ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂ||ಮಂಗಳವಾರದ ಪೂಜೆಗೆಮಂಗಳ ನೈರುತ್ಯದಲ್ಲಿ ಶಿವನಪ್ಪಣೆುಂಮಂಗಳ ನಾಮವ ಜಪಿಸುತಮಂಗಳವನ್ನೀಯುತೆಮಗೆ ಶೋಭಿಸುತಿಪ್ಪಳ್‍ನಿನ್ನ ಚರಣವ ನಂಬಿ ಭಜಿಸುತಿಹ ಭಕ್ತನಿಗೆ ುನ್ನುಂಟೆ ಗ್ರಹಗತಿಗಳು ಕೃಷ್ಣಾ ಪಉನ್ನತದ ಚಕ್ರವರ್ತಿಯ ಹೊಂದಿ ಬದುಕುವನಿಗನ್ಯರಟ್ಟುಳಿ ಬರುವದೇ ಕೃಷ್ಣಾ ಅ.ಪನೀನೊಬ್ಬನೇ ದೇವನೆಂದು ಪೇಳುತಲಿಹುದುಸಾನುನಯವುಳ್ಳ ಶ್ರುತಿಯು ಕೃಷ್ಣಾಏನೊಂದು ರೂಪಾಗಿ ತೋರಿದರು ಸಕಲವೂನೀನಲ್ಲದನ್ಯವುಂಟೇ ಕೃಷ್ಣಾಏನೆಂಬೆ ಚಿನ್ನ ಹಲವಂದದಾಭರಣದಲಿಕಾಣಿಸಿದರದು ಭೇದವೇ ಕೃಷ್ಣಾನೀನೇ ದೇವಾತ್ಮಕನು ನೀನೆ ಗ್ರಹರೂಪಕನುನೀನೊಲಿದ ನರಗೆ ಭಯವೇ ಕೃಷ್ಣಾ 1ಉತ್ತವನು ಬಿತ್ತುವನು ಬಿತ್ತಿದವನುಂಬವನುಮತ್ತೊಬ್ಬನದಕೆ ಬಹನೇ ಕೃಷ್ಣಾಉತ್ತು ಬಿತ್ತಿದೆ ಮಾಯೆಯೆಂಬ ಕ್ಷೇತ್ರದಿ ನಿನ್ನಚಿತ್ತೊಂದು ಬೀಜವನ್ನು ಕೃಷ್ಣಾಬಿತ್ತು ವೃಕ್ಷಾಕಾರವಾದಂತೆ ಲೋಕವಿದುವಿಸ್ತರದಿ ಬಹುವಾುತು ಕೃಷ್ಣಾಬಿತ್ತಿ ಬೆಳೆದುಂಬಾತನುತ್ತಮನು ನೀನಿರಲುಮತ್ತೊಂದು ಭಯವದೇಕೆ ಕೃಷ್ಣಾ 2ಇಂದ್ರಾದಿ ದಿಕ್ಪಾಲಕರ ರೂಪನಾಗಿರುವೆಚಂದ್ರಾದಿ ಗ್ರಹರೂಪನು ಕೃಷ್ಣಾಇಂದ್ರ ಚಂದ್ರಾದಿತ್ಯ ವರುಣಾದ್ರಿ ಗಗನಾದಿಇಂದ್ರಿಯಾಧೀಶ ನೀನೆ ಕøಷ್ಣಾಇಂದ್ರಿಯಾಧೀನರಾಗಿರುವರರಿಯರು ನಿನ್ನಮಂದಬುದ್ಧಿಯ ಮೂಢರು ಕೃಷ್ಣಾತಂದ್ರಿಯನು ಪರಿಹರಿಸಿ ಹೊಂದಿ ನಿನ್ನನು ಭಜಿಪಛಂದವನು ನೀ ತೋರಿಸು ಕೃಷ್ಣಾ 3ಒಡೆಯನೊಬ್ಬನು ಜಗಕೆ ಬಳಿಕಾತನಾಜ್ಞೆಯಲಿನಡೆವರೆಲ್ಲರು ಮೀರದೆ ಕೃಷ್ಣಾನಡೆಯಲರಿಯದು ಹಲಬರೊಡೆಯರಾಗಲು ನೀತಿಕೆಡುವುದದು ಕದನಮುಖದಿ ಕೃಷ್ಣಾನುಡಿದು ಭೇದವ ನಿತ್ಯ ಕದನವನು ಮಾಡುತಿಹಜಡರ ಮಾತದು ಸತ್ಯವೇ ಕೃಷ್ಣಾಬಿಡಿಸಿ ಭೇದವನೊಬ್ಬನೊಡೆಯನೆಂದುರು ಸಾರ್ವಸಡಗರದ ಶ್ರುತಿ ನಿತ್ಯವು ಕೃಷ್ಣಾ 4ಬಿಡದೆ ನಿನ್ನಂಘ್ರಿಯನು ದೃಢವಾಗಿ ಭಜಿಸುವರುಜಡತೆಯಳಿದ ಮಹಾತ್ಮರು ಕೃಷ್ಣಾಬಿಡುವದವರಿಗೆ ಲೋಕ ನಡೆವ ನಡತೆಯ ಭ್ರಮೆಯುನಡತೆಯದು ನಿನ್ನ ನಿಜವು ಕೃಷ್ಣಾನಡೆದು ಬಳಿಕಾ ಮಾರ್ಗವನು ಹೊಂದಿದವ ನಿಪುಣಬಿಡಬೇಕು ಮೂಢಮತವ ಕೃಷ್ಣಾಪೊಡವಿಯೊಳು ತಿರುಪತಿಯ ವಾಸ ವೆಂಕಟರಮಣಕೊಡು ನಿನ್ನ ಭಜಿಪ ಮತಿಯ ಕೃಷ್ಣಾ 5ಓಂ ಅವ್ಯಕ್ತ ಗೀತಾಮೃತ ಮಹೋದಧಯೇ ನಮಃ
--------------
ತಿಮ್ಮಪ್ಪದಾಸರು
ಕಾಣಿ ನಿನ್ನಂಥವಳ ಪ. ಮುದ್ದು ರುಕ್ಮಿಣಿಯು ದೂತೆಗೆ ತಿದ್ದಿ ಮಾತುಗಳ ಹೇಳಿ ಬುದ್ಧಿವಂತಳೆ ರಾಯಗ ಸುದ್ದಿ ಹೇಳಮ್ಮ ಹೋಗಿ1 ಮಾನ ಮಾಡಿ ದೂತೆಗೆ ಆನೆ ಅಂಬಾರಿ ಕೊಟ್ಟುನಾನಾ ಭೂಷಣಗಳಿಟ್ಟು ತಾನು ವಸ್ತ್ರಗಳನೆ ಕೊಟ್ಟು2 ಹರದಿ ರುಕ್ಮಿಣಿಯು ದೂತೆಗೆ ತುರಗ ಬಿರುದುಗಳೆ ಕೊಟ್ಟುಎರಗಿ ಹೇಳಮ್ಮ ಅಷ್ಟು ಹಿರಿತನಗಳಟ್ಟು 3 ರಂಗ ಬಂದಿಳಿದಾನೆಂಬೊ ಮಂಗಳವಾರ್ತೆಯಸಂಗೀತಲೋಲರಾಯನ ತಂಗಿಗ್ಹೇಳಮ್ಮ ಹೋಗಿ 4 ಭರದಿ ದ್ರೌಪತಿಗೆ ಮುಯ್ಯಾ ತಿರುಗಿಸಿ ತಂದಾರೆಂದು ಎರಗಿ ಹೇಳಮ್ಮ ಮೈಯ್ಯ ಮರೆತಿರಬ್ಯಾಡಿರೆಂದು5 ಮಂದಗಮನೆಯರು ಮುಯ್ಯ ತಂದಾರೆ ತಾರಾರೆಂದು ಸಂದೇಹ ಬಿಟ್ಟು ಊಟ ಚಂದಾಗಿ ಮಾಡಿರೆಂದು6 ಧೀರರಾಯಗೆ ಮುಯ್ಯ ನಾರಿಯರು ತಂದಾರೆಂದು ಬಾರಿ ಬಾರಿಗೆ ನಮಿಸಿ ಸಾರಿ ಹೇಳಮ್ಮ ಹೋಗಿ 7 ಧಿಟ್ಟೆಯರು ಮುಯ್ಯ ಉತ್ಕøಷ್ಟದಿ ತಂದಾರೆಂದು ಕೃಷ್ಣರಾಯನ ಬಂದದ್ದಷ್ಟು ಹೇಳಮ್ಮ ಹೋಗಿ8 ಇಂದು ರಾಮೇಶನ ಮಡದಿಯರು ಬಂದರು ದ್ವಾರದಿ ಒಂದೊಂದು ಮಾತುರಾಯಗೆ ಚಂದಾಗಿ ಹೇಳಮ್ಮ ಹೋಗಿ9
--------------
ಗಲಗಲಿಅವ್ವನವರು
ತುಳಸಿಯ ಸೇವಿಸಿ ಪ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಮಾಡುವಳು ಯಾತಕನುಮಾನವಯ್ಯ ಅ.ಪ. ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತಿಳಿದು ವೃಂದಾವನ ರಚಿಸಿದರೈಯ1 ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ ನದನದಿಗಳಮರಗಣ | ಮೂರತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು | ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ | ಧರಿಸಿದ ಮನುಜ ಕಾಲನಾಳಿಗೆ ಶೂಲನೊ2 ಉದಯದೊಳಗೆದ್ದು ನೀರೆರೆದು ಮಜ್ಜನಗೈದು | ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು | ತದನಂತರದಲಿ ಭಜನೆ || ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ | ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ | ಜನ್ಮಗಳಘವ ತುದಿ ಮೊದಲು ದಹಿಪುದಯ್ಯ3 ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ | ಆವವನ ಮನೆಯಲ್ಲಿ ಹರಿದಾಸರಾ ಕೂಟ | ಪಾವಮಾನಿಯ ಮತದೊಳು || ಆವವನು ಕಾಂತ್ರಯವ ಕಳೆವ ನಾವಲ್ಲಿ | ವಾಸುದೇವ ಮುನಿ ದೇವಾದಿಗಣ ಸಹಿತ | ಭಾವಿಸಿರಿ ಭಾವಙ್ಞರು 4 ಕಂಡರೆ ದುರಿತಕ್ಕೆ ಕೆಂಡವನು ಬೀರುವುದು | ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-| ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ || ಚಂಡಾಲ ಕೇರಿಯೊಳು ಇರಲು ಹೀನಯವಲ್ಲ | ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು | ಯೋಗ್ಯ ಫಲ ಕಂಡವರಿಗುಂಟೆ ಅಯ್ಯ5 ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ | ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ | ತುಂಬಿ ವಿತ್ತಾದಿಯಲಿ ತಾರದೆ || ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ | ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - | ತರಬೇಕು ಹೊತ್ತು ಮೀರಿಸಲಾಗದೊ6 ಕವಿ ಮಂಗಳವಾರ ವೈಥೃತಿ ವ್ಯತೀಪಾತ ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ ಇವುಗಳಲಿ ತೆಗೆಯಾದಿರಿ ನವವಸನ ಪೊದ್ದು ಊಟವ ಮಾಡಿ ತಾಂಬೂಲ- ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಕೊಂಡಾಡುತಿರಿ ದಿವಸಗಳೊಳಯ್ಯ 7 ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತೊಳೆ ತೊಳೆದು ಏರಿಸಲಿಬಹುದು ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ ತುಳಸಿ ವಿರಹಿತವಾದ ಪೂಜೆಯದು ಸಲ್ಲದು ಮಾಡಿ ಜಲಜಾಕ್ಷನರ್ಚಿಸಿರೈಯ್ಯ 8 ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ ನೆಲೆಯ ನಾ ಕಾಣೆನಯ್ಯ9 ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು ವಿವರವನು ತಿಳಿದರ್ಚಿಸಿ ತವಕದಿಂ ತಂತಮ್ಮ ಘನ ಪದವನೈದಿದರು ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು ನೀಗಿ ಭವದೊರರಾದರೈಯ 10 ಉದಯಕಾಲದೊಳೆದ್ದು ಆವನಾದರು ತನ್ನ ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ ಸಿರಿ ಪ್ರಿಯಳಾದ ಮದನತೇಜಳ ಭಜಿಸಿರೈದು 11
--------------
ವಿಜಯದಾಸ
ನಿಶಿಕಾಂತನು ತೆರಳಿದ ಸುಸೀಲ ಪುರದಿಂದ ಪುರಕೆ ಪ ಪತಿ ಪಿತನ ಪದಸನ್ನಿಧಿಗೆ ಅ.ಪ. ಮಂಗಳಾಂಗ ಮಹ ಮಂಗಳ ಮಹಿಮನು ಮಂಗಳಾಂಗ ಕೊಂಡು ಮಂಗಳವರವನುಮಂಗಳವಾರದಿಗರೆಯುತಮಂಗಳ ಪುರವನು ಬಿಟ್ಟು ಮಂದಗಮನದಿಂದ 1 ರಘುಕುಲ ಯತಿವರ ಪಾದದ್ವಯ ರಾಗದಿಂದಲಿ ಸರನದಿ ಪತಿಪುರ ವರದಾತಟ ಅನುರಾಗದಿ ಹರಣವ ತ್ಯಜಿಶ್ಯಕ್ಷಹರ ಫಲಶರಣರಿಗೀವುತ 2 ಸುಮನಸರೆಲ್ಲರು ಸುಮಮಳೆಗರೆಯುವ ಸಮಯ ಕುಸುಮರ ರಥವೇರಿ ಸೋಮಧರನ ಪದ ಸುಮ್ಮನದಲಿ ಅರ್ಚಿಸುತಲಿ ಸುಸ್ವರ ಮ್ಯಾಳಂಗಳಿಂದಲಿ ಸೋಮವಾರದಿ ತಂದೆವರದಗೋಪಾಲವಿಠಲನ ಸೇವೆಗೆ 3
--------------
ತಂದೆವರದಗೋಪಾಲವಿಠಲರು
