ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ಗತಿ ಎನಗಿನ್ನು ಕರುಣಿಸು ಮಾಧವ ದೀನನ ಮರೆಯದಿರು ಸಿರಿಯರ ಜೀವ ಪ ನೀನೆ ಕರುಣಾಳು ಭಕ್ತಜನರಭಿಮಾನಿ ನೀನೆನ್ನ ಬಿಟ್ಟ ಬಳಿಕ ಕಾಮಿತವ ಪೂರೈಸಿ ಕಾಯ್ವರಕಾಣೆನಾರನು ಕಮಲನಾಭ ಅ.ಪ ಎಡಬಿಡದೆನ್ನನು ಕಾಡುತಿರುವ ಅತಿ ಜಡಭವ ಕಡುದು:ಖ ತಡಿಲಾರೆನಭವ ಅಡರಿಕೊಂಡೆನ್ನ ಸುಡುತಲಿರುವ ಒಡಲತಾಪ ಗಡನೆ ಬಿಡಿಸಿ ಬಿಡದೆ ಎನ್ನನು ಪಿಡಿದು ರಕ್ಷಿಸು ಮಡದಿಗಕ್ಷಯದುಡುಪು ಇತ್ತನೆ 1 ಶರಧಿಸಂಸಾರದ ಉರುತರ ಪರಿಬಾಧೆ ಕಿರಿಕಿರಿ ಪರಿಹರಿಸಿ ಪೊರೆಯಯ್ಯ ಜವದಿ ಶರಣುಮಾಡುವೆ ಶರಣಜನರ ಕರುಣಮಂದಿರ ಮರೆಯದಿರೆಲೊ ತರಳ ನಿರುತದಿ ಚರಣಸ್ಮರಿಸಿ ಕರೆಯೆ ಕಂಬದಿ ಭರದಿ ಬಂದನೆ 2 ಮುಂದೆನಗೆ ಭವಬಂಧ ಎಂ ದೆಂದಿಗಿಲ್ಲದಂತೆ ತಂದೆ ಕರುಣಿಸು ದಯಾ ಸಿಂಧು ಶ್ರೀರಾಮ ವಂದಿ ಭಜಿಸುವೆ ಮಂದರಾದ್ರಿ ಮಂದಿರನೆ ತ್ವರ ಬಂದು ಕಾಯೊ ಬಂಧನದಿ ಜಗ ತಂದೆ ನಿಮ್ಮ ಪಾದಕೆಂದು ಪೂವಗೆ (?) ಬಂದು ಪೊರೆದನೆ 3
--------------
ರಾಮದಾಸರು
ಪಾಹಿ ರಮಾ ಮನೊಹರ ಪಾಪಿ ಪ ಪಾಹಿ ಸದಾಗಮವೇದ್ಯ ಸಕಲ ಕ ಲ್ಯಾಣ ಗುಣಾರ್ಣವ ಲೀಲಾಮಾನುಷ ಅ.ಪ ಆನೆಯೊಂದು ಕರೆಯಲು ಆ ಕ್ಷಣದಲಿ ನೀನೇ ಬಂದುದೇಕೆ ದೇವ ನೀನೇ ಪಡೆದ ಮಕ್ಕಳ ದೈನ್ಯದ ನುಡಿ ನೀನಲ್ಲದೆ ಕೇಳುವರ್ಯಾರಿರುವರು1 ತುರುವಿನ ಕೆಚ್ಚಲ ಕರು ಗುದ್ದಿದರದು ಕರೆಯದೇ ಕ್ಷೀರವನು ದೇವ ಮರೆತು ಎನ್ನ ಅಪರಾಧಗಳೆಲ್ಲವ ಮರೆಯದಿರೆಲೊ ಎನ್ನಯ ಬಾಂಧವ್ಯವ 2 ಅತ್ತು ಕರೆದು ಔತಣ ನೀಡಿದ ಪರಿ ನಿತ್ಯ ಸೇವೆಯಾಯ್ತೋ ಕೃಷ್ಣ ನಿತ್ಯ ಪೂರ್ಣ ಕರುಣಾಮಯ ಕರುಣಿಸೊ ಚಿತ್ತ ಪ್ರಸನ್ನತೆ ಸಾರ್ಥಕ ಜೀವನ 3
--------------
ವಿದ್ಯಾಪ್ರಸನ್ನತೀರ್ಥರು
ಮರೆಯದಿರೆಲೊ ಮನುಜಾ ಮಾಧವನನ್ನು ಮರೆಯದಿರೆಲೋ ಶುದ್ಧ ಮರುಳೆ ಮಾತನು ಕೇಳು ಪರಿಪರಿಯಲಿ ನಮ್ಮ ಪೊರೆವ ಕಾರುಣಿಕನ ಪ. ತನ್ನ ಸೇವೆಗೆ ಸಾಧನವಾಗಿಹ ದೇಹ- ವನ್ನು ಪಾಲಿಸಿದವನ ಯಿನ್ನು ನೀ ತಿಳಿಯದೆ ಅನ್ಯ ದೈವಗಳನ್ನು ಮನ್ನಿಸಿ ಮನದಣಿದನ್ನ ನಾಯಕನನ್ನು 1 ಹಸ್ತ ಪಾದಾದಿಗಳ ಕೊಟ್ಟದರಿಂದ ವಿಸ್ತರಿಸಿರುವಾನಂದ ತೋರುವ ಸುರ ಮಸ್ತಕ ಮಣಿಯನು ಮರೆತು ಮೂಢರ ಸೇರಿ ಬಸ್ತಕನಂತೆ ನಿರಸ್ತನಾಗದೆಯೆಂದು 2 ಮನೆಯಲಿ ನಿಲಿಸಿರುವ ವಾಕ್ಕಾಯಕರ್ಮ ಮನದಲಿ ತುಂಬಿರುವ ನಮ್ಮಯ ಸರ್ವ ವನು ತನಮನ ತಾನೆ ನೆನೆದು ಪಾಲನೆ ಗೈವ ವನಜನಯನ ಲಕ್ಷ್ಮಿಯಿನಿಯನ ಮಹಿಮೆಯ 3 ದುರಿತರಾಶಿಯನರದು ದುರ್ ಹೃದಯರ ತರಿದು ಕಾಲಿಂದಲೊದೆದು ಸಿರಿ ಸಹಿತವಾಗಿ ನಮ್ಮಲ್ಲಿರುವನ ಸರ್ವಾಮಯ ಹರ ಪದದಲ್ಲಿ ಭಾರವಿರಿಸು ವಿಚಾರಿಸು 4 ಬಿಡು ಬಿಡು ಭ್ರಾಂತಿಯನು ಮುರಾಂತಕನ- ಲ್ಲಿಡು ನಿನ್ನ ಚಿಂತೆಯನು ಕಡಿವನು ವೈರಿಗಳ ಕೊಡುವನು ಶುಭಗಳ ಒಡೆಯ ವೆಂಕಟಪತಿ ತಡಿಯ ತೋರುವನೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಕೃಷ್ಣಾಚ್ಯುತ ಗೋವಿಂದ -ವಾಸುದೇವ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರಹರಿ ಎನಬಾರದೆ ? ಪ.ಉದಯಕಾಲದಿ ಏಳುತ - ಸಿರಿಯರಸನ |ಒದಗಿ ಸೇವೆಯ ಮಾಡುತ ||ತದನಂತರ ಭೋಜನದಲಿ ಸ್ಮರಿಸುತ |ಮದಗಜಗಮನೆಯೊಳ್ ಸರಸÀವಾಡುತಲೊಮ್ಮೆ 1ಸಿರಿ ಬಂದಡಸಿದಾಗ - ಮೆರೆಯದಿರು |ಹಿರಿ ಹಿರಿ ಹಿಗ್ಗದಿರು ||ನೆರೆ ಬಡತನಕೆ ಜರ್ಜರಿತನಾದೆ ನೀನು ?ಹರಿನಾಮಸ್ಮರಣೆಯ ಮರೆಯದಿರೆಲೊ ಮನುಜ 2ದುಷ್ಟರುಪದ್ರದೊಳಾಗಲಿ - ರಣರಂಗದ |ದಿಟ್ಟ ಸಮರದೊಳಾಗಲಿ ||ಕಟ್ಟಾರಣ್ಯದೊಳು ಹುಲಿಯು ಬಾಧಿಸುತಿರೆ |ಸೃಷ್ಟಿಗೊಡೆಯ ಪುರಂದರವಿಠಲ ಕಾಯ್ವ 3
--------------
ಪುರಂದರದಾಸರು