ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾನಕೀ ರಾಮಚಂದ್ರಾಂiÀi ನಮಸ್ತೇ ಶ್ರೀ ಭಾನುಕೋಟಿ ಸುಪ್ರಕಾಶ ವಾರಿಧಿಸಮ ಗಂಭೀರ ಪ ದಾನವೇಂದ್ರ ಭೀಷಣಾಯ ದೀನಪಾಲನ ಚಿಂತನಾಯ ಮಾನವೇಂದ್ರ ಗುಣಸಾಂದ್ರ ವೇದವೇದ್ಯ ರಾಘವಾಯಅ.ಪ ಸಕಲಲೋಕ ಸನ್ನುತಾಯ ವಿಕಸಿತಾಂಬುಜ ಲೋಚನಾಯ ಮಕರಕುಂಡಲ ಭೂಷಿತಾಯ ಶೋಕನಾಶಚಾರಿತ್ರಾಯ ಶುಕ ವಶಿಷ್ಟ ವಂದಿತಾಯ ಸಕಲಧರ್ಮಪಾಲನಾಯ ವಕುಳಮಾಲಾಭರಣ ಮಾಂಗಿರಿನಿಲಯಾಸೂರಿ ಪೂಜಿತಾಯ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಹಿ ಕಾಳಿಕೆ ಪಾಹಿ ದಿವ್ಯ ಚೂಳಿಕೆ ಪ ಪುರಂದರ ವಂದಿತೆ ಅ.ಪ. ರಕ್ತಬೀಜ ಶಿಕ್ಷಿಣಿ ಭಕ್ತವೃಂದ ರಕ್ಷಿಣಿ ಶಕ್ತಿವಿಜಿತ ರಾಕ್ಷಸೆ ನಿತ್ಯಮಂಗಲ ಸಾಹಸೆ 1 ಕ್ರೂರ ಭಂಡ ಭಂಜಿನಿ ಶೂರ ಪದ್ಮಮರ್ಧಿನಿ ನರಸಿಂಹ ಸೋದರಿ ಪಾಲಯಮಾಂ ವನ ಶಂಕರಿ 2 ಮೌನಿಹೃದಯ ರಂಜಿನಿ ಮಾನವೇಂದ್ರ ಪೋಷಿಣಿ ಮಾನಿನಿ ಶ್ರೀ ಶಿವ ಭಾಮಿನಿ 3
--------------
ಬೇಟೆರಾಯ ದೀಕ್ಷಿತರು
ರಘುರಾಮಚಂದ್ರ ಬಾರೈ ಹರೆ ದಿವ್ಯ ರತ್ನಪೀಠಕೆ ಪ ದೇವತಾಳಿ ನುತಿಯ ಕೇಳಿ ಭಾವದಲ್ಲಿ ಮುದವ ತಾಳಿ ರಾವಣಾದಿ ದನುಜ ವೃಂದವ ಸೀಳಿ ಜಗವ ಪೊರೆದ ವಿಭುವೆ 1 ಇಂದು ಸುಂದರ ಫಾಲರಾಮ ಇಂದು ವಂಶಜಲೋಲ ದಶರಥನಂದನಾಶ್ರಿತ ವತ್ಸಲ ವಿಭುವೆ 2 ಪಂಕಜ ಮಲ್ಲಿಕಾಕುಸುಮಾಳಿ ಭಾಸುರ ಪುಲ್ಲ ಚಂಪಕ ಮಾಲಕ ರಂಜಿತ ಉಲ್ಲಸನ್ಮøದುವಾಣಿ ವಿಭುವೆ 3 ಭಕ್ತ ಹೃದಯ ಕುಮುದ ಚಂದ್ರ ಶಕ್ತಿವಿಜಿತ ರಾಕ್ಷಸೇಂದ್ರ ಭುಕ್ತಿ ಮುಕ್ತಿದಾಯಕ ವಿಭುವೆ 4 ಮಾನವೇಂದ್ರ ಸುರೇಂದ್ರ ವಂದಿತ ಸೂನ ಶರ ಸಹಸ್ರ ಸುಂದರ ಚಕೋರ ಧೇನುನಗರ ಶ್ರೀರಾಮ ವಿಭುವೆ5
--------------
ಬೇಟೆರಾಯ ದೀಕ್ಷಿತರು
