ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ನಮಿಸಿದೆ ಸತ್ಯಬೋಧ ಮುನಿಯ ಮಂಡೆ ಬಾಗುತ ದೇಹ ದಂಡವಿಕ್ಕುತಲಿ ಪ. ಭವ್ಯ ಬೃಂದಾವನದಿ ವೈಭವದಿ ಮೆರೆವವರ ಸವ್ಯಸಾಚಿಯ ಸಖನ ಪ್ರಿಯ ಪಾತ್ರರ ದಿವ್ಯ ಕೂರ್ಮಾಸನದಿ ಕುಳಿತು ತಪಚರಿಸುವರ ಅವ್ಯಯಾತ್ಮನ ಚರಣ ಧ್ಯಾನ ಮಾಳ್ಪವರ 1 ವಿಷವಿಡಲು ಪಾಪಿಗಳು ರಾಮಗರ್ಪಿಸಿ ಭುಜಿಸೆ ನಿಶಿಯಲ್ಲಿ ನಿದ್ರೆ ಜೈಸುತ ನಿತ್ಯದಲಿ ಹಸನಾಗಿ ದೇವತಾರ್ಚನೆ ಭೋಜನವಗೈಯೆ ದೂಷಿಸಿದ ಕುಜನರಿಗೆ ರಾತ್ರೆ ಸೂರ್ಯನ ತೋರ್ದ 2 ಕಾಶಿಗ್ಹೋಗುವೆನೆಂಬ ಆಸೆ ಪೂರೈಸುವೊಡೆ ತಾ ಸ್ವಪ್ನದಲಿ ಬಂದು ಜಾಹ್ನವಿಯು ಪೇಳೆ ರಸರಹಿತವಾದ ವೃಕ್ಷದಿ ಗಂಗೆಯನೆ ತರಿಸಿ ತಾ ಸ್ನಾನಗೈದು ಭಾಗೀರಥಿಯ ಪೂಜಿಸಿದ3 ಪೇಳಲಳವಲ್ಲದಿಹ ಬಹಳ ಕೌತುಕ ಮಹಿಮೆ ಕಾಲಕಾಲಕೆ ತೋರಿ ಭಕ್ತರನು ಕಾಯ್ದು ಮೇಲಾದ ಮಧ್ವ ಶಾಸ್ತ್ರಾರ್ಣವದಿ ಈಜುತಲಿ ಲೀಲೆಯಿಂದಲಿ ಮಾಯ್ಗಳನೆ ಗೆದ್ದ ಮಹಿಮ 4 ಪ್ರತಿವರ್ಷ ಪಾಲ್ಗುಣದಿ ದ್ವಿತೀಯ ಪಕ್ಷದಿ ದ್ವಿತೀಯ ತಿಥಿಯಲ್ಲಿ ದಿವ್ಯ ಉತ್ಸವ ಕೊಳುತ ಸತತ ಈ ಸವಣೂರು ಕ್ಷೇತ್ರದಲಿ ನೆಲಸುತಲಿ ಚ್ಯುತರಹಿತ ಗೋಪಾಲಕೃಷ್ಣವಿಠ್ಠಲನ ಭಜಿಪೆ5
--------------
ಅಂಬಾಬಾಯಿ
ಶ್ರೀ ಶೇಷ ಚಂದ್ರಿಕಾರಾಯರ ಸಂಕ್ಷಿಪ್ತ ಚರಿತ್ರೆ (ವಾರ್ಧಿಕ ಷಟ್ಪದಿ) ರಘುನಾಥರಂ ಸೇವಿಸೀ |ರಘುನಾಥ ತೀರ್ಥರಂ ಮಿಗಿಲಾಗಿ ಸೇವಿಸುವಅಘಗಳನು ನೀಗಿ ಶ್ರೀ ರಘುವರನ ಪ್ರೀತಿಯನುಮಿಗೆ ಪೊಂದಿ ಭವದಾಟಿ ನಗಧರನ ಲೋಕದೊಳು ಬಗೆ ಬಗೆಯ ಸುಖದಿ ಬಾಳ್ವ ಪ ಏಕಮೇವನ ಚರಣ | ತೋಕರೆಂದೆನಿಸಿ ಸಾತ್ವೀಕರೆನಿಪ ತಾಯ್ತಂದೆಗಾಕುವರನೆನಿಸುತಏಕಋಷಿ ಶೌನಕ ಸುಗೋತ್ರದೊಳುವೆಂಕಟವರಮೃಗಾಭಿದನು ಎನಿಸೀ ||ನೂಕಿ ಪಂಚಾಬ್ದಗಳನಾ ಕುವರಗಾಗುಪನಯನಕೈಗೊಂಡು ಗುರು ಚರಣನೇಕ ವಿಧ ಸೇವಿಸುತವಾಕಾದಿ ಶಾಸ್ತ್ರಗಳ ಸಾಕಷ್ಟು ಅಭ್ಯಸಿಸಿ ಸ್ವೀಕರಿಸಿ ದ್ವಿತೀಯಾಶ್ರಮಾ 1 ಅನುಜ ಅಂಭ್ರಣಿಯ ರಮಣಪದಅಂಭುಜಗಳಂ ಭಜಿಸಿ ಸಂಭ್ರಮದಿ ಸತಿವೆರಸಿ ಉಂಬುಡುವ ಸರ್ವವೆಲ್ಲ |ಬಿಂಬನಲಿ ಅನ್ವಯಿಸಿ ಇಂಬುಗೊಂಡವರಾಗಿಸಂಭ್ರಮದ ಸಂತಾನದಂಬಲನೆ ತಾ ತೊರೆದುಹಂಬಲಿಸಿ ಹರಿಪಾದ ಗುಂಭದಿಂದಲಿ ಭಜಿಸಿ ಇಂಬಿಟ್ಟ ಸನ್ಯಾಸದೀ 2 ಹತ್ತು ಮೂರ್ಮತ್ತೈದು ವತ್ಸರದಿ ವಿಠಲ ಪದವರ್ತಿ ಲಕುಮಿನರೆಯಣ ತೀರ್ಥರಿಂ ಸನ್ಯಾಸದುತ್ತ ಮಾಶ್ರಮ ಪೊಂದಿ ಭೃತ್ಯರಿಗೆ ಶ್ರೀಮಧ್ವ ಶಾಸ್ತ್ರಗಳ ಬಿತ್ತರಿಸುತಾ |ಮತ್ತೆ ಬದರಿಯ ಸೇತು ಉತ್ತಮ ಕ್ಷೇತ್ರ ತ್ರೈರಾವರ್ತಿ ಸಂಚರಿಸಿ ಬಲು ಮತ್ತ ಮಾಯ್ಗಳನಳಿದುಕೃತ್ತಿ ವಾಸನ ತಾತ ಉತ್ತಮೋತ್ತಮನೆಂದು ವತ್ತಿ ಪೇಳ್ದರು ಸುಜನಕೇ 3 ಶೇಷನಾವೇಷದಿಂ ವ್ಯಾಸಾಭಿದಾನ ಸ ನ್ಯಾಸಿ ಎನಿಸುತಲಿ ದೀನೇಶನಂಶಜರಿಂದವಾಸಿಸುತ ಹಂಪೆಯಲಿ ಲೇಸು ಸುತ್ಸೂತ್ರಗಳ ಭಾಷ್ಯಾವ್ಯಾಖ್ಯಾ ಚಂದ್ರಿಕಾವ್ಯಾಸ ತ್ರಯಗಳು ಎಂದು ಭಾಸುರದ ಕೀರ್ತಿಯಲಿಕಾಶಿ ಗಧದರ ಮಿಶ್ರ ಏಸು ಮಾಯ್ಗಳ ಜಯಕೆಲೇಸು ಕಾರಣವೆನಿಪ ಆಸಿ ಗ್ರಂಥಗಳ್ರಚನೆ ಬೇಸರದೆ ನೆಡೆಯುತಿರಲೂ 4 ವರಶಿಷ್ಯರಿಂವರೆಸಿ ಇರುತಿರಲು ದಿನ ಒಂದುಅರೆವಾಸಿಯಾದಂಥವರ ಚಂದ್ರಿಕಾಗ್ರಂಥಎರಡು ಅಧ್ಯಾಯಗಳು ಪೂರಣವು ಯಾರಿಂದ ಒರೆವುದೆಂದೆನೆ ಪ್ರಾರ್ಥಿಸೀ ||ವರನರರ ಸಲಹುದಕೆ ಹರಿಯಾಜ್ಞೆಯಿಂ ಮತ್ತೆಎರಡು ಮೂರ್ಜನ್ಮಗಳ ಧರಿಸುವೆವು