್ಟನೆ ದ್ವಾರಪಾಲಕರ24 ಮುನಿಕೌಶಿಕನು ನೋಡುತಲಿ 25 ಸತ್ಯಲೋಕ ತಪೋಲೋಕವ ಚರಿಸುತ್ತ ಹೊಕ್ಕ[ನೆ] ಯಮ ಲೋಕವನು ಜೀವಿಗಳ ತಾಕಂಡ 26 ತೃಣದ ಮೂಲಾಗ್ರದಿ ನಡುಗುತಿಪ್ಪರ ಕಂಡು ಬ[ಳಿ] ಯಲ್ಲಿ ನಿಂತು ಮಾತಾಡಿ ತಿಳಿದು ಹೇಳುವುದು ಎನ್ನೊಡನೆ 27 ಜಗದೊಳಗೆ ಎಮಗೆ ಪತನಕ್ಕೆ ಬಿದ್ದೆವೆಂದೆನಲು 28 ಕಾಣಿಸುವ ದೌಹಿತ್ರರು ಮುನಿಯು ಕೇಳಿದನು 29 ಹೆಣ್ಣನೊಲ್ಲದೆ ಅರಣ್ಯವ ಚರಿಸುವ ಉನ್ನಂತ ತಪಸೀಲಿದ್ದ ತಿಳಿದು ಹೇಳುವುದು 30 ಪುತ್ರಸಂತಾನವ ಪಡೆದು ವಿಸ್ತಾರವಾಗಿ ಹೇಳುವುದು 31 ಭೋರನಲ್ಲಿಂದ ತೆರಳಿದನಾಗಲೆ ಮುನಿ ಅರಣ್ಯವ ಚರಿಸುತಲೆ ತಪೋವನವ 32 ಕರವಿಡಿದು ಕರೆ ತಂದನಾಗ ಬರವೇನೆಂದು ಕೇಳಿದನು 33 ಯಮ ಲೋಕವನು ಅತ್ಯಂತ ನರಕಕೈದುವರು 34 ಆಲಸÀ್ಯವಿಲ್ಲದೆ ಬೀಳ್ಪರು ಪತನಕ್ಕೆ º
--------------
ಹೆಳವನಕಟ್ಟೆ ಗಿರಿಯಮ್ಮ
ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ಮುನ್ನಿನಂದದಲಿ ಸುತನ ಮುಂದಿಟ್ಟು 151 ಇಕ್ಷ್ವಾಕುಕುಲತಿಲಕನೆ ನಿನ್ನ ರಾಜ್ಯವ ಒಪ್ಪಿಸಿಕೊಳಲೆನಗಳವೆ ಪುತ್ರಗೆ ಪಟ್ಟವ ಕಟ್ಟುವುದೇನು ಕಾರಣ ವಿಸ್ತಾರವಾಗಿ ಹೇಳೆಂದ 152 ಕೇಳಿದೆ ಕರ್ಣದಿ ಹೀನದ ವಾಕ್ಯವ ಜಾರತ್ವ ಬಂದಿತಾತ್ಮಜೆಗೆ ಮಾಡುವೆನು 153 ಅಮರಲೋಕಕ್ಕೆ ವಶವಹರು ಭಾಧೆಗೆ ಗುರಿಯಾಗಿ 154 ವ್ಯರ್ಥವಾಯಿತು ಎನ್ನ ಬದುಕು ಮಾಡಿಕೊಂಬೆನೆಂದ 155 ಕಥೆಯ ಕೇಳರಿಯಾ ಕುಂದನೊದ್ದವರಾರು ಜಗದಿ 156 ಮೀರಿದರಾರೊ ಕಲ್ಪನೆಯ 157 ಸರ್ವಾಂಗದಿಂದ ಸುಂದರಿಯು ಸತಿ ಲಾಂಛನೆಯ ತಾಳಿದನು 158 ಸೆರೆತಂದ ತಾರಾದೇವಿಯನು ಪಾಡೇನು ಭೂಪಾಲ 159 ಕುಮಾರತಿಯ ಮಂದಿರಕೆ ಅರುಹಿದರಾರು