ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟಗಳ ಪರಿಹರಿಸೊ ಶ್ರೇಷ್ಠ ಮಾರುತಿಯೇ ಭ್ರಷ್ಟನಾದೆನು ಭಂಡ ಸಂಸಾರದಲ್ಲೀ ಪ ಸ್ವಾರ್ಥವೆನ್ನುವ ದುಃಖ ಸಾಗರದಿ ಮುಳುಗಿದ್ದು ಸ್ವಾರ್ಥಕೋಸುಗ ಹೀನ ಕೃತ್ಯಗಳ ಗÉೈದೂ ಅರ್ಥವನು ಗಳಿಸುತ್ತ ತುಂಬಿದೆನು ಈ ವಡಲ ವ್ಯರ್ಥವಾಯಿತು ಜನ್ಮ ಸಾರ್ಥವನು ಮಾಡೋ1 ನಿರುತದೀ ಧರ್ಮ ಕರ್ಮಗಳ ತೊಲಗಿದೆನು ಭವದಿ ಸುಖವೆಲ್ಲವೂ ಮಾಯವಾಯಿತು ದೇವಾ ಶರಣರಿಗೆ ತಂದೆ ನೀನೆಂದು ಮೊರೆಹೊಕ್ಕೇ 2 ಪರಹಿತವ ಬಯಸದಲೆ ಕೇಡು ಬಗೆದೆನು ನಿತ್ಯ ಪರಸತಿಯಪೇಕ್ಷಿಯಲಿ ನಿರುತನಾಗಿದ್ದೇ ಅರಿತೆನೀಗಲೆ ನಾನು ಸರ್ವ ನಶ್ವರವೆಂದು ನರಹರಿಯ ನೀರೆರೆಯೊ ಈ ಬಾಡು ಶಶಿಗೇ 3 ಭಕ್ತವತ್ಸಲನೆಂಬ ಬಿರುದ ಪೊತ್ತಿಹೆ ನೀನು ಭಕ್ತಿಯಲಿ ನಾ ನಿಂನ ಸೇವೆ ಮಾಡುವೆನು ಭಕ್ತದಾಯಕಯಂನ ಹಸಿವೆ ತೃಷೆಗಳ ನೀಗಿ ಮುಕ್ತಿಯನು ನೀಡೆನಗೆ ಚನ್ನಕೇಶವನೇ 4
--------------
ಕರ್ಕಿ ಕೇಶವದಾಸ
ಮಾಯವಾಯಿತು ರತುನ | ಮರೆ ಮೋಸಮಾಡಿ ಪ. ಮಾಯವಾಯಿತು ಎನ್ನ ಮೋಹದ ಮಮ ಗುರುವೆಂತೆಂಬ ರತುನ ನೋಯಲೇಕಿದಕಿನ್ನು ನೃಹರಿ ಉ- ಪಾಯದಿಂದಪಹರಿಸಿವೈದನು ಅ.ಪ. ಕರಗತವಾಗಿ ಇತ್ತು | ಪ್ರಕಾಶವು ಧರಣಿಯಲ್ಲಿ ವ್ಯಾಪಿಸಿತ್ತು ಪರಿಪರಿ ಸಜ್ಜನಕೆ ತತ್ವದ ವರ ಸುಧೆಯನುಣಿಸುತ್ತಲಿತ್ತು ಕರಕರದು ಅಂಕಿತವ ಕೊಡುತಲಿ ಪರಮ ಸಾಧನಗೈಸುತಿತ್ತು 1 ಸುಂದರವಾಗಿ ಇತ್ತು | ದುರ್ಜನರಿಗದ ರಂದ ತೋರದಲೆ ಇತ್ತು ಒಂದೊಂದೂ ಗುಣ ವರ್ಣಿಸಲು ಈ ಮಂದ ಮತಿಗಳವಲ್ಲವಿನ್ನು ತಂದೆ ಮುದ್ದುಮೋಹನಾರೆಂ- ತೆಂದು ಜಗದಲಿ ಮೆರೆಯುತಿತ್ತು 2 ಮಾಸಿ ಪೋದಂಥ ಹರಿ | ದಾಸಕೂಟ ತಾ ಸ್ಥಾಪಿಸುತ ಈ ಪರಿ ವಾಸುದೇವನ ಗುಣಮಣಿಗಳ ರಾಶಿಭೂತದಿ ಅರುಹಿ ಶಿಷ್ಯರ ಸಾಸಿರಾನೂರ್ಮೇಲೆ ಹೆಚ್ಚಿಸಿ ತಾ ಸೂರೆಗೊಂಡಾನಂದವನು3 ಗತಶಾಲಿ ಸಾಹಸ್ರವು | ಮೇಲೆಂಟು ಶತವು ಮತ್ತರವತ್ತೆರಸುವು ವತ್ಸವಿಕ್ರಮ ಪ್ರಥಮ ಮಾಸವು ಪ್ರಥಮ ಪಕ್ಷದ ರಾಮನವಮಿ ಹಿತದಿ ಮಂಗಳವಾರ ಸೂರ್ಯನ ಗತಿಯು ನೆತ್ತಿಯೊಳೋರೆ 4 ಎಷ್ಟು ಪೊಗಳಲಳವು | ಆನಂದ ರತ್ನದ ಗುಟ್ಟರಿಯದು ಜಗವು ಶ್ರೇಷ್ಠ ಗೋಪಾಲಕೃಷ್ಣವಿಠಲನು ಕೊಟ್ಟು ಕಳುಹಿಸಿ ಧರೆಯೊಳ್ಮೆರಸಿ ಥಟ್ಟನೇ ತಾ ಕರೆಸಿಕೊಂಡು ಶ್ರೇಷ್ಠ ಶಯ್ಯೆಯ ಮಾಡಿಕೊಂಡನು 5
--------------
ಅಂಬಾಬಾಯಿ
ಮೂಲ ದೇಹದಿ ಪಾಳ್ಯ ಬಿಡುತಿದೆ ನಾಳೆ ನಾಡದೋ ಕಾಣೆ ತಮಪುರವಿದು ಕಾಲ ಬರುತಿದೆ ಪ ಬಂದು ಬಂದವರೆ ಮುಕ್ತಿಗೆಯಿಕ್ಕಿ ರವಿ ನಂದನ ನಾಳುಪದ್ರವನಿಕ್ಕಿ ಹಿಂದು ಮುಂದಕು ಛಾವಣೆಯಿಕ್ಕಿಪುರದ ಮಂದಿಯ ಕಾವಲನಿಕ್ಕಿ 1 ಪುರದೊಳಗೇನು ಬೀಯಗಳಿಲ್ಲ ಮುಂದೆ ಬರುವ ಮಾರ್ಗವ ಕಟ್ಟಿದರೆಲ್ಲ ಕರಣವೃತ್ತಿಗಳು ತಗ್ಗಿತು ಎಲ್ಲ ಕೋಟೆ ಜರಿದು ಹೋಯಿತು ಸುತ್ತಲು ಎಲ್ಲ 2 ಕಾಲು ಕೈಗಳ ಧಾತು ತಪ್ಪಿತು ನುಡಿದ ನಾಲಗೆ ಹಿಂದಕೆ ಸರಿಯಿತು ಕಣ್ಣಾಲಿಯೊಳಗೆ ನೀರು ಉಕ್ಕಿತು ವಸ್ತು ಗಾಳಿಯೊಳಗೆ ಮಾಯವಾಯಿತು 3 ಮಡದಿ ಮಕ್ಕಳಿಗೆಲ್ಲ ಹೊಡೆದಾಟ ಬಲಕೆ ಎಡಕೆ ಹೊರಳದಿರಿ ಎನುವಾಟ ಕಿಚ್ಚಿ ಯೊಡನೆ ಗೂಡನು ಸುಡುವಾಟ ಕೆಲವು ಕಡೆಯವರೆಲ್ಲ ತೆರಳುವಾಟ 4 ಹೇಳದ ಯಮದೂತರಿಗಂದು ಕಡು ಖೂಳ ಪಾಪಿಗಳೆಳತಹುದೆಂದು ಲಕ್ಷ್ಮೀ ಲೋಲ ನಾಳು ಗಳಮುಟ್ಟದಿರೆಂದು ತನ್ನಾಳಿಗೆ ಕಟ್ಟು ಮಾಡಿದನಂದು 5
--------------
ಕವಿ ಪರಮದೇವದಾಸರು