ನಾವು ಎರಡೈ-ದರಿಲ್ಲಿಂದ ನರಜನ್ಮದೊಳು ಗ್ರಂಥ ಪೂರಣವು ಆಹುದೆಂದರು 5 ಉಕ್ತಿಗನು ರಘುನಾಥ ತೀರ್ಥರೆಂದುರೆ ಮರೆದುಗ್ರಂಥ ಶೇಷವ ರಚಿಸಿ ತತ್ತರಭಿಧರು ಎನಿಸಿತತ್ವ ಕಣಿಕಾಖ್ಯವನು ತಂತ್ರಸಾರದ ವ್ಯಾಖ್ಯಮತ್ತಿತರ ಗ್ರಂಥಗಳನು ||ಬಿತ್ತರಿಸಿ ಹರಿಯನ್ನು ತೃಪ್ತಿಸುತ ಪೂರ್ವದಲಿಛಾತ್ರರಂ ಪಡೆದಂತೆ ಮತ್ತೆ ಈ ಜನ್ಮದಲಿಉತ್ತಮರು ಶಿಷ್ಯ ಸಂಪತ್ತಿನಿಂ ಮೆರೆದಿಹರು ತತ್ವಕೋವಿದರು 6 ತೈಜಸ ಪೇಳಿದ 7 ಮಹಿಷಿ ಕ್ಷೇತ್ರದೊಳುಸಿರಿ ಕೃಷ್ಣನಂ ನಿಲಿಸಿ ಹರಿರಥೋತ್ಸವ ಪೂಜೆವರುಷ ವರುಷದಿ ಗೈಯ್ಯೆವರ ಭೂಮಿ ಕಾಣೆ ಭೂಸುರರಿಗಿತ್ತಿಹರು ಅಯ್ಯಾ 8 ಆಷಾಢ ಸಿತ ತೃತಿಯ ಭಾಸಿಸುವ ಮಧ್ಯಾಹ್ನಕಾಶೀಗೇ ಮಿಗಿಲೆನಿಪ ತ್ರಿಮಕೂಟಗಾಗಮಿಸಿಭೂಸುರರಿಗೇ ತಮ್ಮ ಆಶ್ವಾಸ ತಿಳಿಸುತ್ತ ಲೇಸು ಸಂಗಮವೀಯತಾ ||ಶೇಷ ಚಂದ್ರಿಕಾಚಾರ್ಯ ಶ್ರೀಶನರ್ಚಿಸಿ ಕಾಯರಮೇಶ ಚರಣದಲೀಯ ಲೋಸುಗದಿ ಮನಮಾಡಿಆಸುಸತ್ತಿಥಿ ಚೌತಿ ಲೇಸೆನಿಸಿ ಉದಿಸುತಿರಲೀ ಶರೀರವನು ಅರ್ಪಿಸಿದರು 9 ಇವರ ವೃಂದಾವನವು ಅಶ್ವತ್ಥ ನರೆಯಣನಪವಿತರದ ಪದ ಧ್ರುವಕೆ ಬೀಳುವ ಸ್ಥಳದೊಳಗೆ ಸ್ಥಾಯವದು ಮಠಬಿರಿದುಗಳು ಅಶ್ವತ್ಥತರುಛಾಯವೇ ಛತ್ರಿಯೆನಿಸುತಿಹುದೂ ||ಕವೇರ ಕನ್ಯೆಯು ಕಪಿಲ ದಿವ ದೀವಟಿಗೆ ಸಮವುಇವರಿರುವ ಕ್ಷೇತ್ರವೇ ಪ್ರವರ ಗಯಪ್ರಯಾಗವಿಶ್ವೇಶ ಸನ್ನಿಧಿಯು ಇವರ ಗುಣ ಸ್ಥವನವೇಶಶ್ವದಾನಂದ ಸಂದೋಹವು 10 ವತ್ಸರವು ನೂರೆರಡು ಸತ್ಸಿದ್ದಿಗೇ ಪೊತ್ತಸತ್ಸರೀರವ ತ್ಯಜಿಸಿ ಮತ್ಸರಾದ್ವಿರಹಿತರುವತ್ಸಾರಿ ಸಿರಿಕೃಷ್ಣ ವತ್ಸರೆಂದೆನಿಸುತ್ತ ಸತ್ವ್ಸಭಾವದಿ ಮೆರೆಯುತಾ ||ಹೃತ್ಸರೋಜದಿ ಪವನ ಹೃತ್ಸರೂಜದಿ ಶಿರೀವತ್ಸಲಾಂಛನ ಗುರುಗೋವಿಂದ ವಿಠಲಪದಸತ್ಸರೋಜದ ಧ್ಯಾನ ಉತ್ಸುಕದಿ ಗೈದು ತನವತ್ಸರ್ಗ ಬೀಷ್ಟಗಳಗರೆವಾ 11
--------------
ಗುರುಗೋವಿಂದವಿಠಲರು
ಸೇರಿ ಸುಖಿಸುತಿರು ಮನುಜಾ ಗುರು ಶುಭ ಚರಣ ಸರೋಜ ಪ ಉದಧಿ ದಾಂಟಿ ಧಾರುಣಿಜಳಿಗೆ ಮುದ್ರಿಕೆಯಿತ್ತು ಜವದಿ ಶ್ರೀ ರಘುವರಗೆ ವಿನಯದಿ ಕ್ಷೇಮ ವಾರುತಿಯನು ಪೇಳಿದವನಂಘ್ರಿ ಮುದದಿ 1 ಇಂದು ಕುಲದಿ ಪಾಂಡು ನೃಪನ ಪುತ್ರ ನೆಂದು ಕರಿಸಿ ದುಷ್ಟ ಕೌರವಾಂತಕನ ನಂದ ನಂದನನೊಲಿಸಿದನ ದೃಪದ ನಂದಿನಿಯಳಿಗೆ ಪುಷ್ಪವ ತಂದಿತ್ತವನ 2 ಮಧ್ಯಗೇಹ ನೆಂಬೊದ್ವಿಜನ ಗೃಹದಿ ಮಧ್ವಾಭಿದಾನದಿ ಜನಿಸಿ ಮಾಯ್ಗಳನ ಗೆದ್ದು ಸಚ್ಛಾಸ್ತ್ರ ರಚಿಸಿದನ ಸುಪ್ರ ಸಿದ್ಧ ಸಿದ್ಧ ಕಾರ್ಪರ ನರಹರಿಗತಿ ಪ್ರಿಯನ 3
--------------
ಕಾರ್ಪರ ನರಹರಿದಾಸರು
ಕೋಲುಹಾಡುಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದಕೋಲು ಆನಂದಮುನಿ ಪಿಡಿದಿಹ ಕೋಲೆ ಪ.ತಮನೆಂಬುವನ ಕೊಂದು ಕಮಲಜನಿಗೆ ವೇದಕ್ರಮದಿಂದ ಕೊಟ್ಟು ಜಗವನು ಕೋಲೆಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದವಿಮಲ ಶ್ರೀಮತ್ಸ್ಯಮನೆದೈವ ಕೋಲೆ1ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆಗಿರಿಗಹಿ ಸುತ್ತಿ ಕಡೆಯಲು ಕೋಲೆಗಿರಿಗಹಿ ಸುತ್ತಿ ಕಡೆಯಲುನಗಜಾರೆಧರಿಸಿದ ಶ್ರೀಕೂರ್ಮಮನೆದೈವ ಕೋಲೆ2ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆಮಂಗಳಮಹಿಮ ದಯದಿಂದ ಕೋಲೆಮಂಗಳ ಮಹಿಮ ದಯದಿಂದ ನೆಗಹಿದ್ಯಜ್ಞಾಂಗ ಶ್ರೀವರಾಹ ಮನೆದೈವ ಕೋಲೆ 3ಒಂದೆ ಮನದೊಳಂದು ಕಂದ ನೆನೆಯಲಾಗಬಂದವನಯ್ಯನ್ನೊದೆದನು ಕೋಲೆಬಂದವನಯ್ಯನ್ನೊದೆದನು ಅನಿಮಿತ್ತಬಂಧು ನರಹರಿಯು ಮನೆದೈವ ಕೋಲೆ 4ಎದುರಿಲ್ಲವೆನಗೆಂದು ಮದವೇರಿದವನ ತ್ರಿಪದ ಭೂಮಿ ಬೇಡಿ ಗೆಲಿದನು ಕೋಲೆಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮಮುದದ ವಾಮನ ಮನೆದೈವ ಕೋಲೆ 5ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತನಿಜ ತಾತನಾಜÕ ಸಲಹಿದ ಕೋಲೆನಿಜ ತಾತನಾಜÕ ಸಲಹಿದ ಶುಭಗುಣದ್ವಿಜರಾಮ ನಮ್ಮ ಮನೆದೈವ ಕೋಲೆ 6ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿಕೌಶಿಕಕ್ರತುವ ಕಾಯ್ದನು ಕೋಲೆಕೌಶಿಕಕ್ರತುವ ಕಾಯ್ದ ರಾವಣಾಂತಕಶ್ರೀ ಸೀತಾರಾಮ ಮನೆದೈವ ಕೋಲೆ 7ಗೋಕುಲದಲಿ ಬೆಳೆದುಪೋಕದನುಜರ ಅನೇಕ ಪರಿಯಲಿ ಸದೆದನು ಕೋಲೆ ಅನೇಕ ಪರಿಯಲಿ ಸದೆದ ಪಾಂಡವಪಾಲಶ್ರೀಕೃಷ್ಣ ನಮ್ಮ ಮನೆದೈವ ಕೋಲೆ 8ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿಸತ್ಯವಾದಿಗಳ ಪೊರೆದನು ಕೋಲೆಸತ್ಯವಾದಿಗಳ ಪೊರೆದನು ಅಜವಂದ್ಯಕರ್ತಬೌದ್ಧನು ಮನೆದೈವ ಕೋಲೆ9ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆಸುಹಯವೇರಿ ಕಲಿಯನು ಕೋಲೆಸುಹಯವೇರಿ ಕಲಿಯನೆಳೆದು ಕೊಂದಮಹಾಕಲ್ಕಿ ನಮ್ಮ ಮನೆದೈವ ಕೋಲೆ 10ಹತ್ತವತಾರದಿ ಭಕ್ತಜನರ ಹೊರೆದಮತ್ತಾವಕಾಲದಿ ರಕ್ಷಿಪ ಕೋಲೆಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟಕರ್ತನ ನಂಬಿ ಸುಖಿಯಾದೆ ಕೋಲೆ 11
--------------
ಪ್ರಸನ್ನವೆಂಕಟದಾಸರು