ಶ್ರೀರಂಗೇಶವಿಠಲ | ಪೊರೆಯೆನ್ನ ಹೃದಯಾ- ಧಾರನೆ ಮಾಲೋಲ | ಸ್ಮರಕೋಟಿ ಸುಂದರಾ- ಕಾರ ನತಜನಪಾಲ | ಅರಿಮಸ್ತಕ ಶೂಲ ಪ ಆರು ಅರಿಗಳ ಗೆಲಿಸಿಯೆನ್ನಿಂ- ದಾರು ಎರಡನು ಮುರಿಸಿ ನಿನ್ನೊಳು ಆರು ಮೂರನೆಯಿತ್ತು ಸರ್ವದ ಪಾರುಗೈಯ್ಯಬೇಕೆಂಬೆ ದೇವ ಅ.ಪ. ಆನೆಗೊಂದಿ ನಿವಾಸ | ಭಕುತರ ನಿರಂತರ ಮಾನದಿಂ ಪೊರೆವ ಶ್ರೀಶ | ಎಂದೆಂದಿಗು ನಾನಿನ್ನ ದಾಸರ ದಾಸ | ನೆಂದು ಕರುಣಿಸು ನೀನೆನಗೆ ಲೇಸ | ಭಾನುಕೋಟಿ ಪ್ರಕಾಶ ಮಾನ ಅವಮಾನಗಳು ನಿನ್ನಾ- ಧೀನವೆಂದೇ ನಂಬಿಕೊಂಡಿಹ ದೀನನೆನ್ನನು ದೂರ ನೋಡದೆ ಸಾನುರಾಗದಿ ಪೊರೆವುದೈಯ್ಯಾ ನಳಿನಭವ ಅಂಡದೊಳಗೆ ದಾನಿ ನೀನಲ್ಲದನ್ಯರುಂಟೆ ಏನ ಬೇಡೆನು ನಿನ್ನ ಬಳಿಯಲಿ ಜ್ಞಾನ ಭಕುತಿ ವೈರಾಗ್ಯವಲ್ಲದೆ1 ವರಾಹ ಜನ ತಾಪ | ತ್ರಯ ದೂರ ವಾಮನ ಮಾನವೇಂದ್ರರ ಪ್ರತಾಪ | ವಡಗಿಸಿದೆ ಪ್ರಬಲ ದಾನವೇಂದ್ರನ ಶಾಪ | ನೀನೆ ಕಳೆದೆಯೊ ಶ್ರೀಪಾ ವಾನರ ಬಲ ನೆರಹಿಕೊಂಡು ನೀನು ರಾವಣನನ್ನು ಕೊಂದು ಮಾನಿನಿಯ ಪೊರೆದು ಶರಣಗೆ ನಿ ದಾನ ಮಾಡದೆ ಪಟ್ಟಗಟ್ಟಿದೆ ದಾನವಾಂತಕನೆಂಬ ನಾಮವ- ನ್ಯೂನವಿಲ್ಲದೆ ಪರಸತಿಯರಭಿ ಮಾನ ಕಳುಪಿದ ಜಾಣ ಕಲ್ಕಿಯೆ 2 ಸೂರಿಜನ ಪರಿಪಾಲ ಸದ್ಗುಣಗಣನಿಲಯ ಘೋರರಕ್ಕಸಕಾಲ | ವರಶೇಷತಲ್ಪವ ನೇರಿ ನಿರುಪಮ ಬಾಲ | ನಂದದಿ ನಿರುತ ನೀ ತೋರುತಿರುವೆಯೊ ಲೀಲ | ಶ್ರೀ ರಂಗೇಶವಿಠಲ ಮಾರ ಜನಕನೆ ಮಂಗಳಾಂಗನೆ ಕ್ರೂರ ಕುಲವನದಾವ ಅನಲನೆ ಭೂರಿ ಕರುಣವ ಬೀರಿ ಎನ್ನಸು ಭಾರ ನಿನ್ನದು ವಾರಿಜಾಕ್ಷನೆ ಎನ್ನ ಹೃದಯದಿ ಚಾರು ಬಿಂಬವ ಸಾರಿ ಬೇಡುವೆ ಬಾರಿ ಬಾರಿಗೆ ಶರಧಿ ಬಡಬನೆ3
--------------
ರಂಗೇಶವಿಠಲದಾಸರು
ವಾಸುದೇವಜಯಜಯವಾಸುದೇವಪವಾಸುದೇವಜಲಜಾಸನ ವಂದಿತಕೇಶವ ನತಜನ ಪೋಷ ಜನಾರ್ದನಅ.ಪಶ್ರೀನಿವಾಸ ಜಯಜಯ ಶ್ರೀನಿವಾಸಶ್ರೀನಿವಾಸ ಒಲಿ ಸಾನುರಾಗದಲಿಮಾನವೇಂದ್ರ ಅನುಮಾನಿಸದೆನ್ನಲಿ1ವೆಂಕಟೇಶ ಜಯಜಯ ವೆಂಕಟೇಶಾವೆಂಕಟೇಶ ಭವಬಿಂಕ ವಿನಾಶಶಂಕರಸಖಶಶಾಂಕ ಪ್ರಕಾಶನೆ2ಪದ್ಮನಾಭಾ ಜಯಜಯ ಪದ್ಮನಾಭಾಪದ್ಮನಾಭಪೊರೆಪದ್ಮನಯನ ಹರೇಪದ್ಮೋದ್ಭವನುತ ಪದ್ಮ ಮಾಲಾಧರ3ಇಂದಿರೇಶಾ ಜಯಜಯ ಇಂದಿರೇಶಾಇಂದಿರೇಶ ಗುಣವೃಂದ ಜಗನ್ಮಯಸಿಂಧುಶಂiÀುನಗೋವಿಂದದಾಸ ಪ್ರಿಯ4<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