ನಿನ್ನೊಡನೆ 160 ನಿಲ್ಲಿಸಿದ ಪ್ರಧಾನಿ ನಡೆತಂದ ಸೆಜ್ಜೆವಾಹರಿಗೆ 161 ಮಲಿನವನುಟ್ಟ ಮಾನಿನಿಯ ಸೆಳೆವಿಡಿದೆತ್ತಿದ ರಾಯ 162 ಮಾಜುವದೇಕೆ ಎನ್ನೊಡನೆ ಬ್ರಾಹ್ಮರು ಮೆಚ್ಚುವಂತೆ 163 ಸುರರೊ ನರರೊ ಕಿನ್ನರರೊ ಗಿರಿಜೇಶನಾಣೆ ಹೇಳೆಂದ 164 ವಿಶ್ವಲೋಚನನಂಘ್ರಿಯಾಣೆ 165 ಸರಿಯ ನಾರಿಯರು ಉರಿವ ಪಾವಕನ 166 ಬ್ರಾಹ್ಮರಿಗ್ಯೊಗ್ಯವಹುದೆ ಬರುವುದು ನಿಮ್ಮ ಕುಲಕೆ 167 ಪಾತಕಿಯೆಂದು ತಿಳಿದು ಬರುವುದೆ ಉಚಿತವು 168 ಮುನಿದು ಅರಣ್ಯಕ್ಹೋಗುವರೆ ವರಿಸು ನಿನಗೆ ಉತ್ತುಮವುಳ್ಳ ಪುರಷಗೆ ಧಾರೆಯನೆರೆವೆನು 169 ಪಾತಕ ಬರಿದೆ ನಿಂದ್ಯವನು (ಅ) ಬಂದೊದಗಿದ ಮೇಲೆ 170 ತೂಪಿರಿದು ಮಂತರಿಸಿ ಘೋರ ಕಾನನಕೆ 171 ಗುರಿಮಾಡಿ ನಾರಿ ಕಂಬನಿದುಂಬಿದಳು 172 ವಶವಲ್ಲದಂಥ ಮೂಗುತಿಯ ಬಿಸುಸುಯ್ವದೇತಕೆ ತಾಯೆ 173 ಕುಮಾರಿಯ ಮೇಲೆ ಸ್ನೇಹದಲಿ ವಿಧಿಯೆಂದ್ಹೊರಳಿದಳು 174 ಅಳುವುದೇತಕೆ ತಾಯೆ ನೀನು ಕಲ್ಮಾಡು ನಿನ್ನ ದೇಹವನು 175 ಹೇಳಿದನೇಕಾಂತದಲಿ ಉದಯಕೆ ಬನ್ನಿರೆಂದ 176 ಕರೆಸಿದನಾಗ ಕಿಂಕರರ ಪ್ರಧಾನಿಯು ತರಿಸಿದನೊಜ್ರದಂದಣವ ಬನ್ನಿರಿ ಶೀಘ್ರದಿಂದ 177 ಮಾಡಿರಿಮನಕೆ ಬಂದುದನು ನಾನಿಡುವೆ ರಾಯನ ಮುಂದೆ 178 ಮೇಲೆ ಪನ್ನಂಗ ಕವಿದವು ಶೀಘ್ರದಿ ಪೊತ್ತು ನಡೆದರು 179 ಬಸವಳಿದಳು ಶ್ರೀ ಹರಿಯ ಸ್ತುತಿಸುತಿರ್ದಳೆ ತನ್ನ ಮನದಿ 180 ಕಾಲನ ವಶಕೆÉ ಒಪ್ಪಿಸದೆ ಪಾದಾರವಿಂದೊಳಿರಿಸು 181 ಭಾರವನ್ಹೊತ್ತು ಬಳಲಿ ಬಾಯಾರುತ್ತ ಏರುತ್ತ ಘಟ್ಟ ಬೆಟ್ಟಗಳ ಬಾಲೆಯ ತಂದಿಳುಹಿದರು 182 ಬಾ ಬಳಲಿದೆಯೆನುತ ರಂಭೆಯನುಪಚರಿಸಿದರು 183 ತೊಪ್ಪಲ ಮೇಲ್ಹರಹಿದರು ಕತ್ತಿಗೆ ಮಯ್ಯನಿಕ್ಕಿದಳು 184 ಕಂಬುಚಕ್ರಧಾರಿ ವೈಕುಂಠವಾಸಗೆ ವಂದಿಸಿದಳು ತನ್ನ ಮನದಿ ಸ್ತುತಿಯ ಮಾಡಿದಳು 185 ಅರಣ್ಯದಲ್ಲಿ ತನ್ನ ನೆನೆವ ಕುಮಾರಿಗೆ ಕಾರುಣ್ಯದಿಂದೊದಗಿದನು ನಿದ್ರೆ ಕವಿದವು 186 ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಭಕ್ತರಿಗೊಜ್ರಪಂಜರನೆ ದೂತರ ಮನವ 187 ಯೋಚಿಸಿ ತಮ್ಮ ಮನದಿ ಪಾತಕ ಎತ್ತಿದಾಯುಧವನಿಳುಹಿದರು 188 ಒಬ್ಬರೊಬ್ಬರು ಮಾತನಾಡಿ ಉರ್ವೀಶಗೊಯ್ದು ಒಪ್ಪಿಸುವ 189 ವಾರಿಜಗಂಧಿಯ ಬಿಟ್ಟು ರಾಯಗೆ ಗುರುತ ತೋರಿದರು 190 ತಪ್ಪದೆ ರಾಯನೋಲಗಕೆ ಚಿತ್ತೈಸು ಜೀಯವಧಾನ 191 ತಂದೆವು ಮುದ್ರೆಯುಂಗುರವ ಮನದಲಿ ಮರುಗಿದನು 192 ಅಂಜೂರ ಕೊಯ್ದು ಕೊಟ್ಟಂತೆ ಬೆಂದೊಡಲನೆಂತು ಪೊರೆಯಲಿ 193 ಕೆಂಡದೊಳಾಜ್ಯ ಬಿದ್ದಂತೆ ಬೆಂದರು ಶೋಕಾಗ್ನಿಯಿಂದ 194 ಮೇಲೆ ಸ್ನೇಹದಲಿ ತಲೆಯೆತ್ತಿದವಬ್ಜ ಬಂಧುಗಳು 195 ಹಸಿದ ಹೆಬ್ಬುಲಿಗೆ 196 ಬೆದರುವಳು ವ್ಯಾಘ್ರದಟ್ಟುಳಿಗೆ ಮರಳಿ ಧೈರ್ಯವನೆ ಮಾಡುವಳು 197 ಮಾಯಪಾಶಕೆ ಗುರಿಮಾಡಿ ಮುಕ್ತಿ ಸಾಧನವು 198
--------------
ಹೆಳವನಕಟ್ಟೆ ಗಿರಿಯಮ್ಮ
ಮಂಗಲಂ ಜಯಮಂಗಲಂತ್ರಿಜಗಂಗಳ ಪೊರೆವ ಶ್ರೀಮೂಕಾಂಬೆಗೆ ಪ ಗೌರಿಗೆ ಗುಹಜನನಿಗೆ ಗಿರಿಜಾತೆಗೆಧೀರಮಹಿಷ ದೈತ್ಯಮರ್ದಿನಿಗೆಕಾರುಣ್ಯನಿಧಿಗೆ ಕಾಮಿತಫಲದಾತೆಗೆನಾರದನುತೆಗೆ ನಾರಾಯಣಿಗೆ 1 ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆದುರಿತ ದಾರಿದ್ರ್ಯಹರ್ತೆಗೆ ದುರ್ಗಿಗೆಪರಮೇಶ್ವರಿಗೆ ಪಾವನಚರಿತೆಗೆ ಶುಭಕರಿಗೆ ಸಮಸ್ತಮಂತ್ರೇಶ್ವರಿಗೆ 2 ರಾಜಶೇಖರಿಗೆ ರಾಜೀವನೇತ್ರಗೆ ರಕ್ತಬೀಜ ಶಾಸಿನಿಗೆ ಭುವನಮಾತೆಗೆತೇಜೋಮಯಿಗೆ ತರಣಿಕೋಟಿ ಭಾಷೆಗೆಶ್ರೀ ಜನಾರ್ದನನ ಸಹೋದರಿಗೆ 3 ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆಕಾಳರಾತ್ರಿಗೆ ಕಾತ್ಯಾಯನಿಗೆವ್ಯಾಳಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆಭಾಳನೇತ್ರೆಗೆ ಭಯಹಾರಿಣಿಗೆ4 ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆಮುಂಡಿಗೆ ಧೂಮ್ರಲೋಚನಹತ್ರ್ರೆಗೆಚಂಡಮುಂಡಾಸುರರಸುರಣರಂಗದಿದಿಂಡುದರಿಂದ ಸರ್ವಮಂಗಲೆಗೆ5
--------------
ಕೆಳದಿ ವೆಂಕಣ್ಣ ಕವಿ
ಮಡದಿ ಭಾಗ್ಯ ಎಂಬುವಿಯಾಕೊ ರಂಗಯ್ಯನಿನ್ನ ಬಡಿವಾರವ ಹೇಳಿಕೊಂಬೆ ಸಾಕೊ ಕೃಷ್ಣಯ್ಯ ಪ. ಬಿಡು ಬಿಡು ಸಣ್ಣ ಮಾರಿಯನ್ನು ನೀ ಮಾಡಬ್ಯಾಡ ಬಡಿವಾರವ ಹೇಳಿಕೊಂಬುವುದೇನೊಕಡುಭಾಗ್ಯ ಪುರುಷನಾಗೊ ನೀನು ಎತ್ತಿಕೊಂಡ್ಹೋಗಿ ಮಡುವು ಸೇರಿಕೊಂಡಿ ಮತ್ತೇನೊ1 ದೊರೆತನ ಹೇಳಿಕೊಂಬೆ ಸಾಕೊ ರಂಗಯ್ಯನಿನ್ನ ಕರಕರ ಹಲ್ಲು ತಿಂಬೊ ಸಿಟ್ಟು ಕೃಷ್ಣಯ್ಯಬಿರುಗಣ್ಣು ಬಿಡವೋದ್ಯಾಕಿಷ್ಟು ರಂಗಯ್ಯನಿನ್ನ ಉರಿಮಾರಿಗೆ ಅಂಜೋರೆಲ್ಲೊ ಅಷ್ಟು 2 ಧರೆ ಮ್ಯಾಲೆ ರಾಜ್ಯ ಹ್ಯಾಂಗ ರಂಗಯ್ಯನಿನ್ನ ತಗಿ ತಗಿ ಬಲುಲೀಲಾ ಕೈಯ್ಯ ಕೃಷ್ಣಯ್ಯಸುಗುಣನೆಂತೆಂಬೊ ಮತಿಯಾದುದಕ್ಕೆಜನರು ನಗದೆ ಸೈ ಸೈ ಎಂದಾರು ಬರಿಯ ಕೃಷ್ಣಯ್ಯ3 ಧೀರ ಧನವಂತನಲ್ಲೊ ಸಾಕೊ ರಂಗಯ್ಯಆದರೆ ವನದಿನಾರು ವಸ್ತ್ರವನುಟ್ಟುಕೊಂಡಿ ಯಾಕೊ ಕೃಷ್ಣಯ್ಯಚೋರನಂತಾಡಿಕೊಂಬಿ ಸಾಕೊ ರಂಗಯ್ಯಇದ ಕೇಳಿದ ವೀರರೆಂಬವರು ನಗತಾರೊ ಕೃಷ್ಣಯ್ಯ 4 ವಸ್ತ್ರವಿಲ್ಲೆಂಬೊ ಎಚ್ಚರಿಕಿಲ್ಲೊ ರಂಗಯ್ಯತೇಜಿ ಹತ್ತೇನು ಎಂದು ಬರುವಿಯಲ್ಲೊ ಕೃಷ್ಣಯ್ಯಕತ್ತಿ ಕೈ ಶೂರನೆಂಬೊದೆಲ್ಲೊ ರಂಗಯ್ಯರಾಮೇಶ ನಿನ್ನ ಹತ್ತಿಲ್ಲಿದ್ದರೆಲ್ಲ ನಗುವರೊ ಕೃಷ್ಣಯ್ಯ5
--------------
ಗಲಗಲಿಅವ್ವನವರು
ಮಡಿಲು ತುಂಬಿದರಮ್ಮ ಮುತ್ತೈದೆಯರೆಲ್ಲ ಕಡಲಕುಮಾರಿಗೆ ಸಡಗರದಿಂದ ಪ ಅರಿಶಿನ ಕುಂಕುಮ ಸುಗಂಧಸೇವಂತಿಗೆ ಪರಿಮಳ ಪಾದರಿ ಮಲ್ಲಿಗೆ ಮುಡಿಸಿ 1 ರಸಬಾಳೆ ಖರ್ಜೂರ ಖರ್ಬೂಜ ದಾಳಿಂಬೆಯ ಕಸಿಮಾವು ಸೇವು ಅಂಜೂರ ದ್ರಾಕ್ಷಿ 2 ಕೊಡಗಿನ ಕಿತ್ತಳೆ ದೃಢತರ ಸಿಹಿನಿಂಬೆ ಕಡುಸವಿ ಗಂಗಪಾಣಿ ಕಪಿತ್ಥಗಳನು 3 ಅಡಿಕೆ ಬೆಳ್ಳೆಲೆ ದ್ರಾಕ್ಷಿ ಗೋಡಂಬಿ ಸಕ್ಕರೆ ಒಡನೆ ಕೊಬರಿ ನಾರಿಕೇಳ ಬೆಲ್ಲದಚ್ಚು 4 ಮುತ್ತುರತ್ನ ಮಾಣಿಕ್ಯ ಅಪರಂಜಿಯ ಸ್ವರ್ಣ ವಿತ್ತ ಮುದ್ರೆಯ ಹಣ ಬಾದಾಮಿಬೆರಸಿ 5 ಬೆಳ್ಳಿ ತಟ್ಟೇಲಿ ಪಂಚವಾಳ ಪನ್ನೀರುದಾನಿ ಒಳ್ಳೆ ಗಂಧವು ಮಂಗಳ ದ್ರವ್ಯವಿಟ್ಟು6 ಜರತಾರಿ ಸೀರೆ ಕಾಪುಕುಪ್ಪಸ ಕೊಟ್ಟು ಹರುಷದಿ ಹರಸುತ್ತ ಅಕ್ಷತೆ ಸೂಸಿ 7 ಜಾಜಿಕೇಶವ ಸಹ ಮೂಜಗವಾಳೆ ರಾಜಿಪ ಮಕ್ಕಳೊಡೆ ನಿತ್ಯಸುಖಿಯಾಗು 8
--------------
ಶಾಮಶರ್ಮರು
ಮೋಹನಾರ್ಯನೆ ಯೆನ್ನಾ | ಪೀಡಿಸುವ ಭವಮೋಹಕಳೆವುದು ಮುನ್ನಾ | ಹರಿಯಂಘ್ರಿ ಭಜನೆಯಈಹ ಕೊಡುವುದು ಇನ್ನಾ | ಭೂಸುರವರೇಣ್ಯಾ ಪ ದೇಹ ಮಮತೆಯ ದಾಶೆಯಲಿ ಸುಖ | ವಾಹಿನಿಗಳನುಭವಿಸೆ ಬಲುದುರ್‍ದೇಹ ಪೋಷಣೆಗೈದು ಹರಿಪದ | ಈಹಿಸದೆ ಬಲುನೊಂದೆ ಭವದಲಿ ಅ.ಪ. ಜಯದಲುದಿಸುತಲಂದೂ | ತಾರುಣ್ಯವನುನಿರ್‍ಭಯದಿ ಕಳೆದಿಹೆ ಬಂಧೂ | ವಿದ್ವೇಷದೊಳಗ್ಹರಿಹಯನನುಜ ವರ್ತಿಗಳಂದೂ | ಸಲಹಿದರು ಎನ್ನಯ ಭಯ ನಿವಾರಿಸುತಂದೂ | ಕಾರುಣ್ಯ ಸಿಂಧೂ ||ಹಯಮುಖನ ಪದ ಸತ್ಸರೋಜಗಳ್ | ದ್ವಯಭಜಿಪ ಮನವಿರದೆ ವಿಷಯದಹುಯಿಲಿನಲಿ ಬೆಂಡಾಗಿ ತಾಪದ | ತ್ರಯದಿ ಬಲು ಬಳಲಿರುವೆನಯ್ಯ |ಜಯದ ಸಂವತ್ಸರವು ಮರಳಿ | ಬಯಲು ಆಗದ ಮುನ್ನ ಹರಿಪದದ್ವಯಗಳನು ಕಾಂಬಂಥ ಹದನವ | ದಯದಿ ತೋರುತ ಸಲಹೊ ಬಂಧು 1 ಕಾಮಮದ ಮಾತ್ಸರ್ಯಾ | ಅರಿಗಳನಮನನೇಮನಿಷ್ಟಯ ಚರ್ಯಾ | ಕುಂದಿಸುತ ವಿಷಯಸ್ತೋಮ ಕಳೆಯುವರಯ್ಯ | ಈ ಪರಿಯ ಪರಿಭವಸೀಮೆ ಮೀರುವ ಚರ್ಯಾ | ಪರಿಹರಿಸೊ ಜೀಯ ||ಭ್ರಾಮಕತ್ರಯ ಮಾರಿಗೆನ್ನ ಸು | ಹೋಮಿಸುವ ದುರುಳನನು ಸದೆವತಾಮರಸಭವ ಪದಕೆ ಬರುತಿಹ | ಆ ಮಹಾ ಮಾರುತ ನೊಳಿರುವ |ರಾಮ ಚಂದ್ರ ಪದಾರವಿಂದವ |ಕಾಮಿಸುತ ತನ್ಮಹಿಮೆಗಳ ಸನ್‍ನಾಮ ಕೀರ್ತನೆಗೈದು ಮೋದಿಪ | ಪ್ರೇಮಮನವಿತ್ತೆನ್ನ ಸಲಹೋ 2 ನೀರೊಳಾಡುತ ಬಂದಾ | ಬೆನ್ನಿನಲಿ ಬಹುಭಾರ ಪೊತ್ತುದೆ ಛಂದಾ | ಅವನಿಯನು ತನಕೋರೆದಾಡೆಗಳಿಂದಾ | ತರಳನನು ಬಹುಘೋರರೂಪದಲಿಂದಾ | ಸಲಹಿದುದೆ ಛಂದಾ ||ಮೂರು ಪಾದವ ಬೇಡಿ ಬಲಿಯನು | ಭಾರಿ ಕೊಡಲಿಯ ಪೆತ್ತು ಪೆಗಲೋಳು |ಘೋರ ಅಟವಿಯ ತಿರುಗಿ ತಿರುಗಿ | ನಾರೆರೊಲುಮೆಗೆ ಸಿಲ್ಕಿ ತ್ರಿಪುರದನಾರಿಯರ ವ್ರತಗೆಡಿಸಿ ಹಯವನು | ಏರ್ದ ಗುರುಗೋವಿಂದ ವಿಠ್ಠಲಕಾರಣನು ಜಗಕೆಂಬ ಮತಿಯನು | ಧೀರಗುರು ಮೋಹನ್ನ ಕರುಣಿಸು 3
--------------
ಗುರುಗೋವಿಂದವಿಠಲರು
ಸತಿ ಸರಸದಿ ಶಾಲೆಯೊಳು ಬಂದು ಪ ಪಿತನಿಂದಲಿ ಪತಿನಿಂದ್ಯವ ಕೇಳಿದನೆಂದು ಬಂದು ಅ.ಪ. ಧಡಿಗೆ ಬಿಡುಬಿಡುತಲಿ ಕಣ್ಣೀರಿಡುತಲಿ ಕೆಂಡದಿ ಧುಮುಕಲುಜಡೆಧರ ಕೇಳಿದಾಕ್ಷಣ ಜಡೆ ಅಪ್ಪಳಿಸಲು ಮೇದಿನಿಗೆ ಸಂದುದಿತ ಸದಾಶಿವನೆ ಬಂದು ಭಂಜಿಸಲು ಮತ್ತೆಮೇಲು ಬಂದು 1 ಮಾವನ ಶಿರವಳಿದಾ ಮತ್ತೆ ಮಾವನಿಂದಲಿ ತುತಿಸಿಕೊಂಡ ಮಂದಜಾಸನ ಬಂದು ಬಹುಪರಿ ಪೇಳಿದಾಮಂದ ಜನರ ಪೊರೆದಾ ಮಾರನಯ್ಯನಾ ಕರುಣವ ಪಡೆದಾಮತ್ತೆ ಮಾರನ ಮದ ಮುರಿದಾ ಮಾರನ ಬದುಕಿಸಿಮಾರಿಗೆ ವರವಿತ್ತು ನಾರಿಗೆ ತೋರಿಸೆ ಬಂದು2 ನಸುನಗುತಲಿ ಬಸವನು ಭೃಗು ಋಷಿಗಳ ಮೀಸೆಗಳ್ಳುದಾ ಬಸುಮಾದರ ಬಹುಪರಿಯಾಗದ ಬಸುಮಗೈದಾಳಳಿದಾ ಭಾರ್ಯಳ ಮೊರೆಕೇಳಿ ಭಾರವನಿಳುಹಿಪ ಪರಭಾರೆಪುರಕೆ ಪೋದಾಭಾರತೀಶ ಪಿತ ತಂದೆವರದಗೋಪಾಲವಿಠಲನಭಜಿಸುತ ಬಂದು 3
--------------
ತಂದೆವರದಗೋಪಾಲವಿಠಲರು
ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ಪ ಬಲಿಗಾಯತವಾದ ಕುರಿ ಮೆಲುವಂತೆ ಹೆಡ-ತಲೆ ಮೃತ್ಯುವನರಿಯದೆ ಮತ್ತನಾದೆ 1 ಕಂಡು ಕಂಡು ಪತಂಗ ಕಿಚ್ಚಿನೊಳ್ ಬೀಳ್ವಂತೆಕಂಡ ಕಂಡ ಹೇಯ ವಿಷಯಗಳಿಗೆರಗುವೆ 2 ಸತಿ ಅನ್ಯರರಸುವಂತೆಗತಿ ನೀನಿರಲು ಅನ್ಯರೆ ಗತಿಯೆಂಬೆ 3 ಒಂದು ಮೊಲಕೆ ಆರು ಹುಲಿ ಬಂದಡರುವಂತೆಬಂದೆಳೆವುತಲಿವೆ ಅರಿಷಡ್ವರ್ಗಗಳು 4 ಜೋಗಿಗಾಗಿ ಕೋಡಗ ಪಾಟು ಬಡುವಂತೆಲೋಗರಿಗಾಗಿ ನಾ ತೊಳಲಿ ಬಳಲುವೆ 5 ಶುಕನ ಓದುಗಳಂತೆ ಎನ್ನ ಓದುಗಳಯ್ಯಅಕಟಕಟವೆನಗೆ ಬಂಧಕವಾದುವೊ6 ಮಿಂದು ಮಿಂದು ಆನೆ ಹುಡಿ ಹೊಯ್ದು ಕೊಂಬಂತೆಮಂದಮತಿಯಾದೆ ಕರುಣಿಸೊ ಕೃಷ್ಣ 7
--------------
ವ್ಯಾಸರಾಯರು
ಕೆಟ್ಟು ನೆಂಟರ ಸೇರುವುದು ಬಹಳ ಕಷ್ಟಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ಪ.ಹರಿಯನಪ್ಪಲುಬಹುದು ಉರಿಯ ಮುಕ್ಕಲುಬಹುದುಉರುವ ಮಾರಿಗೆ ಗ್ರಾಸವಾಗಬಹುದುಸುರಿವ ಕೆಂಡದ ಮನೆಗೆ ಬರಿಮೈಯೊಳಿರಬಹುದುಧರೆಯೊಳಗೆ ದಾರಿದ್ರವಾರಿಗೂ ಬೇಡವೋ 1ವಿಷಯ ಕುಡಿಯಲುಬಹುದು ಇರಿದುಕೊಳ್ಳಲುಬಹುದುಹಸಿದ ಹುಲಿಬಾಯಿ ತುತ್ತಾಗಬಹುದುಹಸೆಗೆಟ್ಟು ಹೋದ ನಂಟಿರಲಿ ತಾ ಬಾಯನ್ನುಕಿಸಿಯಲಾಗದು ಕೊರಳ ಹಿಸುಕಿಕೊಳಬಹುದು 2ಕುಡುಗೋಲು ಪಿಡಿದು ಕೂಟಿಯಮಾಡಿ ಉಣಬಹುದುಒಡಲಾಸೆಗೊಲ್ಬುರಾಳಾಗಬಹುದುಒಡೆಯ ಶ್ರೀ ಪುರಂದರವಿಠ¯ ಸ್ಮರಣೆಯಲಿಬಡವನಾಗಿಯೇ ಬೇಡಿ ಉಣ್ಣಬಹುದು 3
--------------
ಪುರಂದರದಾಸರು
ಮಂಗಲಂತ್ರಿಪುರಸುಂದರಿ ಬನ ಶಂಕರಿಗೆ |ಮಂಗಲಂ ಸನ್ನಿಧಿಯ ಕೌಮಾರಿಗೆ |ಮಂಗಲಂ ಭ್ರಮರಾಂಬದೇವಿ ಚೌಡೇಶ್ವರಿಗೆ |ಮಂಗಲಂ ಶ್ರೀ ಲಕ್ಷ್ಮೀ ಮಹಾ ಮಾಯಿಗೆ | ಮಂಗಲಂ ಜಯಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಕಮಲದಳ ನಯನಿಗೆ ಕಮಠಾವಲೋಚನೆಗೆ ವಿಮಳವರವೀವ ಚೂಡಿದರಕೊರಳಿಗೆ |ದ್ಯುಮಣಿಶಶಿಕಿರಣದ ಶ್ರವಣ ಭೂಷಣಿಗೆ ಭ್ರಮರಾರಿ ನಾಸಿಕದಮಣಿಮೌಕ್ತಿಗೆ ಮಂಗಲಂ ಜಯಶುಭಮಂಗಲಂ1ಓಂಕಾರ ವದನಿಗೆ ವೇದಾಂತ ರದನಿಗೆ |ಪಂಕವಿರಹಿತದ ಚಿದ್ರಸ ಜಿವ್ಹೆಗೆ |ಅಂಕದಲಿ ಬ್ರಹ್ಮಪೀಯೂಷರಸ ಸುರಿವ ರುಣದಂಕುರಿಪಪವಳಮಣಿರುಚಿಯ ಧರಿಗೆ ಮಂಗಳ2ಕನಕಕಲಶ ತೋಳಿಗೆ ಕಲಶ ಕುಚಯುಗಳಿಗೆ |ಚಿನಕ ಪೂರ್ವಣ್ಯ ಕಂಚುಕದ ರುಚಿಗೆ ಸನಕಾದಿಗಳತಲೆಯ ಮೇಲಿಡುವ ಹಸ್ತಯುಗ ವನಜೆಶ್ರೀದೇವಿಯಂಗುಲಿಯ ನಖಕೆ ಮಂಗಳ3ಹಸ್ತದಾಭರಣಿಗೆ ಕೊರಳ ಭೂಷಣಿಗೆನಿಜನಿತ್ಯಮಂಗಳಿಗೆಹಾಟಕವರ್ಣಿಗೆ |ರತ್ನ ಬೈತಲಿಗೆ ವಜ್ರಾಣಿ ಪಾರಂಗಣಿಗೆ ನಿಜ |ಮುತ್ತಿನ ಬೊಟ್ಟು ಕುಂಕುಮದ ಫಣಿಗೆ ಮಂಗಳ4ಮರಗು ಮಲ್ಲಿಗೆ ಮುಡಿಗೆ ದುಂಡ ದಂಡಿಯತಲೆಗೆ ಕೊರಳ ಹಾರವ ತುದಿಯ ಕಾಲಿಂದಿಗೆ |ಪರಿಕ್ರಮದ ತಾಂಬೂಲವದನನಸು ನಗೆ ಮೊಗದಪರಿಮಳದ ಘನಸಾರತನುಲೇಪಿಗೆ | ಮಂಗಳ5ಪರಬ್ರಹ್ಮರೂಪಿಗೆ ಪರಾತ್‍ಪರ ಶಂಕರಿಗೆ ನಿರುಪಮಾನಂದಶ್ರೀ ಮಹಾಲಕ್ಷ್ಮಿಗೆ | ಶಿರಸ ಪೂಜೆಯ ಅರಳು ಮಲ್ಲಿಗೆಯುಕೃಪೆಯಿಂದಜರಿದುಉದರಿದವು ಗಿರಿದ್ವಾರದಲ್ಲಿ ||ಮಂಗಳ6
--------------
ಜಕ್ಕಪ್ಪಯ್ಯನವರು