ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಕಾಣಿರೊ ಕಾಣಿಸುವನ ಕಂಡು ಕಾಣಿಸುವನ ಖೂನ ಖಂಡ ಮಾಡುವದಿದೆ ಸುಜ್ಞಾನ ಧ್ರುವ ಕಾಣಿಸುವನ ಕಾಣದೆ ಖೂನ ಜಾಣತನದÀಲ್ಹೇಳುವದೇನ ಜ್ಞಾನಗಮ್ಯವಾದ ಸ್ಥಾನ ಮನೋನ್ಮನದಲಿ ನೋಡಿ ನಿಧಾನ 1 ಸ್ವಾನು ಭವದ ಸುರಸನೋಟ ಧ್ಯಾನಧಾರಣಕಿದೆ ನೀಟ ಅನುದಿನದಲ್ಯಾನಂದ ಆಟ ಮುನಿಜನರ ಸುಕಾಲದೂಟ 2 ಸ್ವಾಮಿಯ ನೋಡಿ ಒಡನೆ ಬಾಹ ಕೈಗೂಡಿ ನೋಡುದರೊಳು ತಾನೆ ಒಡಮೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನದಿಂದಲಿ ಮನನೋಡಿ ಮನವರಿತು ಘನ ಕೂಡಿ ಧ್ರುವ ಮನಸಿನಿಂದ ತಾ ನೋಡುವ ಖೂನ ಮನ ಮರೆಯಲದೆ ನಿಧಾನ ಮನವರಿಯದೆ ಇಹುದ್ಯಾತರ ಜ್ಞಾನ ಮನವೇ ಸ್ವಹಿತ ಕಾರಣ 1 ಮನದ ಕೊನಿಯಲಿದೆ ಘನಸುಖದಾಟ ಅನುದಿನ ನೋಡುದು ನೀಟ ಸ್ವಾನುಭವದಲಿದು ನೋಡುವ ನೋಟ ಮುನಿಜನರ ಸುಖದೂಟ 2 ಮನೋನ್ಮನದೊಳಗದೆ ಘನಸ್ಫೂರ್ತಿ ಙÁ್ಞನಕಿದೆ ಮನೆ ವಾರ್ತಿ ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ ಮನಕಾಗಿಹ ತಾಂ ಸಾರ್ಥಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನಾ ಮನಾ ಘನಾ ಘನಾ ಎನುತಿದೆ ಲೋಕರಿಯದೆ ಖೂನ ಧ್ರುವ ಮನದಾವದು ಎಂದರಿಯದೆ ಖೂನ ಘನದಾವವೆಂದರಿಯದು ಧ್ಯಾನ ಧ್ಯಾನ ಮೋನ ಯಾತಕದೇನ ಅನುಭವರಿಯದೆ ಮರುಳಜನ 1 ಮೂಲದಲಿಡದೆ ಠಾವಿಲಿ ಮನ ಜ್ಯಾಲವ್ಯಾತಕೆ ಬರೇ ಮಾತಿನ ಕೀಲ ತಿಳಿಯದೆ ಸದ್ಗುರು ಜ್ಞಾನ ನೆಲಿಯುಗೊಂಬುದೆ ನಿಜಸಾಧನ 2 ಮನದಲಿ ಮನಸಿನ ತಿಳಿವದು ಬಿಟ್ಟು ಜನವನ ತಿರುಗುದೆ ಕೆಟ್ಟು ಮನೋನ್ಮನದೊಳಗಿದೆ ಘನಗುಟ್ಟುದೀನ ಮಹಿಪತಿ ಗುರು ದಯಲುಂಟು3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತಿನಂತಲ್ಲನುಭವ ಜ್ಞಾನ ಮರುಳಜನ ಬಲ್ಲವೇನ ಯತಿಮುನಿಗಳು ಸಾಧಿಸುವ ಖೂನ ಮನೋನ್ಮನದ ಸಾಧನ ಧ್ರುವ ನುಡಿಜ್ಞಾನಾಡಿ ತೋರಬಹುದು ನಾಡ ಲೋಕದೊಳೆಲ್ಲ ನಡಿಜ್ಞಾನದೆ ದುರ್ಲಭವದು ಆಡಿ ದೋರಲಿಕ್ಕಿಲ್ಲ ಗುಹ್ಯ ನಿಜಬೋಧಿದು ಒಡೆದ್ಹೇಳುವದಲ್ಲ ಒಡನೆ ಸದ್ಗುರು ಘನ ದಯದಲಿದು ಪಡೆದವನೆ ತಾಂ ಬಲ್ಲ 1 ಕಲಿತಾಡುವ ಮಾತಿಗೆ ಸಿಲುಕದ ಮೂಲವಸ್ತುದ ಖೂನ ನೆಲೆನಿಭವೆ ತಾ ಅಗಮ್ಯಿದು ಬಲು ಸೂಕ್ಷ್ಮಸ್ಥಾನ ಬಲಿಯದೆ ರೇಚಕ ಪೂರ್ವಿದು ನೆಲೆಗೊಳ್ಳುದು ಸಾಧನ ನಿಲಕಡ್ಯಾಗದೆ ಕುಂಭಕಲಿದು ಬಲಿಯದು ಗುರುಙÁ್ಞನ 2 ಸ್ವಾನುಭವ ಸುಖ ಸಾಧಿಸಿ ಅನುದಿನದಿ ನೋಡಿ ಮನಗೆದ್ದು ಜನಕೆ ಮೋಹಿಸುವ ಅನುಭವ ಹೇಳಬ್ಯಾಡಿ ಭಾನುಕೋಟಿತೇಜನೊಲಿದು ತಾ ಖೂನಾಗುವ್ಹಾಂಗ ಮಾಡಿ ದೀನ ಮಹಿಪತಿ ಸ್ವಾಮಿ ಮನಗಂಡು ಮನೋಹರ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶೋಧಿಸಿ ನೋಡಿರೋ ಸದಾ ಬೋಧದ ನಿಜಬೋಧ ಧ್ರುವ ಸಾಧಿಸಿ ನೋಡಿ ಸದ್ಗುರು ಕೃಪೆಯಿಂದ ಸಾಧನಕೆದುರಿಡುವುದು ಆನಂದ ಭೇದಿಸಿ ನೋಡುವದಿದೇ ತನ್ನಿಂದ ಆದಿ ಅನಾದಿದೇ ಸಹಜಾನಂದ 1 ತಂದುವಿಡಿದರಂತತ್ತೆ ನೋಡಿ ಎಂತೆಂತೀಹ್ಯ ನಿಜದಂತೆ ಗೂಡಿ ಅಂತರಾತ್ಮದಲೆ ಅನುಭವ ಬೆರೆದಾಡಿ ಸಂತತ ಸದಮಲ ಸುಖಸೂರ್ಯಾಡಿ 2 ವಿಹಿತಕೆ ವಿಹಿತಾಗುವ ಸುಪಥ ದ್ವೈತಾದ್ವೈತಕಿದೆ ರಹಿತ ಮಹಾಮಹಿಮರ ಆನಂದಭರಿತ ಮಹಿಪತಿ ಮನೋನ್ಮನದ ಸುವಸ್ತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾನಂದದ ಘನಸುಖ ಏನೆಂದ್ಹೇಳಲಿ ಕೌತುಕ ಧ್ರುವ ಬಲಗೊಂಡದೆ ಬ್ರಹ್ಮಭಾವ ನೆಲಗೊಂಡದೆ ಸರ್ವದ ಬಲುದೋರುತದೆ ಸುಸ್ವಾದ ಸುಲಭ ಸದ್ಗುರು ಪ್ರಸಾದ 1 ತಾನಾಗ್ಯದೆ ತಾರ್ಕಣ್ಯಸ್ವಾನುಭವದ ಸುಪುಣ್ಯ ಮುನಿಜನರೆ ಧನ್ಯಧನ್ಯ ಅಣುರೇಣುಕ ತಾ ಮಾನ್ಯ 2 ಮನೋನ್ಮನದಾಶ್ರಯ ಭಾನುಕೋಟಿ ಉದಯ ದೀನ ಮಹಿಪತಿಗಿದೆ ಸಾಹ್ಯ ಅನುದಿನಿದೇ ಉಚ್ಛ್ರಾಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು