ಯತಿ ವರ್ಣನೆ
ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ
ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ
ಕಂಡು ಕೃತಾರ್ಥನಾದೆ ಪ.
ಕಂಡು ಕೃತಾರ್ಥನಾದೆ ಭೂ-
ಮಂಡಲದಿ ಪೆಸರ್ಗೊಂಡು ಮೆರೆದಿಹ
ಪುಂಡರೀಕದಳಾಕ್ಷ ಸತತಾ-
ಖಂಡಸುಖ ಮಾರ್ತಾಂಡತೇಜರ ಅ.ಪ.
ವಾರಿರುಹಭವಾಂಡದ ಭೂಮಧ್ಯ ವಿ-
ಸ್ತಾರಜಂಬೂದ್ವೀಪದ ನವಖಂಡದೊಳ್
ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ
ತೋರ್ಪ ವಿಂಧ್ಯಾಚಲದ ಮಧ್ಯ ಭಾ-
ಗೀರಥಿಯ ಪಶ್ಚಿಮ ಭೂಭಾಗದ
ತೀರ ಕಾಶೀಮಠಸಂಸ್ಥಾನ ವಿ-
ಚಾರಶಾಸ್ತ್ರವಿಶಾರದರ ಪದ 1
ವರ ರಾಜೇಂದ್ರ ಯತೀಂದ್ರರ ಕರಸಂಜಾ-
ತರ ಗುರುಸುರೇಂದ್ರರ ಕರಕಮಲಮಧ್ಯದಿ
ಧರಿಸಿರ್ದ ವಿಭುದೇಂದ್ರರ ಸರೋರುಹ
ಕರಸಂಜಾತ ಮಹಾನುಭಾವರ
ಕರುಣನಿಧಿ ಕಮನೀಯ ಸದ್ಗುಣ
ಭರಿತ ಶ್ರೀಭುವನೇಂದ್ರರಂಘ್ರಿಯ 2
ಸುಂದರಮುಖಶೋಭೆಯ ಪೂರ್ಣಮಿ ಶುಭ
ಚಂದ್ರಸನ್ನಿಭಕಾಂತಿಯ ಶೋಭಿಪ ನವ
ಕುಂದರದನ್ತಪಂಕ್ತಿಯ ತಿಲಕದ ಛಾಯ
ಮಂದಹಾಸಾನಂದ ಪುರಜನ
ವೃಂದಪೂಜಿತಪಾದಪದ್ಮ
ದ್ವಂದ್ವ ಸತತಾನಂದ ಸದ್ಗುಣ
ಇಂದ್ರ ಶ್ರೀಭುವನೇಂದ್ರರಂಘ್ರಿಯ 3
ಶೃಂಗಾರರಸತೇಜರ ಯಮನಿಯಮಾದ್ಯ
ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ
ಕಂಗಳಿಗಗೋಚರ ಸತ್ಯಾವತಾರ
ಮಂಗಳಾತ್ಮಕಸಂಗ ಸುಮಮನಸ
ರಂಗ ಸಾಧ್ಯವೇದಾಂಕ ಕರುಣಾ
ಪಾಂಗ ವಿಬುಧೋತ್ತುಂಗ ಅಂಗಜ
ಭಂಗ ಶ್ರೀಯತಿಪುಂಗವರ ಪದ 4
ಎಷ್ಟೆಂದು ನಾ ಪೇಳಲಿ ಸದ್ಗುರುವರ-
ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ
ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ
ಶ್ರೇಷ್ಠ ಗೌಡಸಾರಸ್ವತ ಸ-
ಮಷ್ಟಿ ಕೊಂಕಣದೇಶವಿಪ್ರ ವಿ-
ಶಿಷ್ಟ ಒಡೆತನ ಪಟ್ಟವಾಳುವ
ಶ್ರೇಷ್ಠಯತಿವರರಂಘ್ರಿಕಮಲವ 5
ಆಶೆಯೊಂದುಂಟೆನಗೆ ಕಾವ್ಯವ ಓದ್ಯ-
ಭ್ಯಾಸಗೈಯುವದು ಮಿಗೆ ಸನ್ನಿಧಾನದಿ
ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ
ಏಸು ಧನ್ಯನು ನಾನು ಕರುಣಾ
ನಿಗಮ ವಿ-
ಲಾಸರಂಘ್ರಿಗೆ ದಾಸದಾಸರ
ದಾಸ ನಾನು ದಯಾಶರಧಿಯರ 6
ಸತತ ಸದ್ಯತಿಧರ್ಮದ ಪರಿಪಾಲಿಸಿ
ಕ್ಷಿತಿಗತಿ ಪ್ರತಿವಾಸವನಂತೆಸೆವುತಾ
ಮಿತ ಭಾಗ್ಯಸಂಪದವ ವಿಖ್ಯಾತವ
ರತಿಪತಿಯ ಪಿತ ಕ್ರುತುಪಾಲಿತ ಸೂ-
ನೃತಭಾಷಿತ ಲಕ್ಷ್ಮೀನಾರಾಯಣ
ಸತತ ವೇದವ್ಯಾಸ ಶ್ರೀರಘು
ಪತೀಚರಣಪೂಜಿತರ ಪದವನು 7