ನೋಡಿರಯ್ಯ ಶ್ರೀರಾಮನ ಮೂರ್ತಿಯ ಪಾಡಿರೊ ಮಹಿಮೆಯನು ಪ ಅಗಣಿತ ಮಹಿಮನು ತ್ರಿಗುಣ ವರ್ಜಿತನು ಸುಗುಣೇಂದ್ರತೀರ್ಥರಿಂದ ಬಗೆಬಗೆ ಪೂಜೆಗೊಂಬ 1 ಸಂಜೀವವನು ತಂದ ಅಂಜನಸುತನಯ್ಯ ನಂಜನಗೂಡೊಳಿಪ್ಪ ಕಂಜಾಕ್ಷಕರುಣಿಯ 2 ವಾರಿಜ ಭವಪಿತ ಮಾರುತ ಗತಿಪ್ರಿಯ ವಾರಿಧಿಬಂಧಕ ಶ್ರೀರಮಾಧವನನ್ನು ಮಂಗಳ ಪುರದೊಳು ಮಂಗಳವಾರದಿ ಮಂಗಳದಿ ಮೆರೆದನಂಗನಪಿತನನ್ನು 3 ವರ ರಾಘವೇಂದ್ರರ ಕರುಣಾಗ್ರೇಸರ ಶ್ರೀವತ್ಸಾಂಕಿತನಾದ ಅರವಿದೂರನನ್ನು 4
--------------
ಸಿರಿವತ್ಸಾಂಕಿತರು
ಮಾಯವಾಯಿತು ರತುನ | ಮರೆ ಮೋಸಮಾಡಿ ಪ. ಮಾಯವಾಯಿತು ಎನ್ನ ಮೋಹದ ಮಮ ಗುರುವೆಂತೆಂಬ ರತುನ ನೋಯಲೇಕಿದಕಿನ್ನು ನೃಹರಿ ಉ- ಪಾಯದಿಂದಪಹರಿಸಿವೈದನು ಅ.ಪ. ಕರಗತವಾಗಿ ಇತ್ತು | ಪ್ರಕಾಶವು ಧರಣಿಯಲ್ಲಿ ವ್ಯಾಪಿಸಿತ್ತು ಪರಿಪರಿ ಸಜ್ಜನಕೆ ತತ್ವದ ವರ ಸುಧೆಯನುಣಿಸುತ್ತಲಿತ್ತು ಕರಕರದು ಅಂಕಿತವ ಕೊಡುತಲಿ ಪರಮ ಸಾಧನಗೈಸುತಿತ್ತು 1 ಸುಂದರವಾಗಿ ಇತ್ತು | ದುರ್ಜನರಿಗದ ರಂದ ತೋರದಲೆ ಇತ್ತು ಒಂದೊಂದೂ ಗುಣ ವರ್ಣಿಸಲು ಈ ಮಂದ ಮತಿಗಳವಲ್ಲವಿನ್ನು ತಂದೆ ಮುದ್ದುಮೋಹನಾರೆಂ- ತೆಂದು ಜಗದಲಿ ಮೆರೆಯುತಿತ್ತು 2 ಮಾಸಿ ಪೋದಂಥ ಹರಿ | ದಾಸಕೂಟ ತಾ ಸ್ಥಾಪಿಸುತ ಈ ಪರಿ ವಾಸುದೇವನ ಗುಣಮಣಿಗಳ ರಾಶಿಭೂತದಿ ಅರುಹಿ ಶಿಷ್ಯರ ಸಾಸಿರಾನೂರ್ಮೇಲೆ ಹೆಚ್ಚಿಸಿ ತಾ ಸೂರೆಗೊಂಡಾನಂದವನು3 ಗತಶಾಲಿ ಸಾಹಸ್ರವು | ಮೇಲೆಂಟು ಶತವು ಮತ್ತರವತ್ತೆರಸುವು ವತ್ಸವಿಕ್ರಮ ಪ್ರಥಮ ಮಾಸವು ಪ್ರಥಮ ಪಕ್ಷದ ರಾಮನವಮಿ ಹಿತದಿ ಮಂಗಳವಾರ ಸೂರ್ಯನ ಗತಿಯು ನೆತ್ತಿಯೊಳೋರೆ 4 ಎಷ್ಟು ಪೊಗಳಲಳವು | ಆನಂದ ರತ್ನದ ಗುಟ್ಟರಿಯದು ಜಗವು ಶ್ರೇಷ್ಠ ಗೋಪಾಲಕೃಷ್ಣವಿಠಲನು ಕೊಟ್ಟು ಕಳುಹಿಸಿ ಧರೆಯೊಳ್ಮೆರಸಿ ಥಟ್ಟನೇ ತಾ ಕರೆಸಿಕೊಂಡು ಶ್ರೇಷ್ಠ ಶಯ್ಯೆಯ ಮಾಡಿಕೊಂಡನು 5
--------------
ಅಂಬಾಬಾಯಿ