ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾಗೀರಥೀದೇವಿ ಭಯನಿವಾರಣೆ ಗಂಗೆ |ಸಾಗರನ ನಿಜರಾಣಿ ಸಕಲಕಲ್ಯಾಣಿ ಪಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |ಬ್ರಹ್ಮಕರ ಪಾತ್ರೆಯಲಿನಿಂದುಬಂದೆ ||ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |ಬೊಮ್ಮಾಂಡವನು ಪಾವನಮಾಡ ಬಂದೆ 1ದೇವಿ ನೀ ವಿಷ್ಣುಪಾದೋದಕವೆಂದೆನಿಸಿ |ದೇವತೆಗಳಿಗೆಲ್ಲ ಅಧಿಕವಾದೆ ||ದೇವರೆಲ್ಲರು ನೆರೆದು ತಲೆಬಾಗಿದರು ಮಹಾ-|ದೇವನ ಶಿರದಿಂದ ಧರೆಗಿಳಿದು ಬಂದೆ 2ಜಹ್ನವಿನುದರದಿ ಪೂಕ್ಕ ಕಾರಣದಿಂದ |ಜಾಹ್ನವಿಯೆಂದು ನೀನೆನಿನೆಕೊಂಡೆ ||ಮುನ್ನ ನರಕಕ್ಕಿಳಿದ ಸಗರರಾಯನ ವಂಶ- |ವನ್ನು ಪಾವನಮಾಡಿ ಪೊರೆಯಲು ಬಂದೆ 3ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ |ದಿಟ್ಟಿಸಲು ಮೂರುಜನ್ಮದಿ ಮುಕುತಿಯು ||ಮುಟ್ಟಿ ಮಾಡಿದರೊಂದು ಸ್ನಾನಮಾತ್ರದಲಿ |ಸುಟ್ಟು ಹೋಹುದು ಸಾಸಿರಜನ್ಮ ಪಾಪ 4ಹಲವು ಪರಿಯಲಿ ಹರಿಯ ಸ್ಮರಣೆಯಿಲ್ಲದೆ ಭವ-|ದೊಳಗೆ ಸಿಲುಕಿ ಕಡುನೊಂದೆ ನಾನು ||ಹಲವು ಮಾತೇಕೆ ಶ್ರೀ ಪುರಂದರವಿಠಲನ |ಚೆಲುವಪದದಿಂದಿಳಿದು ಒಲಿದು ದಯೆ ಮಾಡೆ 5
--------------
ಪುರಂದರದಾಸರು
ಶ್ರೀಮುಖ ಸಂವತ್ಸರ ಸ್ತುತಿ150ಶ್ರೀಮುಖ ಸಂವತ್ಸರದಿ ಈ ಮಹೀ ಸಜ್ಜನರು ಸರ್ವರನುಕಷ್ಟಉಪಟಳಹಾವಳೀ ಯಾವುದೂ ಪೀಡಿಸದೆ ಸೌಖ್ಯದಲಿಇರಲಿಕ್ಕೆ ದಯಮಾಡಿ ಒದಗಲಿನಿರ್ದೋಷಸರ್ವೇಶ ರಮಾಪತಿಯು ಪಪೂರ್ಣ ಕಲ್ಯಾಣತಮ ಗುಣಗಣಾರ್ಣವ ಆನಘಶ್ರೀಮನ್ನಾರಾಯಣನು ಘನದಯದಿ ಅತ್ರಿ ಋಷಿಗೊಲಿದುತನ್ನನ್ನು ತಾನೇವೆ ದತ್ತಮಾಡಿ ತಾ ದತ್ತನೆನೆಸಿಕೊಂಡಅನುಪಮ ಮಹಾಯೋಗ ಯೋಗೇಶ್ವರನುಶ್ರೀಮುಖದಿ ಕಾಯಲಿ ಶರಣೆಂಬೆ 1ಶ್ರೀಮುಖ ಸಂವತ್ಸರ ಅನುಕೂಲ ಕಾಲವು ಯೋಗ್ಯ ಸುಜನರಿಗೆಶ್ರೀ ಮಹಾಮುನಿಕುವರನೆಂದು ಪ್ರಾದುರ್ಭವಿಸಿದ ದತ್ತಾತ್ರೇಯನ್ನಸುಮನಸೆ ವಾಕ್‍ಕಾಯದಿಂ ಸೇವಿಸುವವರಿಗೆಜ್ಞÕನಬಲ ಐಶ್ವರ್ಯವಿತ್ತುರೋಗನಿವಾರಣ ಮಾಳ್ಪ ಕರುಣಾಳುದತ್ತಘೃಣೀಬ್ರಹ್ಮವಾಯುಸೇವ್ಯ 2ಶ್ರೀಮುಖ ಸಂವತ್ಸರ ರಾಜಾ ಬುಧನು ಮಹಾಶ್ರೇಷ್ಠ ಬುದ್ಧಿಕುಶಲನುಬ್ರಹ್ಮದೇವರಿಂದ ಕೃತ ಬುಧನಾಮ ಶ್ರೀ ನಾರಾಯಣ ಪ್ರಿಯನುಸಂವತ್ಸರ ಸಚಿವಾದಿ ಉಪನಾಯಕ ಸಹಪಾಲಿಸಲಿ ಲೋಕ ಜನರನ್ನುಬ್ರಹ್ಮದೇವರಪಿತ ಪ್ರಸನ್ನ ಶ್ರೀನಿವಾಸ ಶ್ರೀಕೃಷ್ಣನೊಲುಮೆಯಿಂದ 3 ಪ
--------------
ಪ್ರಸನ್ನ ಶ್ರೀನಿವಾಸದಾಸರು